ಬದ್ಧವೈರಿ ಪಾಕ್ ವಿರುದ್ಧದ ಕ್ರಿಕೆಟ್ ಸರಣಿಗೆ ಬಿಸಿಸಿಐ ಮನವಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆಗೆ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಬಿಸಿಸಿಐ ಆಗ್ರಹಿಸಿದೆ.
ನವದೆಹಲಿ: ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ೨೦೧೨ರಿಂದ ಸ್ಥಗಿತಗೊಂಡಿದ್ದು, ಸರಣಿ ಆಯೋಜನೆಗೆ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಬಿಸಿಸಿಐ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿಮಾಡಿದೆ. ಒಪ್ಪಂದ ಮುರಿದಿರುವ ಕಾರಣ, ₹470 ಕೋಟಿ ಪರಿಹಾರಕ್ಕೆ ಐಸಿಸಿ ಬಳಿ ಅರ್ಜಿ ಸಲ್ಲಿಸಿರುವಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧವಾಗಿ ಹೋರಾಡಲು ಬಿಸಿಸಿಐ ಸಜ್ಜಾಗುತ್ತಿದ್ದು, ಐಸಿಸಿಯ ವಿವಾದ ಪರಿಹಾರ ವೇದಿಕೆ ಮುಂದೆ ಹಾಜರಾಗಲಿದೆ.ಹೀಗಾಗಿ ಮತ್ತೊಮ್ಮೆ ಕೇಂದ್ರದ ನಿಲುವು ಕೇಳಿದೆ.