Asianet Suvarna News Asianet Suvarna News

ಅನಾರೋಗ್ಯದಿಂದ ದಿಢೀರ್ ಅಣ್ಣ ನಿಧನ, ವಿಧವೆ ಅತ್ತಿಗೆಯನ್ನೇ ಮದುವೆಯಾಗಿ ಹೊಸ ಜೀವನ ನೀಡಿದ ತಮ್ಮ!

  • ಅಣ್ಣನ ನಿಧನದಿಂದ ಕಂಗಾಲಾದ ಅತ್ತಿಗೆ ಹಾಗೂ ಮಕ್ಕಳು
  • ಇಬ್ಬರು ಮಕ್ಕಳು ಹಾಗೂ ವಿಧವೆ ಅತ್ತಿಗೆಗೆ ಹೊಸ ಬಾಳು
  • ತಮ್ಮನ ನಡೆಗೆ ಎಲ್ಲರ ಮೆಚ್ಚುಗೆ
Man married widowed sister in law set an example in front of everyone in Maharastra ckm
Author
Bengaluru, First Published Jun 12, 2022, 8:28 PM IST | Last Updated Jun 12, 2022, 8:28 PM IST

ಮಹಾರಾಷ್ಟ್ರ(ಜೂ.12): ಅನಾರೋಗ್ಯದಿಂದ ದಿಢೀರ್ ಅಣ್ಣ ನಿಧನರಾಗಿದ್ದಾರೆ. ಇದರಿಂದ ಅಣ್ಣನ ಪತ್ನಿ ಹಾಗೂ ಮಕ್ಕಳು ಆಘಾತದಿಂದ ಚೇತರಿಸಿಕೊಳ್ಳುಲು ಸಾಧ್ಯವಾಗಲಿಲ್ಲ, ಇತ್ತ ಆಶ್ರವಿಲ್ಲದೆ ಕಂಗಾಲಾಗಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಪತ್ನಿಯನ್ನೇ ತಮ್ಮ ಮದುವೆಯಾಗಿದ್ದಾನೆ. ಈ ಮೂಲಕ ವಿಧವೆ ಅತ್ತಿಗೆ ಹಾಗೂ ಮಕ್ಕಳಿಗೆ ಹೊಸ ಜೀವನ ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಬುಲ್ದಾನಾ ಜಿಲ್ಲೆಯ ವಂಕಡ್ ಜಿಲ್ಲೆಯಲ್ಲಿ ನೆಲೆಸಿರುವ ದಮ್‌ದಾರ್ ಕುಟುಂಬ ತೀವ್ರ ಸಂಕಷ್ಟ ಎದುರಿಸಿತ್ತು. ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಹರಿದಾಸ್ ದಮ್‌ದಾರ್ ಅಣ್ಣ ನಿಧನರಾಗಿದ್ದಾರೆ. ಇದರಿಂದ ಅತ್ತಿಗೆಗೆ ದಿಕ್ಕೆ ತೋಚದಂತಾಗಿದೆ. ಇತ್ತ ಇಬ್ಬರು ಮಕ್ಕಳು ಕೂಡ ತಂದೆ ಇಲ್ಲದೆ ಕಂಗಾಲಾಗಿದ್ದಾರೆ. ಸೊಸೆಯ ನೋವು ನೋಡಲಾಗದ ಕಟುಂಬ ಹರಿದಾಸ್ ಬಳಿ ಅತ್ತಿಗೆಯನ್ನು ಮದುವೆಯಾಗಲು ಸೂಚಿಸಿದ್ದಾರೆ.

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು, ಭಾವನಾತ್ಮಕ ಬಂಧಕ್ಕೆ ಕಣ್ಣೀರಾದ ಜನ

ಹರಿದಾಸ್ ದಮ್‌ದಾರ್ ನೇರವಾಗಿ ಅತ್ತಿಗೆ ಬಳಿ ವಿಚಾರ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅತ್ತಿಗೆ ಕೂಡ ಒಪ್ಪಿಕೊಂಡಿದ್ದಾರೆ. ಬಳಿಕ ಇಬ್ಬರು ಮಕ್ಕಳ ತಾಯಿಯಾಗಿರುವ ಅತ್ತಿಗೆಯನ್ನು ತಮ್ಮ ಹರಿದಾಸ್ ದಮ್‌ದಾರ್ ಮದುವೆಯಾಗಿದ್ದಾರೆ. ಹರಿದಾಸ್ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾದರಿ ನಡೆ ಎಂದು ಪ್ರಶಂಸಿದ್ದಾರೆ.

ಸರಳವಾಗಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಮಾತನಾಡಿದ ಹರಿದಾಸ್, ಒಂದು ವರ್ಷದ ಹಿಂದೆ ಅಣ್ಣ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅತ್ತಿಗೆ ನೋವು ನಮಗೆ ಅರ್ಥವಾಗಿತ್ತು. ಇತ್ತ ಪೋಷಕರು ಅತ್ತಿಗೆಯನ್ನು ಮದುವೆಯಾಗಲು ಸೂಚಿಸಿದ್ದರು. ಇದಕ್ಕೆ ಅತ್ತಿಗೆ ಹಾಗೂ ಅವರ ಪೋಷಕರಲ್ಲೂ ವಿಷಯ ಪ್ರಸ್ತಾಪಿಸಿಲಾಗಿತ್ತು. ಎಲ್ಲರೂ ಸಮ್ಮತಿ ಸೂಚಿಸಿದ ಬಳಿಕ ಮದುವೆಯಾಗಿದ್ದೇನೆ ಎಂದು ಹರಿದಾಸ್ ಹೇಳಿದ್ದಾರೆ.

ತಾಳಿ ಕಟ್ಟುವಷ್ಟರಲ್ಲಿ ಮದುವೆ ಬೇಡವೆಂದ ವಧು!
ಇನ್ನೇನು ಹಾರ ಹಾಕಿ, ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ವರನನ್ನು ನಿರಾಕರಿಸಿದ ವಿಚಿತ್ರ ಘಟನೆ ಬುಧವಾರ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಡೆದಿದೆ.

ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !

ನಾರಾವಿ ದೇವಸ್ಥಾನದ ಸನಿಹವಿರುವ ಸಭಾಭವನದಲ್ಲಿ ನಾರಾವಿಯ ಯುವಕನಿಗೂ ಶಿರ್ತಾಡಿ ಸನಿಹದ ಮೂಡುಕೊಣಾಜೆಯ ಯುವತಿಗೂ ಮದುವೆ ನಡೆಯುವುದರಲ್ಲಿತ್ತು. ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಸಮಾರಂಭ ಅದ್ದೂರಿಯಾಗಿಯೇ ಆಗುವುದರಲ್ಲಿತ್ತು. ಆದರೆ ಹಾರ ವಿನಿಮಯ ಸಂದರ್ಭ ವಧು ಯಾವುದೋ ತಗಾದೆ ತೆಗೆದಿದ್ದಾಳೆ. ಬಳಿಕ ತಾಳಿ ಕಟ್ಟುವ ವೇಳೆ ಈ ವರ ಬೇಡ ಎಂದು ಹಾರವನ್ನು ತೆಗೆದು ಬಿಸಾಡಿದ್ದಾಳೆಂದು ಹೇಳಲಾಗುತ್ತಿದೆ. ಇನ್ನೊಂದೆಡೆ ವಧುವಿನ ಆರೋಗ್ಯ ಏರುಪೇರಾಗಿದ್ದರಿಂದ ಆಕೆ ವಿಚಿತ್ರವಾಗಿ ವರ್ತಿಸ ತೊಡಗಿದ್ದಾಳೆಂದೂ ಜನರು ಹೇಳತೊಡಗಿದ್ದಾರೆ.

ಈ ವಿದ್ಯಮಾನದಿಂದ ಗಂಡಿನ ಹಾಗೂ ಹೆಣ್ಣಿನ ಕಡೆಯವರ ಮಧ್ಯೆ ಕೆಲ ಕಾಲ ವಾಗ್ಯುದ್ಧ ನಡೆದಿದೆ. ವೇಣೂರು ಪೋಲಿಸರ ಆಗಮನವಾಗಿದೆ. ತನ್ನನ್ನು ನೋಡಲು ಬಂದವನೊಬ್ಬ, ನಿಶ್ಚಯ ಆದದ್ದು ಇನ್ನೊಬ್ಬನೊಂದಿಗೆ, ಇವತ್ತು ಬಂದ ವರ ಬೇರೊಬ್ಬ ಎಂಬ ವಿಚಿತ್ರ ಹೇಳಿಕೆಯನ್ನು ಪೋಲಿಸರ ಮುಂದೆ ವಧು ಹೇಳಿದ್ದಾಳಂತೆ. ಘಟನೆಯ ಸುದ್ದಿ ವೈರಲ್‌ ಆಗಿದೆ.
 

Latest Videos
Follow Us:
Download App:
  • android
  • ios