ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ಕೊರೋನಾ ಇರುವ ಕಾರಣ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದಾರಂತೆ. ಹೇಗಿದೆ ನೋಡಿ ರಶ್ಮಿಕಾ ಲವ್ಲಿ ಫ್ಯಾಮಿಲಿ....
Sandalwood Jun 23, 2020, 12:43 PM IST
ಕೊರೊನಾ ವಾರಿಯರ್ಸ್ಗೂ ಮಹಾಮಾರಿ ಕಾಡುತ್ತಿದೆ. ಖಾಕಿ ಕೋಟೆಗೂ ಲಗ್ಗೆ ಇಟ್ಟಿದೆ. ರಾಜ್ಯದ 17 ಪೊಲೀಸ್ ಠಾಣೆಗಳಿಗೆ ಕೊರೊನಾ ಎಂಟ್ರಿ ಕೊಟ್ಟಿದೆ. ಹತ್ತಲ್ಲ, ಇಪ್ಪತ್ತಲ್ಲ, 125 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 72 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. 62 ಸಕ್ರಿಯ ಪ್ರಕರಣಗಳಿವೆ. 7 ಮಂದಿ ಗುಣಮುಖರಾಗಿದ್ದಾರೆ. ಜನರ ಹಿತವನ್ನು ಕಾಯುವ ಆರಕ್ಷರಿಗೆ ಸೋಂಕು ತಗುಲಿರುವುದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.
state Jun 23, 2020, 11:42 AM IST
ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಆತಂಕ ಕೂಡಾ ಹೆಚ್ಚಾಗುತ್ತಿದೆ. ಏತನ್ಮಧ್ಯೆ ಇಡೀ ರಾಜ್ಯವೇ ಸಂತಸಪಡುವ ಸುದ್ದಿ ಇದು. ಕೋವಿಡ್ 19 ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆಯಾಗಿದ್ದು, ಕೊರೊನಾ ಹೋರಾಟಕ್ಕೆ ಖಾಸಗಿ ಆಸ್ಪತ್ರೆಗಳು ಅಖಾಡಕ್ಕಿಳಿದಿವೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳು ಶಿಫ್ಟ್ ಆಗಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆಗೆ ದರ ನಿಗದಿಯಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆ ಮುಖ್ಯ ಕಾರ್ಯದರ್ಶಿ ಜೊತೆ ಸಭೆ ಕರೆಯಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 23, 2020, 10:33 AM IST
ದಿನೇ ದಿನೇ ಹೆಚ್ಚಾಗುತ್ತಿದೆ ಕೊರೋನಾ ಅಟ್ಟಹಾಸ| ಬೆಂಗಳೂರಿನ ನಾಲ್ಕು ವಾರ್ಡ್ಗಳು ಸೀಲ್ಡೌನ್| ಸೀಲ್ಡೌನ್ ಬೇಡ ಬೆಂಗಳೂರಿನಾದ್ಯಂತ ಇಪ್ಪತ್ತು ದಿನ ಲಾಕ್ಡೌನ್ ಘೋಷಿಸಿ ಎಂದ ಮಾಜಿ ಸಿಎಂ
state Jun 23, 2020, 9:10 AM IST
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 14 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೇರಿದೆ.
Karnataka Districts Jun 23, 2020, 7:41 AM IST
ಲಾಕ್ ಡೌನ್ ಕಾರಣಕ್ಕೆ ಮದ್ಯ ಮಾರಾಟ ಸ್ಥಗಿತವಾಗಿದ್ದು ನಂತರ ಆರಂಭ ಮಾಡಲಾಗಿತ್ತು. ಈ ನಡುವೆ ಅಮೆಜಾನ್ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಅನುಮತಿ ಪಡೆದುಕೊಂಡಿದೆ.
India Jun 22, 2020, 7:57 PM IST
ಚಿಕ್ಕಪೇಟೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ. ಆದರೆ ಇದರ ಕುರಿತಂತೆ ವಿರೋಧಗಳು ವ್ಯಕ್ತವಾಗಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 22, 2020, 7:16 PM IST
ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಒಂದು ಲೆಕ್ಕಾಚಾರದ ಪ್ರಕಾರ ಆಗಸ್ಟ್ನಲ್ಲಿ ಒಂದೂವರೆ ಲಕ್ಷ ಜನರಿಗೆ ಕೊರೊನಾ ಪಾಸಿಟೀವ್ ಬರಬಹುದು. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮವನ್ನು ಸಡಿಲಿಸಿದ್ದೇ ಸಡಿಲಿಸಿದ್ದು. ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್ ವೇಳೆಗೆ ಯಾಕೆ ಹೆಚ್ಚಾಗಲಿದೆ? ಇಲ್ಲಿದೆ ನೋಡಿ..!
state Jun 22, 2020, 7:09 PM IST
ಕೊರೋನಾ ಮಹಾಮಾರಿ ಬೆಂಗಳೂರು ಪೊಲೀಸರ ಬೆನ್ನು ಹತ್ತಿದೆ. ಒಟ್ಟು 72 ಪೊಲೀಸರಿಗೆ ಕೊರೋನಾ ಇದೆ. ಸೋಮವಾರ ಆರು ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಬೆಂಗಳೂರಿನ ಆರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
Karnataka Districts Jun 22, 2020, 7:07 PM IST
ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಇದೀಗ ಹೆಚ್ಚು ಜನ ಸೇರುವ ಜಾಗಗಳೇ ಡೇಂಜರ್ ಆಗಿದ್ದು, ಜನಸಾಂದ್ರತೆ ಇರುವ ಜಾಗಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಗಾಂಧಿ ಬಜಾರ್, ಜಯನಗರ ಕಾಂಪ್ಲೆಕ್ಸ್ಗಳಲ್ಲಿ ಹೆಚ್ಚು ಜನ ಸಾಂದ್ರತೆ ಇದ್ದು ಶಿಫ್ಟ್ ಮಾಡುವ ಯೋಚನೆ ಎದುರಿಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 6:57 PM IST
ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ. ಮತ್ತೆ ಶಾಲೆ ಶಾಲೆ ಪುನಾರಂಭ ಮತ್ತು ಮತ್ತೆ ಲಾಕ್ಡೌನ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಲುವು ಏನಿದೆ ಎನ್ನುವುದನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಹಂಚಿಕೊಂಡಿದ್ದಾರೆ.
state Jun 22, 2020, 5:54 PM IST
ಗಡಿಭಾಗದಲ್ಲಿ ಪದೇ ಪದೇ ತಂಟೆ ತೆಗೆದು ಇಡೀ ದೇಶದ ನೆಮ್ಮದಿ ಹಾಳು ಮಾಡುವ ಚೀನಾ ಗೆ ಪಾಠ ಕಲಿಸಲೇಬೇಕು. ಸೈನಿಕರು ಗಡಿಯಲ್ಲಿ ಹೋರಾಡಿದರೆ ನಾವು ಚೀನಾ ವಸ್ತು ಬೈಕಾಟ್ ಮಾಡಿ ಆರ್ಥಿಕ ಹೊಡೆತಕ್ಕೆ ನಾಂದಿ ಹಾಡುತ್ತೇವೆ. ಇನ್ಮುಂದೆ ನಮಗೆ ಬೇಕಾದ ಕಚ್ಚಾ ವಸ್ತುಗಳನ್ನ ಕೊರಿಯಾ, ತೈವಾನ್, ಹಾಂಕಾಗ್ ನಿಂದ ಪಡೆಯುತ್ತೇವೆ ಎಂದು ಬಳ್ಳಾರಿ ಜೀನ್ಸ್ ಉದ್ಯಮಿಗಳೂ #BoycottChina ಅಭಿಯಾನ ಶುರು ಮಾಡಿದ್ದಾರೆ.
state Jun 22, 2020, 5:39 PM IST
ಸ್ಯಾಂಡಲ್ವುಡ್ 'ಕಿರಿಕ್ ಪಾರ್ಟಿ'ಯ ರಕ್ಷಿತ್ ಶೆಟ್ಟಿ ಲಾಕ್ಡೌನ್ ಇದ್ದ ಕಾರಣ ಮನೆಯಲ್ಲಿಯೇ ತಮ್ಮ ಮುಂದಿನ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದರು. ತಾವೇ ಅಡುಗೆ ಮಾಡಿಕೊಂಡು ಸವಿದಿದ್ದಾರೆ. ಆದರೆ ಈಗ ಅದೇ ರಕ್ಷಿತ್ ನೋಡೋಕೆ ಬದಲಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೇಗಿದೆ ಈ ಹೊಸ ಲುಕ್?
Sandalwood Jun 22, 2020, 4:51 PM IST
ಮತ್ತೊಮ್ಮೆ ಲಾಕ್ಡೌನ್ ಮಾಡಲ್ಲ. ಯಾರಿಗೂ ಭಯಬೇಡ. ಕೊರೊನಾ ವೈರಸ್ ನಮ್ಮ ಜೊತೆಯೇ ಇರುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ತೆರೆ ಎಳೆದಿದ್ದಾರೆ.
state Jun 22, 2020, 3:39 PM IST
ಕೊರೋನಾ ಲಾಕ್ಡೌನ್ ಕಾರಣದಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ಮಂಗಳೂರಿಗೆ ಎರಡು ವಿಮಾನಗಳು ಆಗಮಿಸಿವೆ.
NRI Jun 22, 2020, 3:06 PM IST