ಅಂಧರ ಟಿ20 ಕ್ರಿಕೆಟ್: ಕನ್ನಡಿಗ ಸುನಿಲ್ ಆರ್ಭಟ-ಗೆದ್ದು ಬೀಗಿದ ಭಾರತ
ಅಂಧರ್ ಟಿ20 ಕ್ರಿಕೆಟ್ನಲ್ಲಿ ಕನ್ನಡಿಗ ಸುನಿಲ್ ಆರ್ಭಟಕ್ಕೆ ಭಾರತ ಗೆಲುವಿನ ನಗೆ ಬೀರಿದೆ. ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಮುಂಬೈ(ಅ.17): ದೀಪಕ್ ಮಲಿಕ್ ಭರ್ಜರಿ ಶತಕ ಮತ್ತು ಕನ್ನಡಿಗ ಸುನಿಲ್ ರಮೇಶ್ ಆಲ್ರೌಂಡ್ ಆಟದ ನೆರವಿನಿಂದ ಭಾರತ ಅಂಧರ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 34 ರನ್ಗಳ ಗೆಲುವು ದಾಖಲಿಸಿದೆ.
ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 2 ವಿಕೆಟ್ಗೆ 236 ರನ್ಗಳಿಸಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 20 ಓವರ್ಗಳಲ್ಲಿ 9 ವಿಕೆಟ್ಗೆ 202 ರನ್ಗಳಿಸಿ ಸೋಲೊಪ್ಪಿಕೊಂಡಿತು. ಸಂಕ್ಷಿಪ್ತ ಸ್ಕೋರ್: ಭಾರತ 236/2, ಶ್ರೀಲಂಕಾ 202/9