Asianet Suvarna News Asianet Suvarna News

ಚಿತ್ರಮಂದಿರಗಳಲ್ಲಿ ಶೇ.100 ಸೀಟು ಅವಕಾಶ: ಇಂದು ಮಹತ್ವದ ಸೂಚನೆ ನಿರೀಕ್ಷೆ

ರಿಲೀಸ್ ಆಗಲಿವೆ ಸಾಲು ಸಾಲು ಬಹು ನಿರೀಕ್ಷಿತ ಸಿನಿಮಾಗಳು | ಥಿಯೇಟರ್‌ಗಳಲ್ಲಿ ಶೇ 100 ಸೀಟು ಭರ್ತಿಗೆ ಹೆಚ್ಚಿದ ಒತ್ತಡ | ಇಂದು ಮಹತ್ವದ ನಿರ್ಧಾರ..?

100 percent seat occupancy in theaters of Karnataka dpl
Author
Bangalore, First Published Feb 3, 2021, 3:29 PM IST

ರಾಜ್ಯ ಸರ್ಕಾರದಿಂದ ಚಿತ್ರಮಂದಿರಕ್ಕೆ ಶೇ 50% ಮಾತ್ರ ಅವಕಾಶ ನೀಡಲಾಗಿದ್ದು, 100% ಅವಕಾಶ ಕೊಡುವಂತೆ ನಟ, ಶಾಸಕ ಕುಮಾರ್ ಬಂಗಾರಪ್ಪನವರಿಗೆ ಚಿತ್ರರಂಗದದಿಂದ ಮನವಿ ಮಾಡಲಾಗಿದೆ.

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದೆ. ಶೇಕಡ 100 ಸೀಟು ಬರ್ತಿಗೆ ಅವಕಾಶ ಮಾಡಿಕೊಡುಂತೆ ಸರ್ಕಾರ‌ ಗಮನಕ್ಕೆ ತನ್ನಿ ಎಂದು ಮನವಿ ಮಾಡಲಾಗಿದೆ.

"

ಗುಬ್ಬಿ ಜಯರಾಜ್, ನಿರ್ಮಾಪಕ‌ ಸೂರಪ್ಪ ಬಾಬು, ಉಮೇಶ್ ಬಣಕಾರ್ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರದಿಂದ ಶೇಕಡ 50% ಮಾತ್ರ ಅವಕಾಶ ನೀಡಿರೋದು ಬೇಸರದ ಸಂಗತಿ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ನೂರರಷ್ಟು ಅವಕಾಶ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ. ಆದಷ್ಟು ಬೇಗ ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ಕೇಳುತ್ತೇವೆ. ಸದ್ಯ ಮುಖ್ಯಮಂತ್ರಿಗಳ ಕಾಲಾವಕಾಶ ಸಿಕ್ಕಿಲ್ಲ ಎನ್ನಲಾಗಿದೆ.

"

ಎಲ್ಲಾ ರಾಜ್ಯದಲ್ಲಿಯೂ 100%ಅವಕಾಶ ನೀಡಿದ್ದಾರೆ ನಮಗೆ ಮಾತ್ರ 50% ಯಾಕೆ ಗೊತ್ತಾಗುತ್ತಿಲ್ಲ. ಬೆಳಗ್ಗೆ ಪೊಗರು ಸಿನಿಮಾ ನಿರ್ಮಾಪಕರು ಕರೆ ಮಾಡಿದ್ದರು. ಅವರಿಗೂ ಸಮಸ್ಯೆ ಆಗಿದೆ. ಈಗಾಗಲೇ ಮುಖ್ಯಮಂತ್ರಿಗಳ‌ ಗಮನಕ್ಕೆ ಈ‌ವಿಚಾರ ತಂದಿದ್ದೇವೆ ಎನ್ನಲಾಗಿದೆ.

ಸಿಎಂ ಅವಕಾಶ ಕೊಟ್ಟರೆ ಕಲಾವಿದರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಮೊದಲಿಗೆ ಅವರ ಸಮಯಾವಕಾಶ ಸಿಗಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಸಿಎಂ ಜೊತೆ ನಿನ್ನೆಯೇ ಚರ್ಚೆಸಿದ್ದೇನೆ‌‌. ಸಿನಿಮಾಗಳನ್ನ ನೋಡೋರಿಗೆ ಶೇಕಡ ನೂರರಷ್ಟು ಅವಕಾಶ ಕಲ್ಪಿಸುತ್ತೇವೆ. ಸಿಎಂ ಕೂಡ ಭರವಸೆ ನೀಡಿದ್ದಾರೆ.‌ ಇವತ್ತು ಸಂಜೆ ಒಳಗೆ ಗೊಂದಲ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

"

ಹೋರಾಟಕ್ಕೆ ಸಜ್ಜಾದ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಈಗಾಗಲೇ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಸರ್ಕಾರ ಮನವಿಗೆ ಒಪ್ಪದಿದ್ದಲ್ಲಿ ಸ್ಟಾರ್ ನಟರೆಲ್ಲಾ ಸೇರಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಸಾಥ್ ನೀಡಲು ಸ್ಟಾರ್ ನಟರು ಒಪ್ಪಿದ್ದಾರೆ ಎಂದು ಶಿವರಾಜ್ ಕುಮಾರ್ , ದುನಿಯಾ ವಿಜಿ, ಧೃವ ಸರ್ಜಾ, ಡಾಲಿ  ಧನಂಜಯ್ ಜೊತೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.

Follow Us:
Download App:
  • android
  • ios