Asianet Suvarna News Asianet Suvarna News

ಸರ್ಕಾರದಿಂದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಆರ್ಥಿಕ ನೆರವು ನೀಡುವಂತೆ ಪ್ರದರ್ಶಕರಿಂದ ಮನವಿ!

ಲಾಕ್‌ಡೌನ್‌ನಿಂದ ಕನ್ನಡ ಚಿತ್ರರಂಗದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ಕರ್ನಾಟಕ ಚಿತ್ರ ಪ್ರದರ್ಶನಕರ ಸಂಘಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

Karnataka film exhibitors association writes a letter to CM seeking financial aid vcs
Author
Bangalore, First Published May 14, 2021, 11:22 AM IST

ಕರ್ನಾಟಕದಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ, ಪ್ರತೀ ಸಲವೂ ಮೊದಲು ಲಾಕ್‌ ಮಾಡುವುದು ಚಿತ್ರಮಂದಿರವನ್ನು, ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣವನ್ನು. ಇದರಿಂದ ಕಲಾವಿದರು, ನಿರ್ದೇಶಕರು ಮಾತ್ರವಲ್ಲದೇ ಪ್ರದರ್ಶಕರೂ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಎಂದು ಪ್ರದರ್ಶನಕರ ಸಂಘ ಮನವಿ ಮಾಡಿಕೊಂಡಿದೆ. 

ಜನತಾ ಕರ್ಫ್ಯೂ: ಸೀರಿಯಲ್, ಸಿನಿಮಾ ಚಿತ್ರೀಕರಣ ಬಂದ್, ಬಿಗ್ ಬಾಸ್ ಕಥೆ ಏನು?

2020ರ ಲಾಕ್‌ಡೌನ್‌ ಸಮಯದಲ್ಲಿ ಸುಮಾರು 8 ತಿಂಗಳ ಕಾಲ ಚಿತ್ರಪ್ರದರ್ಶನವನ್ನು ಬಂದ್ ಮಾಡಲಾಗಿತ್ತು. ಈ ಲಾಕ್‌ಡೌನ್‌ನಲ್ಲೂ ಅದೇ ರೀತಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೇ ಉಂಟಾದ ಆರ್ಥಿಕ ನಷ್ಟದ ಬಗ್ಗೆ ನೆರವು ನೀಡುವ ಭರಸವೆಯನ್ನು ಸರ್ಕಾರ ನೀಡಿತ್ತು. 11.11.2020 ಉಪ ಮುಖ್ಯಮಂತ್ರಿ ಶೀ ಅಶ್ವಥ್ ನಾರಾಯಣ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳಿಗೆ ಟಿಪ್ಪಣಿ ಮೂಲಕ ಆದೇಶ ನೀಡಿದ್ದರು. 

Karnataka film exhibitors association writes a letter to CM seeking financial aid vcs

20.4.2021ರಂದು ವಾರ್ತಾ ಸಚಿವರಾದ ಶ್ರೀ ಸಿ.ಸಿ ಪಾಟೀಲರು ಸಹ ಸಭೆ ನಡೆಸಿದರು, ಈ ಸಂದರ್ಭದ ಸಂಕಷ್ಟವನ್ನು ಅವರ ಗಮನಕ್ಕೆ ತರಲಾಗಿತ್ತು. ಅರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದ್ದರು.  ಕಳೆದ ಸಾಲಿನ ಬೇಡಿಕೆಗಳಾದ ಮಾಸಿಕ ವಿದ್ಯುತ್ ಮತ್ತು ನೀರಿನ ಶುಲ್ಕ, ಆಸ್ತಿ ತೆರಿಗೆ ರಿಯಾಯಿತಿ, ಕಾರ್ಮಿಕರಿಗೆ ಧನಸಹಾಯ, ಚಿತ್ರರಂಗವನ್ನು ಕೈಗಾರಿಕಾ ವಲಯ ಘೋಷಣೆ... ಹೀಗೆ ಬೇಡಿಕೆಗಳಿಗೆ ಪರಿಹಾರ ನೀಡುವಂತೆ ಕೋರಲಾಗಿತ್ತು. ಅಲ್ಲದೆ ಸರ್ಕಾರವೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿರುವ ಕಾರಣ ಪ್ರಸ್ತುತ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಆಸ್ತಿ ತೆರಿಗೆ ಪಾವತಿ ಮಾಡಲು ಶಕ್ತರಲ್ಲದ ಕಾರಣ ಹಾಗೂ ಆರ್ಥಿಕ ಸಂಕಷ್ಟ ಹೊಂದಿರುವುದರಿಂದ 20-21ನೇ ಪಾಲಿನ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿಯನ್ನು ನೀಡಬೇಕೆಂದು ಆಗ್ರಹಿಸಲಾಗಿದೆ. 

Kannada News Entertainment Sandalwood ಜೂನ್‌‌ವರೆಗೂ ಚಿತ್ರಮಂದಿರಗಳು ಕ್ಲೋಸ್‌; ಕೆಜಿಎಫ್ 2 ರಿಲೀಸ್ ಆಗಲ್ಲ? 

ಚಿತ್ರರಂಗವನ್ನು ಕೈಗಾರಿಕಾ ವಲಯವೆಂದು ಘೋಷಿಸುವ ಬಗ್ಗೆ ಕಾರ್ಯಪ್ರವೃತ್ತವಾಗಬೇಕೆಂದು ಪ್ರದರ್ಶಕರ ಸಂಘದ ಪರವಾಗಿ ಕೆ.ವಿ.ಚಂದ್ರಶೇಖರ್ ಪ್ರದರ್ಶಕರ ಸಂಘದ ಪರವಾಗಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ ಮನವಿ ಸಲ್ಲಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios