Asianet Suvarna News Asianet Suvarna News

ಟಿಪ್ಪು ಹೆಸರಿನ ರೈಲು ಸಂಚಾರ ರದ್ದು? ಎಚ್ಚರಿಕೆ

ಬಿಜೆಪಿ ಸರ್ಕಾರ ಟಿಪ್ಪು ರೈಲು ಸಂಚಾ​ರ​ವನ್ನು ಸ್ಥಗಿ​ತ​ಗೊ​ಳಿ​ಸಿದರೆ ಹಾಗೂ ಪಠ್ಯ​ಪು​ಸ್ತ​ಕ​ದಲ್ಲಿ ಟಿಪ್ಪು ಪಠ್ಯ​ವನ್ನು ತೆಗೆ​ದರೆ ಕರ್ನಾ​ಟ​ಕ​ದಲ್ಲಿ ಕ್ರಾಂತಿ ಆಗು​ತ್ತದೆ ಎಂದು ಕನ್ನಡ ಚಳ​ವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗ​ರಾಜ್‌ ಎಚ್ಚ​ರಿಕೆ ನೀಡಿ​ದರು.

Vatal Nagaraj Warns About cancellation Tippu Express Train
Author
Bengaluru, First Published Oct 27, 2019, 1:29 PM IST

ರಾಮ​ನ​ಗರ (ಅ.27):  ಬಿಜೆಪಿ ಸರ್ಕಾರ ಟಿಪ್ಪು ರೈಲು ಸಂಚಾ​ರ​ವನ್ನು ಸ್ಥಗಿ​ತ​ಗೊ​ಳಿ​ಸಿದರೆ ಹಾಗೂ ಪಠ್ಯ​ಪು​ಸ್ತ​ಕ​ದಲ್ಲಿ ಟಿಪ್ಪು ಪಠ್ಯ​ವನ್ನು ತೆಗೆ​ದರೆ ಕರ್ನಾ​ಟ​ಕ​ದಲ್ಲಿ ಕ್ರಾಂತಿ ಆಗು​ತ್ತದೆ ಎಂದು ಕನ್ನಡ ಚಳ​ವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗ​ರಾಜ್‌ ಎಚ್ಚ​ರಿಕೆ ನೀಡಿ​ದರು.

ಶನಿ​ವಾ​ರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ನೆನ​ಪಿ​ನಾರ್ಥ ರೈಲಿಗೆ ಟಿಪ್ಪು ಹೆಸ​ರನ್ನು ನಾಮ​ಕ​ರಣ ಮಾಡ​ಲಾ​ಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವ​ವನ್ನೇ ಸಮ​ರ್ಪಿ​ಸಿದ ಕಾರ​ಣ​ಕ್ಕಾಗಿ ಟಿಪ್ಪು ಜೀವ​ನ​ಚ​ರಿ​ತ್ರೆ​ ಪಠ್ಯ​ಪುಸ್ತ​ಕ​ದ​ಲ್ಲಿ ವಿಷ​ಯ​ವಾ​ಗಿದೆ. ಆದರೆ, ಬಿಜೆಪಿ ಸರ್ಕಾರ ಉದ್ದೇಶಪೂರ್ವ​ಕ​ವಾ​ಗಿಯೇ ಟಿಪ್ಪು ಹೆಸರು ಮತ್ತು ಆತನ ಚರಿ​ತ್ರೆಯ ವಿಷ​ಯ​ವನ್ನು ತೆಗೆ​ಯಲು ಹೊರ​ಟಿದೆ ಎಂದು ಟೀಕಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟಿಪ್ಪು ರೈಲು ಸಂಚಾರ ಸ್ಥಗಿ​ತ​ಗೊ​ಳಿ​ಸು​ವು​ದಾಗಿ ಬಿಜೆಪಿ ಸರ್ಕಾ​ರದ ಸಚಿ​ವರು ಹೇಳಿಕೆ ನೀಡಿ​ದ್ದಾರೆ. ಯಾವ ಕಾರ​ಣಕ್ಕೂ ಟಿಪ್ಪು ಹೆಸ​ರಿನ ರೈಲನ್ನು ಸ್ಥಗಿ​ತ​ಗೊ​ಳಿ​ಸಿ​ದರೆ ಅಥವಾ ಹೆಸರು ಬದ​ಲಾ​ವಣೆ ಮಾಡಿ​ದರೆ ಹಾಗೂ ಪಠ್ಯ​ಪು​ಸ್ತ​ಕ​ದಲ್ಲಿ ಟಿಪ್ಪು ವಿಷ​ಯ​ವನ್ನು ತೆಗೆ​ದರೆ ರಾಜ್ಯ​ದಲ್ಲಿ ಉಗ್ರ ಹೋರಾಟಗಳು ನಡೆದು ಕ್ರಾಂತಿ ಆಗು​ತ್ತದೆ ಎಂದು ಎಚ್ಚ​ರಿ​ಸಿ​ದರು.

ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ:

Follow Us:
Download App:
  • android
  • ios