ಬೆಂಗಳೂರಿನ ಕೆಲ ಏರಿಯಾಗಳನ್ನ ಈಗಾಗಲೇ ಸೀಲ್ಡೌನ್ ಮಾಡಲಾಗಿದ್ದು, ಇದೀಗ ಇಡೀ ಬೆಂಗಳೂರನ್ನ ಲಾಕ್ಡೌನ್ ಮಾಡು ಬಗ್ಗೆ ಚರ್ಚೆಗಳು ನಡೆದಿವೆ.
Karnataka Districts Jun 24, 2020, 7:17 PM IST
ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು.
Karnataka Districts Jun 24, 2020, 6:47 PM IST
ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚು ಹರಡುತ್ತಿದ್ದು, ಮತ್ತೊಮ್ಮೆ ಲಾಕ್ಡೌನ್ ಮಾಡಬೇಕಾ ಎಂಬ ವಿಷಯ ವ್ಯಾಪಕವಾಗಿ ಚರ್ಚೆಯಾಗ್ತಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
state Jun 24, 2020, 3:25 PM IST
70 ದಿನ ಲಾಕ್ಡೌನ್ ಮಾಡಿದ್ದರಿಂದ ಕೊರೋನಾ ವೈರಸ್ ಹೋಯ್ತಾ?ಯಾರಾದ್ರೂ ಹರಡಿಸುತ್ತಾನೇ ಇರುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರು ಹೇಳಿದ್ದಾರೆ. ಲಾಕ್ಡೌನ್ ಪರಿಹಾರಾನಾ ಎಂಬುದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
Karnataka Districts Jun 24, 2020, 3:08 PM IST
ಸಂಚಾರ ವ್ಯವಸ್ಥೆಗೆ ಈಗಾಗಲೇ BMTC, KSRTC ಬಸ್ ಬಿಡಲಾಗಿದೆ. ಹೀಗಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಿರುವಾಗ ಮೆಟ್ರೋ ಸಂಚಾರ ಆರಂಭಿಸುವುದು ಬೇಡ ಎಂದು ಕೆಲವು ಸಚಿವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ ಎನ್ನುವುದರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 24, 2020, 2:44 PM IST
ಕೊರೋನಾ ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಕರುನಾಡಿನಲ್ಲಿ ದಿನೇದಿನೇ ವ್ಯಾಪಾರವಹಿವಾಟು ನೆಲಕಚ್ಚುತ್ತಿವೆ.ಇದಕ್ಕೆ ಮನರಂಜನಾ ಮಾಧ್ಯಮ ,ಸಿನಿಮಾ ಚಿತ್ರೀಕರಣ,ಚಿತ್ರಮಂದಿರಗಳು ಹೊರತಾಗಿಲ್ಲ.ಪ್ರತಿದಿನ ನಮ್ಮೆಲ್ಲರನ್ನೂ ೨ ರಿಂದ ೩ ಗಂಟೆಗಳ ಕತ್ತಲ ಕೋಣೆಯಲ್ಲಿ ರಂಜಿಸುತ್ತಿದ್ದ,ಬೇಸರ,ನಗು,ಅಳು,ವ್ಯಂಗ್ಯ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ನಗುನಗುತ್ತಾ ಪ್ರದರ್ಶಿಸುತ್ತಿದ್ದ ಬೆಳ್ಳಿಪರದೆ ಇಂದು ಬೆಳಕನ್ನೇ ಕಾಣದ ಬಡಪಾಯಿಯಂತಾಗಿದೆ.ಯಾವ ಸ್ಟಾರ್ ನಟರ ಸಿನಿಮಾಗಳು ಇಲ್ಲದೆಯೂ ಶತಕ ಬಾರಿಸಿದೆ.ಇಷ್ಟೆಲ್ಲಾ ಪೀಠಿಕೆಗೆ ಕಾರಣವೇನೆಂದರೆ ಥಿಯೇಟರ್ ಗಳು ಬಾಗಿಲು ಮುಚ್ಚಿಕೊಂಡು ಇಂದಿಗೆ ಸರಿಯಾಗಿ ನೂರು ದಿನಗಳಾಗಿವೆ.
News Jun 24, 2020, 2:42 PM IST
ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆಯಿಂದ ಧೈರ್ಯಗುಂದಿ ಕೆಎಸ್ಆರ್ಪಿ ಸಿಬ್ಬಂದಿಗೆ ಐಪಿಎಸ್ ಅಲೋಕ್ ಕುಮಾರ್ ಧೈರ್ಯ ತುಂಬಿದ್ದಾರೆ. ಕ್ವಾರೆಂಟೈನ್ನಲ್ಲಿರುವ ಸಿಬ್ಬಂದಿಯನ್ನು ಭೇಟಿಯಾಗಿ ಯೋಗವನ್ನೂ ಕಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ.
Karnataka Districts Jun 24, 2020, 12:28 PM IST
ನಾಳೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್ಡೌನ್ ಜಾರಿಯ ಸಂಬಂಧ ಪ್ರಮುಖ ತೀರ್ಮಾನ ನಾಳೆ ಹೊರ ಬೀಳಲಿದೆ. ಮಹಾನಗರಿಯಲ್ಲಿ ಈಗಾಗಲೇ ಕೊರೋನಾ ಅಟ್ಟಹಾಸ ಅಪಾಯಕಾರಿಯಾಗಿ ಮುಂದುವರಿದ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ ಇನ್ನಷ್ಟು ತಡವಾಗಲಿದೆಯಾ..? ಇಲ್ಲಿ ಓದಿ
Karnataka Districts Jun 24, 2020, 11:46 AM IST
ರಾಮನಗರದಲ್ಲಿ ಕಳೆದ 20 ದಿನಗಳಲ್ಲಿ ಸೋಂಕು 100 ರ ಗಡಿ ದಾಟಿದೆ. ಇಂದಿನಿಂದ ರಾಮನಗರವನ್ನು ಲಾಕ್ಡೌನ್ ಮಾಡಲು ಜನ ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದಾರೆ. ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ ಅಂಗಡಿಗಳು ಓಪನ್ ಆಗಿರಲಿವೆ. ಜುಲೈ 1 ರವರೆಗೂ ಕೂಡಾ ರಾಮನಗರ ಲಾಕ್ಡೌನ್ ಆಗಿರಲಿದೆ. ನಿನ್ನೆ ಮಾಗಡಿ ಲಾಕ್ಡೌನ್ ಆಗಿತ್ತು. ಇಂದು ರಾಮನಗರ ಲಾಕ್ಡೌನ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 24, 2020, 11:27 AM IST
ಕೆಲವು ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಸ್ಯಾನಿಟೈಸರ್ ಬಾಟಲಿಗಳನ್ನಿಟ್ಟುಕೊಂಡು ಪ್ರಯಾಣಿಕರ ಕೈಗೆ ಹಾಕಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ರಾಜೀವನಗರದ ಆಟೋ ಚಾಲಕ ಬಶೀರ್ ಅಹ್ಮದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಆಟೋದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಇಲ್ಲಿವೆ ಫೋಟೋಸ್
Karnataka Districts Jun 24, 2020, 8:51 AM IST
ಕರುನಾಡಿಗೆ ಇದುವರೆಗೂ 9399 ಮಂದಿಗೆ ಸೋಂಕು ತಗುಲಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಲಾಕ್ಡೌನ್ ಪಕ್ಕಾ ಎನ್ನುವ ಸೂಚನೆ ಕೊಟ್ಟಿದ್ದಾರೆ ಆರೋಗ್ಯ ಸಚಿವ ಶ್ರೀರಾಮುಲು. ಹೆಮ್ಮಾರಿಗೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮತ್ತೆ ಲಾಕ್ಡೌನ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಶ್ರೀರಾಮುಲು ಮಾತುಗಳು ಇಲ್ಲಿವೆ ನೋಡಿ..!
state Jun 23, 2020, 6:24 PM IST
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹುಟ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಕಳೆದ ಎರಡು ದಿನಗಳಿಂದ ನಗರದಲ್ಲಿ ಶತಕ ಮೀರಿ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ರಾಜ್ಯದಲ್ಲೇ ಮತ್ತೊಮ್ಮೆ ಲಾಕ್ಡೌನ್ ಮಾಡಲಾಗುತ್ತಾ ಅಥವಾ ಬೆಂಗಳೂರನ್ನ ಮಾತ್ರ ಲಾಕ್ಡೌನ್ ಮಾಡಲಾಗುತ್ತಾ? ಎಂಬುದು ಗುರುವಾರ ನಿರ್ಧಾರವಾಗಲಿದೆ. ಲಾಕ್ಡೌನ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಮತ್ತೊಮ್ಮೆ ಪರಾಮರ್ಶಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 23, 2020, 3:47 PM IST
ಸಮುದಾಯಕ್ಕೂ ಹಬ್ಬುವ ಹಂತಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಶತಕ ಮೀರಿ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ರಾಜ್ಯದಲ್ಲೇ ಮತ್ತೊಮ್ಮೆ ಲಾಕ್ಡೌನ್ ಮಾಡಲಾಗುತ್ತಾ ಅಥವಾ ಬೆಂಗಳೂರನ್ನ ಮಾತ್ರ ಲಾಕ್ಡೌನ್ ಮಾಡಲಾಗುತ್ತಾ? ಎಂಬುದು ಗುರುವಾರ ನಿರ್ಧಾರವಾಗಲಿದೆ. ಲಾಕ್ಡೌನ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಮತ್ತೊಮ್ಮೆ ಪರಾಮರ್ಶಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
state Jun 23, 2020, 3:02 PM IST
ಈವರೆಗೆ ಸುಮಾರು 73 ಜನ ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಬೆಂಗಳೂರಲ್ಲಿ ಇನ್ನಷ್ಟು ಏರಿಯಾ ಸಂಪೂರ್ಣ ಸೀಲ್ಡೌನ್ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ
Karnataka Districts Jun 23, 2020, 1:38 PM IST
ಇಡೀ ರಾಜ್ಯವೇ ನೋಡಬೇಕಾದ ಸುದ್ದಿ ಇದು. ಕೋವಿಡ್ ಆಸ್ಪತ್ರೆಗಳ ಕರ್ಮಕಾಂಡವನ್ನು ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಿಸಿಲ್ಲ. ಸೋಂಕಿತರಿಗೆ ಊಟ ಅಷ್ಟೇ ಅಲ್ಲ ಚಿಕಿತ್ಸೆಯೂ ಸಿಗುತ್ತಿಲ್ಲ. ವೈದ್ಯರು ಪರೀಕ್ಷೆಯನ್ನೂ ಮಾಡುತ್ತಿಲ್ಲ. ಚಿಕಿತ್ಸೆಯನ್ನೂ ಕೊಡುತ್ತಿಲ್ಲ. ಕೋವಿಡ್ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸೋಂಕಿತರು ಬಹಿರಂಗಪಡಿಸಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆಯನ್ನು ಅವರ ಮಾತುಗಳಲ್ಲೇ ಕೇಳಿ..!
state Jun 23, 2020, 1:12 PM IST