Asianet Suvarna News Asianet Suvarna News

ಸೃಜನ್ ಲೋಕೇಶ್ ಸಿನಿಮಾಗೆ ಚಂದನ್ ಶೆಟ್ಟಿ ಮ್ಯೂಸಿಕ್; ನೋಡಿ ಸ್ವಾಮಿ ನಾವಿರೋದು ಹೀಗೆ..!

ಸಂಗೀತ ನಿರ್ದೇಶನದ ಕೆಲಸಕ್ಕಾಗಿ ನಟ-ಸಿಂಗರ್ ಹಾಗೂ ಇದೀಗ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿಯವರು ಮೈಸೂರಿನಲ್ಲಿಇದ್ದಾರೆ. ಸಂಗೀತದ ಜೊತೆಜೊತೆಗೆ ಇತ್ತೀಚೆಗೆ ಬಿಡುಗಡೆ ಆಗಿರುವ ತಮ್ಮ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್‌ ಕೆಲಸವನ್ನು ಸಹ ಮಾಡುತ್ತಿದ್ದಾರೆ ಚಂದನ್..

Rapper and actor chandan shetty talks about upcoming project gst ghosts in trouble srb
Author
First Published Jul 25, 2024, 1:49 PM IST | Last Updated Jul 25, 2024, 1:49 PM IST

ಕಳೆದ ಶುಕ್ರವಾರ ಬಿಡುಗಡೆಯಾದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೂಲಕ ನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ ಚಂದನ್ ಶೆಟ್ಟಿ. ಈ ಮೊದಲು ರಾಪರ್ ಆಗಿ ಸಿಂಗಿಂಗ್ ಪ್ರೊಫೆಶನ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಚಂದನ್ ಶೆಟ್ಟಿ ಅವರು ಈಗ ನಟ-ಸಿಂಗರ್ ಆಗಿ ಬೆಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಹೀರೋ ಆಗುವುದಕ್ಕಿಂತ ನನಗೆ ಕಲಾವಿದನಾಗಿ ಇರುವುದು ಮುಖ್ಯ' ಎಂದಿದ್ದಾರೆ ಚಂದನ್ ಶೆಟ್ಟಿ. ಅವರು ಇನ್ನೂ ಎರಡು ಚಿತ್ರಗಳಲ್ಲಿ ನಟಿಸಿದ್ದು ಅವು ಬಿಡುಗಡೆ ಕಾಣಬೇಕಾಗಿದೆ. 

ಸದ್ಯಕ್ಕೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಚಾರ ಕಾರ್ಯದ ಜೊತೆ ಸಂಗೀತ ನಿರ್ದೇಶನದ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಚಂದನ್ ಶೆಟ್ಟಿ. ಸೃಜನ್ ಲೋಕೇಶ್ ಮುಖ್ಯ ಪಾತ್ರದ, ಸಂದೇಶ್ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಜೆಎಸ್‌ಟಿ ಅಂದ್ರೆ 'ಘೋಸ್ಟ್‌'ಸ್ ಇನ್ ಟ್ರಬಲ್' ಎಂಬ ಹೆಸರಿನ (GST - Ghost's in Trouble) ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಒಂದು ಹಾಡು ಹಾಡಿರುವ ಜೊತೆಗೆ, ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಷನ್ ಸಹ ಮಾಡುತ್ತಿದ್ದಾರೆ. 

ಯಶ್-ಅಜಿತ್ ಜೋಡಿ ಫೋಟೋ ವೈರಲ್, ಇದ್ಯಾವುದು ಹೊಸ ಸಿನಿಮಾ? ತಲೆ ಕೆಡಿಸಿಕೊಂಡ ಫ್ಯಾನ್ಸ್!

ಸದ್ಯ ಈ ಚಿತ್ರದ ಸಂಗೀತ ನಿರ್ದೇಶನದ ಕೆಲಸಕ್ಕಾಗಿ ನಟ-ಸಿಂಗರ್ ಹಾಗೂ ಇದೀಗ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿಯವರು ಮೈಸೂರಿನಲ್ಲಿಇದ್ದಾರೆ. ಸಂಗೀತದ ಜೊತೆಜೊತೆಗೆ ಇತ್ತೀಚೆಗೆ ಬಿಡುಗಡೆ ಆಗಿರುವ ತಮ್ಮ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್‌ ಕೆಲಸವನ್ನು ಸಹ ಮಾಡುತ್ತಿದ್ದಾರೆ ಚಂದನ್. ಹೀಗೆ, ಸಿಂಗಿಂಗ್, ಆಕ್ಟಿಂಗ್ ಹಾಗು ಮ್ಯೂಸಿಕ್ ಡೈರೆಕ್ಷನ್ ಮಾಡುತ್ತ ಫುಲ್ ಬ್ಯುಸಿ ಆಗಿದ್ದಾರೆ ಚಂದನ್ ಶೆಟ್ಟಿ. 

ಅಂದಹಾಗೆ, ಚಂದನ್ ಶೆಟ್ಟಿ ಅವರು ಈ 'ಜಿಎಸ್‌ಟಿ' ಚಿತ್ರದ ಸಂಗೀತ ನಿರ್ದೇಶನದ ಬಗ್ಗೆ ಮಾತನಾಡಿ 'ಈ ಸಿನಿಮಾದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಸೃಜನ್ ಲೋಕೇಶ್. ಎಲ್ಲಾ ಕ್ರೆಡಿಟ್ ಅವರಿಗೇ ಸಲ್ಲಬೇಕು' ಎಂದಿದ್ದಾರೆ. ಅಂದರೆ, GST ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸೃಜನ್ ಎನ್ನಬಹುದೇನೋ! 

ಈ ಮೊದಲು ಚಂದನ್ ಶೆಟ್ಟಿ ಅವರು ಶ್ರೇಯಸ್ ಮಂಜು ನಟನೆಯ ರಾಣಾ, ಚಿರಂಜೀವಿ ಸರ್ಜಾ ನಟನೆಯ ಸೀಸರ್ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ. ಜೊತೆಗೆ, ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರದಲ್ಲಿ ಒಂದು ಹಾಡು ಕಾಂಪೋಸ್ ಕೂಡ ಮಾಡಿದ್ದಾರೆ. ಪೊಗರು ಚಿತ್ರದ ರೀ-ರೆಕಾಡಿಂಗ್ ಮಾಡಿದ್ದು ವಿ ಹರಿಕೃಷ್ಣ, ಒಂದು ಹಾಡಿಗೆ ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?

ಒಟ್ಟಿನಲ್ಲಿ, ಬಹುಮುಖ ಪ್ರತಿಭೆಯ ನಟ-ನಿರೂಪಕ ಸೃಜನ್ ಲೋಕೇಶ್ ಹಾಗು ನಟ-ಸಿಂಗರ್-ಮ್ಯೂಸಿಕ್ ಡೈರೆಕ್ಟರ್ ಚಂದನ್ ಈ ಚಿತ್ರದಲ್ಲಿ ಒಟ್ಟಿಗೇ ಕೆಲಸ ಮಾಡುವ ಮೂಲಕ ಕನ್ನಡ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಸದ್ಯ ಶೂಟಿಂಗ್ ಹಾಗು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಜಿಎಸ್‌ಟಿ ಚಿತ್ರವು ಕೆಲಸ ಮುಗಿಸಿಕೊಂಡು ಆದಷ್ಟು ಬೇಗ ತೆರೆಗೆ ಬರಲು ರೆಡಿಯಾಗುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರು 'ಭೂತದ ಸಮಸ್ಯೆ'ಯನ್ನು ನೋಡಬಹುದು!

Latest Videos
Follow Us:
Download App:
  • android
  • ios