Asianet Suvarna News Asianet Suvarna News

ಬಾಂಗ್ಲಾ ಬಗ್ಗುಬಡಿದ ಭಾರತ; ಕಿತ್ತಾಡಿಕೊಂಡ ಸಿಎಸ್’ಕೆ-ಮುಂಬೈ ಇಂಡಿಯನ್ಸ್..!

ನಿನ್ನೆಯಷ್ಟೇ ಮುಕ್ತಾಯವಾದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಮೊದಲ ಪಂದ್ಯ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಶಕೀಬ್ ಅಲ್ ಹಸನ್ ಅವರನ್ನು ರವೀಂದ್ರ ಜಡೇಜಾ ಬಲಿ ಪಡೆದಿದ್ದರು. ಅದರ ಕ್ರೆಡಿಟ್ ಅನ್ನು ಉಭಯ ಐಪಿಎಲ್ ಪ್ರಾಂಚೈಸಿಗಳು ತಮ್ಮ-ತಮ್ಮ ನಾಯಕರಿಗೆ ನೀಡಿವೆ.

Asia Cup Cricket 2018 CSK highlights MS Dhoni smart work after Mumbai Indians praise Rohit Sharma captaincy
Author
Dubai - United Arab Emirates, First Published Sep 22, 2018, 2:30 PM IST

ದುಬೈ[ಸೆ.22]: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ರೀತಿಯಲ್ಲಿಯೇ ಪ್ರದರ್ಶನ ತೋರುತ್ತಿದೆ. ಹಾಂಕಾಂಗ್ ವಿರುದ್ಧ ಸ್ವಲ್ಪ ಬೆವರು ಹರಿಸಿದ್ದು ಬಿಟ್ಟರೆ, ಉಳಿದರಡು ಪಂದ್ಯಗಳನ್ನು ಅನಾಯಾಸವಾಗಿ ಗೆದ್ದುಕೊಂಡಿದೆ.

ಅದರಲ್ಲೂ ನಿನ್ನೆಯಷ್ಟೇ ಮುಕ್ತಾಯವಾದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಮೊದಲ ಪಂದ್ಯ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಶಕೀಬ್ ಅಲ್ ಹಸನ್ ಅವರನ್ನು ರವೀಂದ್ರ ಜಡೇಜಾ ಬಲಿ ಪಡೆದಿದ್ದರು. ಅದರ ಕ್ರೆಡಿಟ್ ಅನ್ನು ಉಭಯ ಐಪಿಎಲ್ ಪ್ರಾಂಚೈಸಿಗಳು ತಮ್ಮ-ತಮ್ಮ ನಾಯಕರಿಗೆ ನೀಡಿವೆ.

ಅಷ್ಟಕ್ಕೂ ಆಗಿದ್ದೇನು..?

ಮೊದಲ 6 ಓವರ್’ಗಳೊಳಗಾಗಿ ಬಾಂಗ್ಲಾದೇಶದ ಆರಂಭಿಕರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಕ್ರೀಸ್’ಗಿಳಿದ ಅನುಭವಿ ಬ್ಯಾಟ್ಸ್’ಮನ್ ಶಕೀಬ್ ಅಲ್ ಹಸನ್ ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದರು. ಈ ವೇಳೆ 10 ಓವರ್’ನಲ್ಲಿ ದಾಳಿಗಿಳಿದ ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಅಪಾಯದ ಮುನ್ಸೂಚನೆ ನೀಡಿದರು. ಈ ವೇಳೆ ಮಾಜಿ ನಾಯಕ ಧೋನಿ ಸ್ಕ್ವೇರ್’ಲೆಗ್’ನಲ್ಲಿ ಧವನ್ ನಿಲ್ಲಿಸುವಂತೆ ರೋಹಿತ್’ಗೆ ಸಲಹೆ ನೀಡಿದರು. ಅದರಂತೆ ನಾಯಕ ರೋಹಿತ್ ಸ್ಲಿಪ್’ನಲ್ಲಿದ್ದ ಧವನ್ ಅವರನ್ನು ಸ್ಕ್ವೇರ್’ಲೆಗ್’ನಲ್ಲಿ ನಿಲ್ಲಿಸಿದರು. ಮರು ಎಸೆತದಲ್ಲೇ ಮತ್ತೊಂದು ಬೌಂಡರಿ ಬಾರಿಸುವ ಯತ್ನದಲ್ಲಿ ಶಕೀಬ್ ಸ್ಕ್ವೇರ್’ಲೆಗ್’ನಲ್ಲಿದ್ದ ಧವನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಈ ಯಶಸ್ಸಿನ ಕ್ರೆಡಿಟ್ ಅನ್ನು ಮುಂಬೈ ಇಂಡಿಯನ್ಸ್ ತಂಡ ತನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ನೀಡಿದ್ದರೆ, ಚೆನ್ನೈ ಸೂಪರ್’ಕಿಂಗ್ಸ್ ತಂಡ ತನ್ನ ನಾಯಕ ಎಂ.ಎಸ್ ಧೋನಿಗೆ ಆ ಕ್ರೆಡಿಟ್ ನೀಡಿದೆ.

ಅಷ್ಟಕ್ಕೂ ಯಾರಿಗೆ ಈ ಕ್ರೆಡಿಟ್ ನೀಡಬೇಕು ಎನ್ನೋದು ನೀವಾದ್ರೂ ಹೇಳಿ.. 
 

 

Follow Us:
Download App:
  • android
  • ios