ಕಳೆದೆರಡು ವರ್ಷಗಳಲ್ಲಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಹಾರವನ್ನೂ ನೀಡಿಲ್ಲ, ಹಾಗೆಯೇ ಐಪಿಎಲ್'ಗೂ ಸೇರಿಸಿಕೊಂಡಿಲ್ಲ.

ನವದೆಹಲಿ(ಅ.25): ನಿಯಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ 2011ರಲ್ಲಿ ಐಪಿಎಲ್ ಪಂದ್ಯಾವಳಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್ ತಂಡವನ್ನು ವಜಾಗೊಳಿಸಿದ್ದ ಪ್ರಕರಣ ಇದೀಗ ಅಂತಿಮ ಘಟ್ಟ ತಲುಪಿದ್ದು, ಕೊಚ್ಚಿ ತಂಡದ ಫ್ರಾಂಚೈಸಿಗಳಿಗೆ ₹ 800 ಕೋಟಿಗೂ ಅಧಿಕ ಪರಿಹಾರ ನೀಡಲೇಬೇಕಾದ ಸ್ಥಿತಿಗೆ ಬಿಸಿಸಿಐ ತಲುಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂಡವನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೊಚ್ಚಿ ತಂಡ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಿವೃತ್ತ ನ್ಯಾ. ಲಹೋಟಿ ನೇತೃತ್ವದ

ಸಮಿತಿ, ಕೊಚ್ಚಿ ತಂಡದ ಮಾಲೀಕರಿಗೆ ₹550 ಕೋಟಿ ಪರಿಹಾರ ನೀಡುವಂತೆ ಸೂಚಿಸಿತ್ತು. ಒಂದೊಮ್ಮೆ ಪರಿಹಾರ ನೀಡುವಲ್ಲಿ ವಿಫಲವಾದರೆ ವರ್ಷಕ್ಕೆ ಶೇ.18ರಷ್ಟು ದಂಡ ತೆರಬೇಕೆಂದು ಎಚ್ಚರಿಸಿತ್ತು.

ಕಳೆದೆರಡು ವರ್ಷಗಳಲ್ಲಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಹಾರವನ್ನೂ ನೀಡಿಲ್ಲ, ಹಾಗೆಯೇ ಐಪಿಎಲ್'ಗೂ ಸೇರಿಸಿಕೊಂಡಿಲ್ಲ.