ಪ್ರತಿಷ್ಠಿತ ಎಎಫ್ಸಿ ಕಪ್ ಟೂರ್ನಿಯಿಂದ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್ಬಾಲ್ ತಂಡ ಹೊರಬಿದ್ದಿದೆ. ಸೆಮಿಫೈನಲ್ ಫೈನಲ್ ಹೋರಾಟದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ನಿರಾಸೆ ಅನುಭಲಿಸಿತು.
ಆ್ಯಶ್ಗ್ಬಾಟ್(ಆ.30): ಇಲ್ಲಿನ ಕೊಪೆಟ್ಡಗ್ ಕ್ರೀಡಾಂಗಣದಲ್ಲಿ ನಡೆದ ಎಎಫ್ಸಿ ಕಪ್ ಅಂತರ ವಲಯ ಸೆಮಿಫೈನಲ್ನಲ್ಲಿ ಆಲ್ಟ್ಯನ್ ಅಸ್ಯಾರ್ ಎಫ್ಕೆ ತಂಡದ ವಿರುದ್ಧ ಸೋಲುಂಡ ಬಿಎಫ್ಸಿ ಏಷ್ಯನ್ ಸ್ಪರ್ಧೆಯಿಂದ ಹೊರಬಿದ್ದಿದೆ.
ಬುಧವಾರ ನಡೆದ ಪಂದ್ಯದಲ್ಲಿ ಆಲ್ಟ್ಯನ್ ಅಸ್ಯಾರ್ 2-0 ಗೋಲಿನಿಂದ ಬಿಎಫ್ಸಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ದ್ವಿತೀಯಾರ್ಧದ ಆಟದ 8 ನಿಮಿಷಗಳ ಅಂತರದಲ್ಲಿ ಆಲ್ಟ್ಯನ್ ತಂಡ 2 ಗೋಲು ದಾಖಲಿಸಿತು.
ಆಲ್ಟಿಮೈರಟ್ (50ನೇ ನಿ.) ಮತ್ತು ವಯಾತ್ (58ನೇ ನಿ.) ಗೋಲುಗಳಿಸಿದರು. ಬಿಎಫ್ಸಿ ಪರ ಯಾರೊಬ್ಬ ಆಟಗಾರರು ಗೋಲುಗಳಿಸಲಿಲ್ಲ. ಈ ಪಂದ್ಯದಲ್ಲಿ ಬೆಂಗಳೂರು ಎಫ್ಸಿ 5-2 ಅಂತರರಿಂದ ಜಯಗಳಿಸಬೇಕಿತ್ತು.
