Asianet Suvarna News Asianet Suvarna News

'ಹೈದರಾಬಾದ್‌ ಪೊಲೀಸ್ ಕಮೀಷನರ್‌ ಕನ್ನಡಿಗ ಅನ್ನೋದೆ ನಮಗೆಲ್ಲ ಹೆಮ್ಮೆ'

ದುಷ್ಟರನ್ನು ಸದೆಬಡಿಯುವ ಮೂಲಕ ಇಡೀ ದೇಶಕ್ಕೆ ಒಳ್ಳೆ ಸಂದೇಶ ರವಾನೆ ಮಾಡಿದ ಹೈದರಾಬಾದ್ ಪೊಲೀಸರು|ಹೈದರಾಬಾದ್ ಪೊಲೀಸ್ ಕಾರ್ಯ ಮೆಚ್ಚುವಂತಹುದು| ಆರೋಪಿಗಳು ತಪ್ಪಿಸಿಕೊಳ್ಳುವಾಗ ಎನ್‌ಕೌಂಟರ್ ಮಾಡಿದ್ದು ಒಳ್ಳೆ ಸಂಗತಿ ಎಂದ ಡಿಸಿಎಂ ಸವದಿ| 

DCM Laxman Savadi Talks Over Hyderabad Encounter
Author
Bengaluru, First Published Dec 6, 2019, 12:14 PM IST

ಅಥಣಿ(ಡಿ.06): ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಆರೋಪಿಗಳನ್ನ ಎನ್‌ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸ್ ಕಾರ್ಯ ಮೆಚ್ಚುವಂತಹುದು ಅವರು ತಪ್ಪಿಸಿಕೊಳ್ಳುವಾಗ ಎನ್‌ಕೌಂಟರ್ ಮಾಡಿದ್ದು ಒಳ್ಳೆ ಸಂಗತಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈದರಾಬಾದ್‌ನಲ್ಲಿರುವ ಪೊಲೀಸ್ ಕಮೀಷನರ್‌ ವಿಶ್ವನಾಥ್ ಸಜ್ಜನರ್ ಒಬ್ಬ ಕನ್ನಡಿಗ ಅನ್ನೋದೆ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಅಂತಹ ದುಷ್ಟರನ್ನು ಸದೆಬಡಿಯುವ ಮೂಲಕ ಹೈದರಾಬಾದ್ ಪೊಲೀಸರು ಇಡೀ ದೇಶಕ್ಕೆ ಒಳ್ಳೆ ಸಂದೇಶ ರವಾನೆ ಮಾಡಿದ್ದಾರೆ. 

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಹೈದರಾಬಾದ್ ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. ಪ್ರಕರಣದ ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಮಹಜರು ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಬೇರೆ ವಿಧಿ ಇಲ್ಲದ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.

Follow Us:
Download App:
  • android
  • ios