Asianet Suvarna News Asianet Suvarna News

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಶಾಸಕ ಹಾಲಪ್ಪ

ಸಾಗರ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಅಸ್ಪತ್ರೆ ಗೆ ದಾಖಲು ಮಾಡಲು ಹಾಲಪ್ಪ ನೆರವಾಗಿದ್ದಾರೆ.

Sagar MLA H Halappa Helps Injured people
Author
Bengaluru, First Published Jun 19, 2019, 7:47 PM IST

ಸಾಗರ[ಜೂ. 19] ಸಾಗರ ಪಟ್ಟಣದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚೋರಡಿ ಸೇತುವೆ ಬಳಿ ವೇಗವಾಗಿ ಬರುತ್ತಿದ್ದ ಟೂರಿಸ್ಟ್ ವಾಹನ ಚಾಲಕನ ಅಜಾಗರುಕತೆಯಿಂದ ಪಲ್ಟಿ ಯಾಗಿತ್ತು. ಇದನ್ನು ಕಂಡು ತಕ್ಷಣ ಅಪಘಾತದಲ್ಲಿ ಗಾಯಗೊಂಡವರ ಸಹಾಯಕ್ಕೆ ಸಾಗರ ಶಾಸಕ ಹರತಾಳು  ಬಂದಿದ್ದಾರೆ.

108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಕುಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"

Follow Us:
Download App:
  • android
  • ios