Asianet Suvarna News Asianet Suvarna News

ಮನುಷ್ಯನ ಮೋಜಿಗೆ ಆನೆ ಬಲಿ;ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನೋವಿನ ನುಡಿಗಳಿವು!

ಗರ್ಭಿಣಿ ಆನೆಗೆ ಅನಾನಸ್‌ನಲ್ಲಿ ಸ್ಫೋಟಕವಿಟ್ಟು ಪ್ರಾಣಬಿಡುವಂತೆ ಮಾಡಿದ ದುರಂತದ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ಟೀಟ್ ಮಾಡಿದ್ದಾರೆ...

Kannada darshan wife vijayalakshmi tweets about Kerala pregnant elephant incident
Author
Bangalore, First Published Jun 4, 2020, 11:53 AM IST

ಕೇರಳದಲ್ಲಿ ನಡೆದ ಘಟನೆ ಇಡೀ ಭಾರತೀಯರನ್ನೇ ಬೆಚ್ಚಿ ಬಿಳಿಸಿದೆ. ಈ ಮನಕಲುಕುವಂತ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ಧ್ವನಿ ಎತ್ತಿದ್ದಾರೆ ಹಾಗೂ ಪಿಟಿಷನ್‌ ಸೈನ್‌ ಮಾಡಲು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

ಏನಿದು ಘಟನೆ:

ಕೇರಳದ ಮಲಪ್ಪರುಂ ಜಿಲ್ಲೆಯ ಉತ್ತರ ಭಾಗದಲ್ಲಿರುವ ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಸ್ಫೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲೇ ಅನಾನಸ್‌ ಸ್ಪೋಟವಾಗಿ ದವಡೆ ಹಾಗೂ ಬಾಯಿ ಸಂಪೂರ್ಣವಾಗಿ ಪುಡಿಯಾಗಿದೆ. ಈ ನೋವಿನಲ್ಲಿ ನರಳಿದ ಆನೆ ಇಡೀ  ಗ್ರಾಮದಲ್ಲಿ ಅಲೆದಾಡಿದೆ ಆದರೆ ಯಾರಿಗೂ ಸಿಟ್ಟಿನಿಂದ ದಾಳಿ ಮಾಡಿಲ್ಲ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಈ ಗರ್ಭಿಣಿ ಆನೆಯಿಂದ ಯಾರಿಗೂ ಹಾನಿಯಾಗಿಲ್ಲ. ಒಂದು ದಿನವೂ ಒಬ್ಬರನ್ನು ಗದರಿಸಿಲ್ಲ, ತೋಟಗಳಿಗೆ ದಾಳಿ ಮಾಡಿಲ್ಲ.

 

ಚಿತ್ರರಂಗದ ಧ್ವನಿ:

ಯಾರಿಗೂ ತೊಂದರೆ ನೀಡದ ಗರ್ಭಿಣಿ  ಹೆಣ್ಣು ಆನೆ ಮೇಲೆ ಇಂತಹ ಕುಚೇಷ್ಟೆ ಮಾಡಿರುವ ದುರುಳರನ್ನು ಶಿಕ್ಷಿಸಬೇಕು ಹಾಗೂ ಈ ರೀತಿ ಇನ್ಯಾವ ಆನೆಗಳಿಗೂ ಆಗಬಾರದು ಎಂದು ಚಿತ್ರರಂಗದ ನಟ- ನಟಿಯರು ಧ್ವನಿ ಎತ್ತಿದ್ದಾರೆ ಹಾಗೂ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತೋರಿ, ಕೇರಳ ಸರ್ಕಾರದ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Kannada darshan wife vijayalakshmi tweets about Kerala pregnant elephant incident
 
ಪ್ರಾಣಿಗಳ ಮೇಲೆ ಪ್ರಾಣವನ್ನೇ ಇಟ್ಟಿರುವ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನಕಲುಕುವಂತ ಆನೆ ಫೋಟೋವನ್ನು ಟ್ಟೀಟ್‌ ಮಾಡಿದ್ದಾರೆ. 'ಕೊನೆಗೂ ಮನುಷ್ಯತ್ವ ಸತ್ತಿದೆ. ಅದು ಗರ್ಭಿಣಿ ಆನೆ, ನಮ್ಮನ್ನು ನಂಬಿದಳು ಆದರೆ ನಾವು ಆಕೆಗೆ ಮೋಸ ಮಾಡಿದೆವು. ನನ್ನ ಪ್ರಕಾರ ಮೋಸಕ್ಕೆ ಇನ್ನೊಂದು ಹೆಸರೇ ಮನುಷ್ಯರು' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಂದೊಳ್ಳೆ ಕೆಲಸಕ್ಕೆ ಅಭಿಮಾನಿಗಳಲ್ಲಿ ರಮ್ಯಾ ಮನವಿ

ಚಿತ್ರರಂಗ ಹಾಗೂ ಸೋಷಿಯಲ್‌ ಮೀಡಿಯಾದಿಂದ ದೂರವಾದ ಮೋಹಕ ತಾರೆ ರಮ್ಯಾ ಹಲವು ತಿಂಗಳುಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿ ಆನೆಯ ಸಾವಿಗೆ ಕಾರಣವಾದರ ಮೇಲೆ ಕ್ರಿಮಿನಲ್ ಕೇಸ್‌ ದಾಖಲಾಗಬೇಕು ಹಾಗೂ ಅವರಿಗೆ ಶಿಕ್ಷೆಯಾಗಬೇಕೆಂದರೆ ಪಿಟಿಷನ್‌ ಸೈನ್‌ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios