ಕಾನ್ಪುರ(ಸೆ.22): ಭಾರತೀಯ ಕ್ರಿಕೆಟ್ ಲೋಕಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಭಾರತ ತನ್ನ 500ನೇ ಟೆಸ್ಟ್ ಪಂದ್ಯವನ್ನು ಕಾನ್ಪುರದಲ್ಲಿ ಆಡಲಿದೆ. ಇದಕ್ಕಾಗಿ ಕ್ರೀಡಾಂಗಣ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.
ಈ ಐತಿಹಾಸಿಕ ಪಂದ್ಯವನ್ನು ಗೆಲ್ಲಿಸಿಕೊಡುವ ಒತ್ತಡ ವಿರಾಟ್ ಕೊಹ್ಲಿ ಮೇಲಿದ್ದು, ಕಿವೀಸ್ ಸವಾಲ್ ಎಸೆಯಲಿದೆ. ಇನ್ನು ಟೆಸ್ಟ್ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರೊಂದಿಗೆ ಮಾಜಿ ಟೆಸ್ಟ್ ನಾಯಕರುಗಳಿಗೆ ಔತಣಕೂಟವನ್ನು ಏರ್ಪಡಿಸಿದೆ. ಆದರೆ, ಬಿಸಿಸಿಐ ಎಲ್ಲಾ ಯೋಜಗಳಿಗೂ ವರುಣದೇವ ತಣ್ಣೀರೆರಚುವ ಸಾಧ್ಯತೆಯಿದ್ದು, ಟೆಸ್ಟ್ಗೆ ಮಳೆ ಅಡ್ಡಿ ಯಾಗಲಿದೆ ಎನ್ನಲಾಗಿದೆ.
