ಸ್ಯಾಂಡಲ್ವುಡ್ 'ವಾಯುಪುತ್ರ'ನಾಗಿ, 'ವರದನಾಯಕ'ನಾಗಿ ಮೆರೆದ 'ಗಂಡೆದೆ' ವೀರನಿಗೆ ಗಣ್ಯರ ಕಂಬನಿ!
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಚಿರಂಜೀವಿ ಸರ್ಜಾ ಸೋಶಿಯಲ್ ಮೀಡಿಯಾ ಮೂಲಕವೂ ಜನರನ್ನು ತಲುಪುತ್ತಿದ್ದರು. ಸರ್ಜಾ ಅಕಾಲಿಕ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿಯುತ್ತಿದೆ.
ಚಿರಂಜೀವಿ ಸರ್ಜಾ ಅತೀ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದು,ತುಂಬಾ ನೋವಿನ ಸಂಗತಿ. ನನ್ನ ಕುಟುಂಬಕ್ಕೂ ಅವರು ಅತೀ ಹತ್ತಿರದವರು.ಚಿರು ಅಗಲಿಕೆ ನನಗೆ , ಅಭಿಗೆ ಅಪಾರ ನೋವನ್ನುಂಟು ಮಾಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವನ್ನು ಭರಿಸುವಶಕ್ತಿಯನ್ನು ಭಗವಂತ ನೀಡಲಿ ಎಂದು ಸಂಸದೆ, ನಟಿ ಸುಮಲತಾ ಅಂಬರೀಶ್ ಸಂತಾಪ ಸೂಚಿಸಿದ್ದಾರೆ.
"