ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 8 ಅಂಕ ಸಂಪಾದಿಸಿದೆ. ತಂಡ ಈ ಪಂದ್ಯ ದಲ್ಲಿ ಗೆದ್ದರೆ ಕೊನೆ ಸ್ಥಾನ ದಿಂದ ಮೇಲೇರುವ ಸಾಧ್ಯತೆಗಳಿವೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
Cricket May 17, 2024, 11:20 AM IST
ಗುರುವಾರ ಸಂಜೆಯಿಂದಲೇ ಸುರಿಯುತ್ತಿದ್ದ ಮಳೆ ರಾತ್ರಿ 10 ಗಂಟೆವರೆಗೂ ಬಿಡುವು ನೀಡದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದ ಇತ್ತಂಡಕ್ಕೂ ತಲಾ 1 ಅಂಕ ಲಭಿಸಿದವು. ಸನ್ರೈಸರ್ಸ್ 13 ಪಂದ್ಯಗಳಲ್ಲಿ ಅಂಕ ಗಳಿಕೆಯನ್ನು 15ಕ್ಕೆ ಹೆಚ್ಚಿಸಿ, ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.
Cricket May 17, 2024, 9:45 AM IST
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಹೀಗಿರುವಾಗಲೇ ದಿನದಿಂದ ಪ್ಲೇ ಆಫ್ ಲೆಕ್ಕಾಚಾರ ಜೋರಾಗುತ್ತಿದೆ. ಹೀಗಿರುವಾಗ ಯಾವ ತಂಡಕ್ಕೆ ಪ್ಲೇ ಆಫ್ಗೇರಲು ಎಷ್ಟು % ಅವಕಾಶವಿದೆ ನೋಡೋಣ ಬನ್ನಿ.
Cricket May 16, 2024, 5:00 PM IST
ರನ್ ಮಷಿನ್ ವಿರಾಟ್ ಕೊಹ್ಲಿ, 16 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ದೇಶ-ವಿದೇಶಗಳಲ್ಲಿ ಅದ್ಭುತ ಇನ್ನಿಂಗ್ಸ್ಗಳ ಮೂಲಕ ಅಬ್ಬರಿಸಿದ್ದಾರೆ. ಆದ್ರೆ, ಆ ಒಂದು ದಿನ ಕೊಹ್ಲಿನ ಕಟ್ಟಿಹಾಕೋದು ಸುಲಭ ಮಾತಲ್ಲ.
Cricket May 16, 2024, 4:04 PM IST
ಐಪಿಎಲ್ನಲ್ಲಿ RCB-CSK ಮ್ಯಾಚ್ ಅಂದ್ರೆ, ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಂತೆ ಅಂದ್ರು ತಪ್ಪಿಲ್ಲ. ತಮ್ಮ ತಂಡ ಕಪ್ ಗೆಲ್ಲದಿದ್ರು ಪರ್ವಾಗಿಲ್ಲ, ಈ ಪಂದ್ಯ ಗೆಲ್ಲಲೇಬೇಕು ಅಂತ ಎರಡೂ ತಂಡಗಳ ಅಭಿಮಾನಿಗಳು ಪ್ರಾರ್ಥಿಸ್ತಾರೆ. ಈ ಬಾರಿಯ IPLನಲ್ಲಿ ಎರಡು ತಂಡಗಳು ಬಿಗ್ಫೈಟ್ಗೆ ರೆಡಿಯಾಗಿದ್ದು, ಗೆದ್ದು ಪ್ಲೇ ಆಫ್ಗೆ ಎಂಟ್ರಿ ನೀಡಲು ಎದುರು ನೋಡ್ತಿವೆ.
Cricket May 16, 2024, 2:50 PM IST
ಸನ್ರೈಸರ್ಸ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಸಂಪಾದಿಸಿದೆ. ತಂಡದ ನೆಟ್ ರನ್ರೇಟ್(+0.406) ಕೂಡಾ ಉತ್ತಮವಾಗಿರುವುದರಿಂದ ಪ್ಲೇ-ಆಫ್ನ ಸನಿಹದಲ್ಲಿದೆ. ಇನ್ನೆರಡು ಪಂದ್ಯಗಳನ್ನೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ತಂಡದ ಮುಂದಿರುವ ಗುರಿ. ಎರಡೂ ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್ ರೇಸ್ನಿಂದ ಹೊರಬೀಳುವ ಸಾಧ್ಯತೆಯೂ ಇದೆ.
Cricket May 16, 2024, 12:37 PM IST
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು 144 ರನ್. ಜೈಸ್ವಾಲ್ 4, ಕೊಹ್ಲೆರ್ ಕ್ಯಾಡ್ಮೊರ್ 18, ಸಂಜು ಸ್ಯಾಮ್ಸನ್ 18ಕ್ಕೆ ನಿರ್ಗಮಿಸಿದರು. ಈ ಹಂತದಲ್ಲಿ ತಂಡಕ್ಕೆ ನೆರವಾಗಿದ್ದು ರಿಯಾನ್ ಪರಾಗ್. ಅವರು 34 ಎಸೆತಗಳಲ್ಲಿ 48 ರನ್ ಸಿಡಿಸಿದ್ದರಿಂದ ತಂಡ 150ರ ಸನಿಹಕ್ಕೆ ತಲುಪಿತು.
Cricket May 16, 2024, 9:11 AM IST
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಹಾಲಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಅರ್ಹರು ಅರ್ಜಿ ಸಲ್ಲಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ ಟೀಂ ಇಂಡಿಯಾ ಅಭಿಮಾನಿಯೊಬ್ಬ ಕೋಚ್ ಹುದ್ದೆಗೆ ಅರ್ಜಿ ಹಾಕಿ ಬಿಸಿಸಿಐಗೆ ಠಕ್ಕರ್ ನೀಡಿದ್ದಾನೆ. ಇಷ್ಟೇ ಅಲ್ಲ ನನ್ನ ಮಾರ್ಗದರ್ಶನದಲ್ಲಿ 2027ರ ವಿಶ್ವಕಪ್ ಭಾರತ ಗೆಲ್ಲಲಿದೆ ಎಂದಿದ್ದಾನೆ.
Cricket May 15, 2024, 4:05 PM IST
ಮಂಗಳವಾರ ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರಲ್ಲಿ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಮೊದಲ ಓವರಲ್ಲೇ ಜೇಕ್ ಪ್ರೇಸರ್ (0) ವಿಕೆಟ್ ಕಳೆದುಕೊಂಡರೂ, ಅಭಿಷೇಕ್ ಪೊರೆಲ್ (58) ಹಾಗೂ ಟ್ರಿಸ್ಟನ್ ಸ್ಟಬ್ (57*)ರ ಅರ್ಧಶತಕಗಳು ಡೆಲ್ಲಿಗೆ ನೆರವಾಯಿತು.
Cricket May 15, 2024, 8:49 AM IST
ಡೆಲ್ಲಿ ಹಾಗೂ ಲಖನೌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಿದೆ. ಸನ್ರೈಸರ್ಸ್ ಎದುರು ಹೀನಾಯ ಸೋಲು ಅನುಭವಿಸಿದ್ದ ಲಖನೌ, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಇನ್ನು ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಇದೀಗ ತಂಡ ಕೂಡಿಕೊಂಡಿದ್ದಾರೆ.
Cricket May 14, 2024, 7:09 PM IST
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟದತ್ತ ಸಾಗುತ್ತಿರುವುದು ಒಂದು ಕಡೆಯಾದರೆ, ಪ್ಲೇ ಆಫ್ ರೇಸ್ ದಿನದಿಂದ ದಿನಕ್ಕೆ ರೋಚಕತೆಯನ್ನುಂಟು ಮಾಡುತ್ತಿದೆ. ಇದೀಗ 3 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆರ್ಸಿಬಿ ಸೇರಿದಂತೆ ಎಲ್ಲಾ ತಂಡಗಳ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ನೋಡಿ.
Cricket May 14, 2024, 6:17 PM IST
ಕಳೆದ ವಾರ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಲಖನೌ ಎದುರು ಆರೆಂಜ್ ಆರ್ಮಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಹತ್ವದ ಪಂದ್ಯ ಎನಿಸಿಕೊಂಡಿದ್ದ ಆ ಮ್ಯಾಚ್ನಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತವರಿನಲ್ಲಿಯೇ ದಯನೀಯ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ತಾಳ್ಮೆ ಕಳೆದುಕೊಂಡ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮೈದಾನದಲ್ಲಿಯೇ ನಾಯಕನ ಕೆಲವು ನಿರ್ಧಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
Cricket May 14, 2024, 4:04 PM IST
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿರುವ ಬೆನ್ನಲ್ಲೇ ಇಂಗ್ಲೆಂಡ್ ಸ್ಟಾರ್ ಆಟಗಾರರು ನ್ಯಾಷನಲ್ ಡ್ಯೂಟಿಗೋಸ್ಕರ ಐಪಿಎಲ್ ತಂಡಗಳನ್ನು ತೊರೆದಿದ್ದಾರೆ. ಇದು ಐಪಿಎಲ್ನ ಕೆಲ ತಂಡಗಳ ಪಾಲಿಗೆ ಬಲವಾದ ಹೊಡೆತ ಬೀಳುವಂತೆ ಮಾಡಿದೆ. ಯಾವ ತಂಡಕ್ಕೆ ದೊಡ್ಡ ಲಾಸ್ ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
Cricket May 14, 2024, 3:03 PM IST
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಆಡಿತು. ಈ ಪಂದ್ಯ ಮುಕ್ತಾಯದ ಬಳಿಕ ಫ್ರಾಂಚೈಸಿಯು ತನ್ನ ತಂಡದ ಎಲ್ಲಾ ಆಟಗಾರರಿಗೆ ಸನ್ಮಾನಿಸುವುದರ ಜತೆಗೆ ಪದಕಗಳನ್ನು ಹಾಕಿ ಗೌರವಿಸಿತು. ಇನ್ನು ಧೋನಿ ಕೂಡಾ ಮೈದಾನದಲ್ಲಿದ್ದ ಸಿಎಸ್ಕೆ ಅಭಿಮಾನಿಗಳಿಗೆ ತಮ್ಮ ಸಹಿ ಇರುವ ಟೆನಿಸ್ ಬಾಲ್ಗಳನ್ನು ನೀಡುವ ಮೂಲಕ ಸ್ಮರಣೀಯ ಗಿಫ್ಟ್ ನೀಡಿದರು. ಇದೆಲ್ಲ ಗಮನಿಸಿದ ಬಳಿಕ ಇದು ಧೋನಿ ಪಾಲಿನ ಕೊನೆಯ ಐಪಿಎಲ್ ಎಂದೇ ಕ್ರಿಕೆಟ್ ಪಂಡಿತರು ಊಹಿಸಿಕೊಳ್ಳುತ್ತಿದ್ದಾರೆ.
Cricket May 14, 2024, 1:11 PM IST
ಭಾನುವಾರ ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಕನ್ನಡದಲ್ಲಿ 'ನಮಸ್ಕಾರ ಬೆಂಗಳೂರು, ಭೇಟಿಯಾಗೋಣ ಚಿನ್ನಸ್ವಾಮಿಯಲ್ಲಿ' ಎಂದು ಬರೆದಿತ್ತು.
Cricket May 14, 2024, 11:34 AM IST