ಚಿನ್ನ ಗೆದ್ದಿದ್ದಕ್ಕೆ ಕುಕ್ಕೆಯಲ್ಲಿ ಹರಕೆ ತೀರಿಸಿದ ಪೂವಮ್ಮ
ದೇಗುಲದ ಹೊರಾಂಗಣದಲ್ಲಿ ಉರುಳು ಸೇವೆ ಸಲ್ಲಿಸಿದ ಪೂವಮ್ಮ, ಸ್ವಾಮಿಯ ದರ್ಶನ ಪಡೆದು ಶೇಷ ಸೇವೆ ನೆರವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಸುಬ್ರಹ್ಮಣ್ಯ[ಅ.15]: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಓಟಗಾರ್ತಿ ಎಂ.ಆರ್. ಪೂವಮ್ಮ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಉರುಳುಸೇವೆ ಸಲ್ಲಿಸಿದರು.
ಇದನ್ನು ಓದಿ: ರಾಜ್ಯ ಸರ್ಕಾರದಿಂದ ಪೂವಮ್ಮಗೆ ₹ 40 ಲಕ್ಷ ಬಹುಮಾನ
ದೇಗುಲದ ಹೊರಾಂಗಣದಲ್ಲಿ ಉರುಳು ಸೇವೆ ಸಲ್ಲಿಸಿದ ಪೂವಮ್ಮ, ಸ್ವಾಮಿಯ ದರ್ಶನ ಪಡೆದು ಶೇಷ ಸೇವೆ ನೆರವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದರೆ ಉರುಳು ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದೆ. ಇದೀಗ ಪದಕ ಜಯಿಸಿದ್ದು, ಹರಕೆ ತೀರಿಸಲು ಬಂದಿರುವೆ ಎಂದು ಪೂವಮ್ಮ ಹೇಳಿದರು.