ಭಾರತ ತಂಡಕ್ಕೆ ಕೇದಾರ್ ಜಾದವ್ ಹಾಗೂ ರವೀಂದ್ರ ಜಡೇಜಾ ಕಮ್’ಬ್ಯಾಕ್ ಮಾಡಿದ್ದು, ರಿಶಭ್ ಪಂತ್ ಹಾಗೂ ಯಜುವೇಂದ್ರ ಚೆಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮೆಕಾಯ್ ಬದಲಿಗೆ ಕೀಮೋ ಪೌಲ್ ತಂಡ ಕೂಡಿಕೊಂಡಿದ್ದಾರೆ.

ಮುಂಬೈ[ಅ.29]: ಭಾರತ-ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು, ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

Add Asianetnews Kannada as a Preferred SourcegooglePreferred
Scroll to load tweet…

ಭಾರತ ತಂಡಕ್ಕೆ ಕೇದಾರ್ ಜಾದವ್ ಹಾಗೂ ರವೀಂದ್ರ ಜಡೇಜಾ ಕಮ್’ಬ್ಯಾಕ್ ಮಾಡಿದ್ದು, ರಿಶಭ್ ಪಂತ್ ಹಾಗೂ ಯಜುವೇಂದ್ರ ಚೆಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮೆಕಾಯ್ ಬದಲಿಗೆ ಕೀಮೋ ಪೌಲ್ ತಂಡ ಕೂಡಿಕೊಂಡಿದ್ದಾರೆ.

5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿತ್ತು, ಆ ಬಳಿಕ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಪುಣೆಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 43 ರನ್'ಗಳಿಂದ ಜಯ ಸಾಧಿಸಿತ್ತು.

ಭಾರತ: 

Scroll to load tweet…

ವೆಸ್ಟ್ ಇಂಡೀಸ್: 

Scroll to load tweet…