ಅಭಿಮಾನಿಗಳಿಗೆ ಹನುಮ ಜಯಂತಿ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್/  ಲಾಕ್ ಡೌನ್ ಕಾರಣಕ್ಕೆ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ/ ಹನುಮ ಧೈರ್ಯ ಮತ್ತು ಶಕ್ತಿಯ ಪ್ರತೀಕ

ಬೆಂಗಳೂರು(ಏ. 08) ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಕಲರಿಗೆ, ಅಭಿಮಾನಿಳಿಗೆ ಹನುಮ ಜಯಂತಿ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹನುಮ ಜಯಂತಿ ದೊಡ್ಡದಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಸರ್ಕಾರದ ಆದೇಶಗಳ ;ಪಾಲನೆ ಮಾಡಿ, ಮನೆಯಲ್ಲೆ ಇರಿ ಎಂದು ಚಾಲೆಂಜಿಂಗ್ ಸ್ಟಾರ್ ಕೇಳೀಕೊಂಡಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಸಿನಿಮಾ ಜಗತ್ತಿನ ಕೆಲಸಗಳು ಬಂದ್ ಆಗಿವೆ. ಇಡೀ ಭಾರತೀಯ ಚಿತ್ರರಂಗದ ಮೇಲೆ ಕೊರೋನಾ ಪರಿಣಾಮ ಬೀರಿದ್ದು ಇಂಡಸ್ಟ್ರಿಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

Scroll to load tweet…