ಯಾವುದೇ ಸದನದ ಸದಸ್ಯರಾಗದ ಲಕ್ಷ್ಮಣ ಸವದಿಗೆ ಬಯಸದೇ ಬಂದ ಡಿಸಿಎಂ ಭಾಗ್ಯ ಸಿಕ್ಕಿದೆ. ಆದ್ರೆ, ಇದೀಗ ಬಿಜೆಪಿಯಲ್ಲಿ ಸವದಿ ಸಸ್ಪೆನ್ಸ್ ಜೋರಾಗಿದೆ. ಅದೃಷ್ಟದಿಂದ ಡಿಸಿಎಂ ಆಗಿರುವ ಲಕ್ಷ್ಮಣ ಸವದಿಗೆ ಡೆಡ್ಲೈನ್ ಸಂಕಟ ಶುರುವಾಗಿದೆ.
Politics Jan 1, 2020, 4:44 PM IST
ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರಿಂದ ಗಡಿಯಲ್ಲಿ ಉದ್ಧಟತನ ಮಾಡುತ್ತಿದೆ. ಗಡಿಯಲ್ಲಿ ಮಹಾರಾಷ್ಟ್ರ ತೊಂದರೆ ಕೊಟ್ಟರೆ ಸಹಿಸೋದು ಆಗೋದಿಲ್ಲ ಎಂದು ಹೇಳುವ ಮೂಲಕ ಮಹಾರಾಷ್ಟ್ರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಚ್ಚರಿಕೆ ನೀಡಿದ್ದಾರೆ.
Karnataka Districts Jan 1, 2020, 3:12 PM IST
ಉಪಮುಖ್ಯಮಂತ್ರಿ ಹುದ್ದೆ ರದ್ದು ವಿಚಾರವನ್ನ ಹಾದಿ ಬೀದಿಯಲ್ಲಿ ನಾನೂ ಚರ್ಚೆ ಮಾಡೋದಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರಿಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಮಾಡುತ್ತಿರುವ ವಿಚಾರ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತಾಡಲ್ಲ, ಕಾಲ ಕೂಡಿ ಬಂದಾಗ ವಿಧಾನ ಪರಿಷತ್ತಿಗೆ ಪ್ರವೇಶ ಆಗತ್ತದೆ ಎಂದು ಹೇಳಿದ್ದಾರೆ.
Karnataka Districts Jan 1, 2020, 2:31 PM IST
ಮುಂಬರುವ ಜನವರಿ 10 ಮತ್ತು 11 ರಂದು ನಡೆಯಲಿರುವ ಹಂಪಿ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಆಯೋಜಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Karnataka Districts Dec 18, 2019, 10:29 AM IST
ರಾಜ್ಯದ ಹಲವಡೆ ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಚಿಕ್ಕ -ಪುಟ್ಟ ಸಮಸ್ಯೆಗಳು ಬಗೆಹರಿಸಬೇಕು ಎಂದು ತಿಳಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
Karnataka Districts Dec 15, 2019, 12:24 PM IST
ಪರಿಷತ್ ಸ್ಥಾನವೂ ಖಾಲಿ ಇಲ್ಲ ಲಕ್ಷ್ಮಣ ಸವದಿಗೆ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಇಲ್ಲ. ಅತ್ತ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟುಕೊಡಲು ಯಾರೂ ಒಪ್ಪುತ್ತಿಲ್ಲ. ಆದ್ದರಿಂದ, ಲಕ್ಷ್ಮಣ ಸವದಿ ಭವಿಷ್ಯ ಅತಂತ್ರವಾಗಿದೆ. ವಿಧಾನಸಭೆ, ಪರಿಷತ್ ಎಲ್ಲೂ ಸದಸ್ಯರಾಗಲಿಲ್ಲ ಎಂದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಮಾತುಗಳಿದ್ದವು. ಆದ್ರೆ, ಇದೀಗ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಹಾಗೂ ಅಥಣಿಯಲ್ಲಿ ಅನರ್ಹ ಶಾಸಕ ಗೆದ್ದರೂ ಸಹ ಸವದಿ ರಾಜಕೀಯ ಹಾದಿ ಸುಗಮವಾಗಿದೆ ಎನ್ನುವ ಮಾತುಗಳು ರಾಜ್ಯ ರಾಜಕೀಯದಲ್ಲಿ ದಟ್ಟವಾಗಿದೆ. ಏನಿದು ಸುದ್ದಿ...? ಕಾಂಗ್ರೆಸ್ ಅಭ್ಯರ್ಥಿ ಸೋಲು ಸವದಿ ಹಾದಿಗೆ ಏನು ಸಂಬಂಧ..? ಇಲ್ಲಿದೆ ಸಂಪೂರ್ಣ ಮಾಹಿತಿ..
Politics Dec 9, 2019, 2:14 PM IST
ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.
Karnataka Districts Dec 9, 2019, 12:50 PM IST
ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ಕಾಂಗ್ರೆಸ್ಗೆ ಹೋಗಿರುವ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅವರನ್ನು ಮತ್ತೆ ಬಿಜೆಪಿಗೆ ಕರೆತರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
Karnataka Districts Dec 9, 2019, 9:18 AM IST
ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಆರೋಪಿಗಳನ್ನ ಎನ್ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸ್ ಕಾರ್ಯ ಮೆಚ್ಚುವಂತಹುದು ಅವರು ತಪ್ಪಿಸಿಕೊಳ್ಳುವಾಗ ಎನ್ಕೌಂಟರ್ ಮಾಡಿದ್ದು ಒಳ್ಳೆ ಸಂಗತಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
Karnataka Districts Dec 6, 2019, 12:14 PM IST
ಅಥಣಿ(ಡಿ.05): ಮತದಾರನೊಬ್ಬ ಇವಿಎಂ ಮಷಿನ್ ಮೇಲೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಫೋಟೋ ಇಟ್ಟು ಮತ ಚಲಾವಣೆ ಮಾಡಿದ ಘಟನೆ ತಾಲೂಕಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಲಕ್ಷ್ಮಣ ಸವದಿ ಬೆಂಬಲಿಗ ಇವಿಎಂ ಸವದಿ ಫೋಟೋ ಇಟ್ಟು ವೋಟ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹೇಶ ಕುಮಟಳ್ಳಿ ಪೋಟೋ ಇರುವ ಜಾಗದಲ್ಲಿ ಡಿಸಿಎಂ ಸವದಿ ಭಾವಚಿತ್ರ ಇಟ್ಟು ಮತದಾನ ಮಾಡಿದ್ದಾನೆ.
ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ಮಾತ್ರ ನಿಗೂಢವಾಗಿದೆ. ಹೀಗೆ ಮತದಾನ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕಾನೂನು ಉಲ್ಲಂಘನೆಯಾಗಿದೆ.
Karnataka Districts Dec 5, 2019, 12:43 PM IST
ನೀನು ಚುನಾವಣೆಯಲ್ಲಿ ಗೆಲ್ಲಬೇಕು, ಮಂತ್ರಿಯಾಗಬೇಕು, ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಆಲ್ ದಿ ಬೆಸ್ಟ್ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರಿಗೆ ಹೇಳಿದ್ದಾರೆ.
Karnataka Districts Dec 5, 2019, 10:12 AM IST
ಗೌಡ, ಖರ್ಗೆ ಹಳೆ ಹುಲಿಗಳು, ಏನ್ಮಾಡ್ತಾರೆ ಅಂತ ಹೇಳಲಾಗದು| ಖರ್ಗೆ ಸಿಹಿ ಸುದ್ದಿ ಏನಂತ ಕಾಯ್ತಿದ್ದೇನೆ: ಸವದಿ
Politics Dec 5, 2019, 9:22 AM IST
ಮಹಾರಾಷ್ಟ್ರದಲ್ಲಿ ಕೆಲ ಗ್ರಾಮಗಳು ಕರ್ನಾಟಕಕ್ಕೆ ಬರುವ ಅರ್ಜಿ ಕೊಡುವ ಪರಿಸ್ಥಿತಿ ಬಂದಿದೆ. ಲಕ್ಷ್ಮಣ ಸವದಿ ಮಾಡಿದ ಬಸವೇಶ್ವರ ಏತನೀರಾವರಿಯಿಂದ ಮಹಾರಾಷ್ಟ್ರದ ಜನರು ಕರ್ನಾಟಕದತ್ತ ಒಲವು ತೋರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ದಿಯಿಂದ ಹಿಂದೆ ಉಳಿಯಲು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕಾರಣರಾಗಿದ್ದಾರೆ. ಇಬ್ಬರು ನಾಯಕರು ಉತ್ತರ ಕರ್ನಾಟಕದ ಬಗ್ಗೆ ಬಾರಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಆರೋಪಿಸಿದ್ದಾರೆ.
Karnataka Districts Dec 2, 2019, 2:48 PM IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಉಲ್ಟಾ ಭವಿಷ್ಯಗಾರ, ಆತ ನುಡಿದ ಭವಿಷ್ಯ ಎಲ್ಲವೂ ತಲೆ ಕೆಳೆಗಾಗುತ್ತವೆ. ತಿಪ್ಪರಲಾಗ ಅವರ ಸಂಕೇತ, ತಿಪ್ಪರಲಾಗ ಅಂದ್ರೆ ತಲೆ ಕೆಳಗೆ ಕಾಲು ಮೇಲೆ, ಅವರು ಏನೇ ಹೇಳಿದ್ರು ಅದು ಉಲ್ಟಾ ಆಗುತ್ತದೆ. ಅವರು ಏನು ಭವಿಷ್ಯ ಹೇಳ್ತಾರೋ ಅದನ್ನ ವಿರುದ್ಧವಾಗಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
Karnataka Districts Nov 30, 2019, 12:09 PM IST
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇದರಿಂದ ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬರಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
Karnataka Districts Nov 28, 2019, 9:06 AM IST