Asianet Suvarna News Asianet Suvarna News

ಬೇಷರತ್ ಕ್ಷಮೆಯಾಚಿಸಿದ ಅನುರಾಗ್ ಠಾಕೂರ್

ಬಿಸಿಸಿಐ ಸ್ವಾಯತ್ತತೆಯ ಕುರಿತಂತೆ ಐಸಿಸಿಗೆ ಅನುರಾಗ್ ಠಾಕೂರ್ ಸಲ್ಲಿಸಿರುವ ಸುಳ್ಳು ಅಫಿಡೇವಿಟ್'ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಳೆದ ಜನವರಿ 2ರಂದು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕುರಿತು ವಿಚಾರಣೆ ಆರಂಭಿಸಿತ್ತು.

Anurag Thakur files apology before Supreme Court

ನವದೆಹಲಿ(ಜು.13): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ.ಖಾನ್‌ವಿಲ್ಕರ್, ಡಿ.ವೈ.ಚಂದ್ರಾಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಈ ಹಿಂದೆ ಅನುರಾಗ್ ಸಲ್ಲಿಸಿದ್ದ ಕ್ಷಮಾಪಣಾ ಅಫಿಡೇವಿಟ್ ಅನ್ನು ತಿರಸ್ಕರಿ ಜು.14ರಂದು ಖುದ್ದು ಹಾಜರಾಗಿ ಕ್ಷಮಾಪಣೆ ಕೋರುವಂತೆ ಆದೇಶಿಸಿತ್ತು. ಮತ್ತೊಮ್ಮೆ ಚಿಕ್ಕದಾದ ಕ್ಷಮಾಪಣಾ ಅಫಿಡೆವಿಟ್ ಸಲ್ಲಿಸುವಂತೆಯೂ ಸೂಚಿಸಿತ್ತು. ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡದ ಕಾರಣಕ್ಕಾಗಿ ಅನುರಾಗ್ ವಿರುದ್ಧ ಕಳೆದ ವರ್ಷ ನ್ಯಾಯಾಂಗ ನಿಂದನೆ ಆರೋಪ ದಾಖಲಿಸಲಾಗಿತ್ತು.

ಬಿಸಿಸಿಐ ಸ್ವಾಯತ್ತತೆಯ ಕುರಿತಂತೆ ಐಸಿಸಿಗೆ ಅನುರಾಗ್ ಠಾಕೂರ್ ಸಲ್ಲಿಸಿರುವ ಸುಳ್ಳು ಅಫಿಡೇವಿಟ್'ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಳೆದ ಜನವರಿ 2ರಂದು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕುರಿತು ವಿಚಾರಣೆ ಆರಂಭಿಸಿತ್ತು.

Latest Videos
Follow Us:
Download App:
  • android
  • ios