ತಾವು ಮೂರು ಬಾರಿ ಪ್ರತಿನಿಧಿಸಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ತೊರೆದು ಈ ಬಾರಿ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾದ ರಾಯ್ಬರೇಲಿ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ಅಲ್ಲಿಯೂ ಸಹ ಬಿಜೆಪಿಯ ರಾಜ್ಯ ಸಚಿವ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ 2.5 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.
Politics Jun 5, 2024, 10:29 AM IST
ರಾಜ್ಯದ ಈಶಾನ್ಯ ಭಾಗದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಎಲ್ಲಾ ಐದು ಲೋಕಸಭಾ ಮತಕ್ಷೇತ್ರಗಳು ಕಾಂಗ್ರೆಸ್ ವಶವಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆನೆ ಬಲ ತಂದುಕೊಟ್ಟಿದೆ.
Politics Jun 5, 2024, 10:07 AM IST
ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಅನ್ಯ ಧರ್ಮೀಯರ ಆಸ್ತಿ ಹಂಚಲು ಸಂಚು ರೂಪಿಸಿದೆ. ನಿಮ್ಮ ಆಸ್ತಿ, ಮಂಗಳಸೂತ್ರ, ಪಿತ್ರಾರ್ಜಿತ ಆಸ್ತಿ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಿದೆ. ಕಾಂಗ್ರೆಸ್ ಪಕ್ಷ ಗೆದ್ದರೆ ನಿಮ್ಮ ಮನೆಯ ಅರ್ಧ ಪಾಲು ಅಲ್ಪಸಂಖ್ಯಾತರ ಪಾಲಾಗಲಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದು ಭಾರಿ ಸದ್ದು ಮಾಡಿತು.
Politics Jun 5, 2024, 9:59 AM IST
ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Politics Jun 5, 2024, 9:51 AM IST
ಹಿರಿಯ ಸಂಸದ ರಮೇಶ ಜಿಗಜಿಣಗಿಯವರಿಗೆ ಬಹುಶಃ ಇದೆ ಕಾರಣಕ್ಕೆ ಸೋಲಿಲ್ಲದ ಸರದಾರ ಎಂದು ಕರೆಯುತ್ತಾರೆ ಅಂತಾ ಕಾಣುತ್ತೆ. ಈ ಬಾರಿ ಸೇರಿ ಸತತ 7 ಬಾರಿ ಸಂಸತ್ ಪ್ರವೇಶ ಮಾಡುವ ಮೂಲಕ ಸೈ ಎಣಿಸಿಕೊಂಡಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತ 3 ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಮಾಡಿದ್ರು. ಬಳಿಕ ವಿಜಯಪುರ ಲೋಕಸಭಾ ಕ್ಷೇತ್ರ ಎಸ್.ಸಿ ಮೀಸಲಾತಿ ಬಳಿಕ ಸ್ವಂತ ಜಿಲ್ಲೆಗೆ ಆಗಮಿಸಿ ಸತತ 4 ಬಾರಿ ಲೋಕಸಭಾ ಎಲೆಕ್ಷನ್ನಲ್ಲಿ ಗೆದ್ದಿದ್ದಾರೆ. ಹೀಗಾಗಿಯೇ ಜಿಗಜಿಣಗಿ ಸೋಲಿಲ್ಲದ ಸರದಾರ ಅಂತಾ ಕರೆಯಿಸಿಕೊಳ್ತಿದ್ದಾರೆ.
Politics Jun 5, 2024, 9:50 AM IST
ಎನ್ಡಿಎ ಮೈತ್ರಿಕೂಟ 400 ರ ಆಸುಪಾಸು ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಪೂರ್ಣ ಉಲ್ಟಾ ಹೊಡೆದಿದೆ. ಎನ್ಡಿಎ ಹೀಗೆ ನಿರೀಕ್ಷಿತ ಗುರಿ ಮುಟ್ಟದೇ ಇರಲು ಉತ್ತರ ಪ್ರದೇಶವೂ ಸೇರಿದಂತೆ ಕೆಲ ದೊಡ್ಡ ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಕೈಕೊಟ್ಟಿದ್ದೇ ಪ್ರಮುಖ ಕಾರಣವಾಗಿ ಪರಿಣಮಿಸಿದೆ.
India Jun 5, 2024, 9:44 AM IST
: ಕಳೆದ 2 ಲೋಕಸಭಾ ಚುನಾವಣೆಗಳಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದಿ ಭಾಷಿಕ ಪ್ರದೇಶಗಳು ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ತಮ್ಮ ಒಲವು ವ್ಯಕ್ತಪಡಿಸಿವೆ. ಇದು ಬಿಜೆಪಿ ಮತ್ತು ಎನ್ಡಿಎ ಕೂಟದ ಒಟ್ಟಾರೆ ಸಂಖ್ಯಾಬಲದ ಮೇಲೆ ಭಾರೀ ಪ್ರಭಾವ ಬೀರಿದೆ.
Politics Jun 5, 2024, 9:37 AM IST
ಬಿಜೆಪಿ ದುರಾಡಳಿತವೇ ಈ ಸೋಲಿಗೆ ಕಾರಣ. ಆದ್ರೆ ಶ್ರೀರಾಮುಲು ಅವರ ಸೋಲಿಗೆ ಅನುಕಂಪವಿದೆ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ.
Politics Jun 5, 2024, 9:17 AM IST
ಕಾಂಗ್ರೆಸ್ ಸೇರ್ಪಡೆ ಆದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಿಂದ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸಹ ಘೋಷಣೆ ಮಾಡಿದ್ರು. ಐಎಎಸ್ ಅಧಿಕಾರಿಯಾಗಿ ಮೆರೆದ ಜಿ.ಕುಮಾರ ನಾಯಕ ಅವರಿಗೆ ಆರಂಭದಲ್ಲಿ ಸ್ವಲ್ಪ ಮುಜುಗರಗೊಂಡರು. ಆದ್ರೆ ಆಸಕ್ತಿ ಇದ್ರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜಿ.ಕುಮಾರ ನಾಯಕ ಅವರೇ ಸಾಕ್ಷಿ. ಆ ಸಾಕ್ಷಿಯ ಫಲವೇ ಲೋಕಸಭಾ ಫಲಿತಾಂಶ ಅಂದ್ರೆ ತಪ್ಪಾಗಲಾರದು.
Politics Jun 5, 2024, 9:13 AM IST
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು ಹಿನ್ನೆಲೆ ಮಗನ ಗೆಲುವಿಗೆ ತಾಯಿ ಆನಂದಭಾಷ್ಪ ಸುರಿಸಿದ್ದಾರೆ.
Politics Jun 5, 2024, 9:08 AM IST
ಕೆಲ ಪ್ರಮುಖ ಮೈತ್ರಿಪಕ್ಷಗಳು ತಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾತ್ರ ಮೈತ್ರಿಯಲ್ಲಿ ಉಳಿದುಕೊಳ್ಳುವ ನಿಲುವು ತಾಳಿದವು. ಈ ಎಲ್ಲಾ ಕಾರಣಗಳಿಂದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಘಟಿತ ಹೋರಾಟ ನಡೆಸಲು ಇಂಡಿಯಾ ಕೂಟಕ್ಕೆ ಸಾಧ್ಯವಾಗಲಿಲ್ಲ. ಅದರಿಂದಾಗಿ ಮ್ಯಾಜಿಕ್ ಸಂಖ್ಯೆಯ ಹತ್ತಿರಕ್ಕೆ ಬಂದು ಇಂಡಿಯಾ ಕೂಟ ಎಡವಿದೆ.
Politics Jun 5, 2024, 9:00 AM IST
ಕಳೆದ ಎರಡು ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ನೀಡಲು ವಿಫಲವಾದ ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಗೂ ಮುನ್ನ ಸಣ್ಣಪುಟ್ಟ ರಾಜಕೀಯ ಪಕ್ಷಗಳೆಲ್ಲ ಸೇರಿ ರಚಿಸಿಕೊಂಡ ಇಂಡಿಯಾ ಮೈತ್ರಿಕೂಟಕ್ಕೆ ತಾನೂ ಅಹಂ ಬಿಟ್ಟು ಸೇರ್ಪಡೆಗೊಂಡಿತ್ತು. ಆ ಪಕ್ಷಗಳಿಗೆ ಹೋಲಿಸಿದರೆ ಸಹಜವಾಗಿಯೇ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್, ಈಗ ಸೀಟು ಗಳಿಕೆ ಹೆಚ್ಚಿಸಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ನೈಸರ್ಗಿಕ ನಾಯಕನಾಗಿ ಹೊರಹೊಮ್ಮಿದೆ.
Politics Jun 5, 2024, 8:47 AM IST
ಲೋಕಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದಾಗಿ ಜೆಡಿಎಸ್ ಎರಡು ಸ್ಥಾನ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದೇವೆಯೇ ಹೊರತು, ಶತ್ರು ಭೈರವಿ ಯಾಗದಿಂದ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
Politics Jun 5, 2024, 8:20 AM IST
ಮತ ಎಣಿಕೆಯ ಅಂತ್ಯಕ್ಕೆ ತರೂರ್ 3,53,679 ಮತ ಪಡೆದರೆ, ರಾಜೀವ್ 3,37,920 ಮತ ಹಾಗೂ ರವೀಂದ್ರನ್ 2,44,433 ಮತ ಪಡೆದರು. ಈ ಮೂಲಕ ರಾಜೀವ್ರಿಂದ ಸಾಕಷ್ಟು ಆತಂಕದ ಕ್ಷಣ ಎದುರಿಸಿ 4ನೇ ಬಾರಿಗೆ ತರೂರ್ ಆಯ್ಕೆಯಾದರು.
Politics Jun 5, 2024, 7:53 AM IST
2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನದಿಂದ ಚೇತರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಈ ಪೈಕಿ ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ ಕರ್ನಾಟಕದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಟ್ಟ ನೀಡಿದ್ದಾಗಿದೆ. ಇದಾದ ನಂತರ ಪಕ್ಷದಲ್ಲಿನ ಎಲ್ಲರನ್ನೂ ಅನುಸರಿಸಿಕೊಂಡು ಹೋಗುವ ನೀತಿಯನ್ನು ಖರ್ಗೆ ಅವರು ಪಾಲಿಸಿದ್ದೂ ಪಕ್ಷದ ಏಳ್ಗೆಗೆ ಬಹುಮುಖ್ಯ ಕಾರಣವಾಗಿದೆ.
Politics Jun 5, 2024, 7:41 AM IST