22 ಐಸಿಯು ರೋಗಿಗಳು ಡಿಸ್ಚಾರ್ಜ್ ಆಗಿದ್ದಾರಾ? ಮೃತಪಟ್ಟಿದ್ದಾರಾ?| ಮಾಹಿತಿಯೇ ಸಿಗುತ್ತಿಲ್ಲ: ಕೋವಿಡ್ ವಾರ್ ರೂಂ ಮೂಲಗಳು
state Jul 2, 2020, 7:36 AM IST
ಕರ್ನಾಟಕದಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಇಂದು (ಬುಧವಾರ) ಕರ್ನಾಟಕದಲ್ಲಿ ಬರೋಬ್ಬರಿ 1272 ಪ್ರಕರಣಗಳು ವರದಿಯಾಗಿದೆ. ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಕೇಸ್ ಪತ್ತೆಯಾಗಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
state Jul 1, 2020, 8:51 PM IST
ಕೋವಿಡ್ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ಆಸ್ಪತ್ರೆಗಳು ಸೇರಿಸಿಕೊಳ್ಳುತ್ತಿಲ್ಲ, ಆಂಬುಲೆನ್ಸ್ ಸಿಗುತ್ತಿಲ್ಲ. ಬರೀ ಇಲ್ಲ, ಇಲ್ಲಗಳೇ ಕೇಳಿ ಬರುತ್ತಿದೆ. ಬಿಬಿಎಂಪಿ ಅವ್ಯವಸ್ಥೆಗಳ ಆಗರವಾಗಿದೆ. ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ಆರೋಗ್ಯ ಸಚಿವರು ನಾನು ಗಮನಿಸ್ತಾ ಇದೀನಿ ಅಂತಾರೆ. ಆದರೆ ಅವ್ಯವಸ್ಥೆ ಮಾತ್ರ ಸರಿ ಹೋಗುತ್ತಿಲ್ಲ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಸುವರ್ಣನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ನೋಡಿ..!
state Jul 1, 2020, 4:11 PM IST
ಕೊರೋನಾ ಸೋಂಕಿನಿಂದ ಗುಣಮುಖರಾದವರು ರಕ್ತ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
state Jul 1, 2020, 3:39 PM IST
ಕೊನೆಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಆಸ್ಪತ್ರೆ ಬಾಗಿಲಲ್ಲೇ ನರಳಿ ನರಳಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...
state Jul 1, 2020, 1:18 PM IST
ಸೋಂಕು ನಿವಾರಣೆಯ ಮೊದಲ ಲಸಿಕೆ ಕೊರೋನಾ ವಾರಿಯರ್ಸ್ಗೆ| ಪ್ರಧಾನಿ ಮೋದಿ ಭಾಗಿಯಾಗಿದ್ದ ಸಭೆಯಲ್ಲಿ ನಿರ್ಧಾರ
India Jul 1, 2020, 10:58 AM IST
ಸಾರ್ವಜನಿಕರ ಭಾರಿ ವಿರೋಧದ ಮಧ್ಯೆಯೂ ಕೋವಿಡ್- 19ರ 21 ಸೋಂಕಿತರನ್ನು ಸರರ್ಕರ್ಕಾರರಿ ಆಸ್ಪತ್ರೆಯಿಂದ ಮಂಗಳವಾರ ರಾತ್ರಿ ಜನನಿಭಿಡ ಪ್ರದೇಶವಾದ ಸೋನಾರಕೇರಿ ಹಾಸ್ಟೆಲ್ಗೆ ಸ್ಥಳಾಂತರಿಸಲಾಯಿತು. ಇದರಿಂದ ಭಟ್ಕಳದ ಸೋನಾರಕೇರಿ ಹಾಸ್ಟೆಲ್ ಕೋವಿಡ್ -19 ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.
Karnataka Districts Jul 1, 2020, 10:36 AM IST
ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು, ಮಂಗಳವಾರ ಮತ್ತೆ ಆರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕಳೆದ ನಾಲ್ಕು ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 29ಕ್ಕೇರಿದೆ.
Karnataka Districts Jul 1, 2020, 9:15 AM IST
ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ಕುರಿತು ಕೂಡಲೆ ಆದೇಶ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
Karnataka Districts Jul 1, 2020, 7:29 AM IST
ಸೋಂಕಿತರ ಶವ ಗುಂಡಿಗೆಸೆದರು!|ಕೊರೋನಾಕ್ಕೆ ಬಲಿಯಾದವರ ಅಂತ್ಯಸಂಸ್ಕಾರ ವೇಳೆ ನಿಯಮ ಉಲ್ಲಂಘನೆ| ಒಂದೇ ಗುಂಡಿಗೆ 8 ಶವ| ಘಟನೆ ಬಗ್ಗೆ ಬಳ್ಳಾರಿ ಡೀಸಿ ಕ್ಷಮೆ| ತನಿಖೆಗೆ ಆದೇಶ|
state Jul 1, 2020, 7:12 AM IST
ಬಿಮ್ಸ್ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಸ್ಟ್ರೆಚರ್ ನೀಡದ ವಿಚಾರವನ್ನು ಸುವರ್ಣ ನ್ಯೂಸ್ ವರದಿ ಮಾಡುತ್ತಿದ್ದಂತೆ ಬಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
state Jun 30, 2020, 4:24 PM IST
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ಮೆಡಿಕಲ್ ಕಾಲೇಜುಗಳಿಂದ 5 ಸಾವಿರ ಬೆಡ್ ವ್ಯವಸ್ಥೆಗೆ ಸರ್ಕಾರ ಬೇಡಿಕೆ ಇಟ್ಟಿತ್ತು. ಸರ್ಕಾರದ ಬೇಡಿಕೆಗೆ ಮೆಡಿಕಲ್ ಕಾಲೇಜುಗಳು ಸ್ಪಂದಿಸಿವೆ. ಬೆಡ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ ಸಭೆಯಲ್ಲಿ ಖಾಸಗಿ ವೈದ್ಯರು, ಅರೆಕಾಲಿಕ ವೈದ್ಯರಿಗೆ ವಿಮೆ ಭರವಸೆ ನೀಡಿದ್ದಾರೆ ಸಿಎಂ ಯಡಿಯೂರಪ್ಪ.
state Jun 30, 2020, 2:41 PM IST
ಕೊರೊನಾ ಬಗ್ಗೆ ಎಚ್ಚರ ವಹಿಸಿ..ವಹಿಸಿ..! ಇಲ್ಲದಿದ್ರೆ ಚಿಕಿತ್ಸೆಯೂ ಸಿಗಲ್ಲ, ಆಸ್ಪತ್ರೆಗಳು ಸೇರಿಸಿಕೊಳ್ಳಲ್ಲ. ನಿನ್ನೆ ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಇಂದು ಮೆಡಿಕಲ್ ಕಾಲೇಜ್ ಮುಖ್ಯಸ್ಥರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಬೆಡ್ಗಳ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದಾಗ್ಯೂ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಬೆಡ್ಗಳು ಸಿಗುತ್ತಿಲ್ಲ. ಏನಿದು ಅವ್ಯವಸ್ಥೆ? ಗಂಭೀರ ಸ್ಥಿತಿಯಲ್ಲಿದ್ದರೂ ಖಾಸಗಿ ಆಸ್ಪತ್ರೆಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಟ್ರೀಟ್ಮೆಂಟ್ ಸಿಗದೇ ರೋಗಿಗಳು ಬಿದ್ದು ಸಾಯುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ ದಯವಿಟ್ಟು ಗಮನ ವಹಿಸಿ.
state Jun 30, 2020, 1:02 PM IST
ಕೊರೊನಾ ಬಂದ್ರೆ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಆಂಬುಲೆನ್ಸ್ ಇಲ್ಲ, ಚಿಕಿತ್ಸೆಯೂ ಇಲ್ಲ. ಸೋಂಕಿತರನ್ನು ಟಿಟಿ ವಾಹನಗಳಲ್ಲಿ ಶಿಫ್ಟ್ ಮಾಡಲಾಗುತ್ತಿದ್ದು ವೈದ್ಯಕೀಯ ಸಿಬ್ಬಂದಿ ಹಾಗೂ ವೆಂಟಿಲೇಟರ್ ಸಹ ಇಲ್ಲಿ ಇರುವುದಿಲ್ಲ. ಸೋಂಕಿತರನ್ನು ಆಸ್ಪತ್ರೆ ಎದುರು ಬಿಟ್ಟು ಹೋಗುತ್ತಿದ್ದಾರೆ.
state Jun 30, 2020, 11:49 AM IST
ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ 38 ವರ್ಷದ ಪುರುಷ (ಪಿ13222)ನಲ್ಲಿ ಐಎಲ್ಐ ಕೇಸ್ನಡಿ ಸೋಂಕು ಇರುವುದು ದೃಢಪಟ್ಟಿದೆ. ಅದೇ ತಾಲೂಕಿನ ಚಿನ್ನಿಕಟ್ಟೆಗ್ರಾಮದ 63 ವರ್ಷದ ವೃದ್ಧ(13223)ನು ಬೆಂಗಳೂರು ಪ್ರವಾಸ ಹಿನ್ನೆಲೆಯಿಂದ ಸೋಂಕಿಗೆ ತುತ್ತಾಗಿದ್ದಾರೆ.
Karnataka Districts Jun 30, 2020, 11:15 AM IST