ಅನೈತಿಕ ಸಂಬಂಧ: ಗಂಡನನ್ನೇ ಕೊಂದ ಹೆಂಡ್ತಿ , ಪ್ರಿಯಕರನ ಬಂಧನ
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ರಾಮನಗರ [ಅ.15]: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ರಾಮನಗರ ಟೌನ್ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಗೌಸಿಯಾನಗರ ಬಡಾವಣೆ ವಾಸಿ ಸಾಧಿಕ್ ಪಾಷ ( 32) ಕೊಲೆಗೀಡಾಗಿದ ವ್ಯಕ್ತಿ. ಆರೋಪಿಗಳಾದ ಮಹಮ್ಮದ್ ರಂಜಾನ್(20), ಅಸ್ಮಾ ಬಾನು(27) ಬಂಧಿತ ಅರೋಪಿಗಳು.
ಮೃತ ಸಾಧಿಕ್ ಪಾಷ ಸೇರಿದಂತೆ ಆರೋಪಿಗಳಾದ ಆತನ ಪತ್ನಿ ಅಸ್ಮಾ ಬಾನು, ಆಕೆಯ ಪ್ರಿಯಕರ ರಂಜಾನ್ ಫಿಲೇಚರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಸ್ಮಾಬಾನು ಮತ್ತು ರಂಜಾನ್ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರು ಸೇರಿ ಭಾನುವಾರ ಮನೆಯಲ್ಲಿದ್ದ ಸಾಧಿಕ್ ಪಾಷನÜನ್ನು ಕೊಲೆ ಮಾಡಿದ್ದಾರೆ.
ಲಟ್ಟಣಿಗೆ ಇಂದ ತಲೆ ಮೇಲೆ ಹೊಡೆದಿದ್ದರಿಂದ ನೆಲಕ್ಕೆ ಬಿದ್ದ ಸಾಧಿಕ್ ಪಾಷನ ಮುಖದ ಮೇಲೆ ತಲೆದಿಂಬಿಟ್ಟು ಪತ್ನಿಯೇ ಉಸಿರುಗಟ್ಟುವಂತೆ ಮಾಡಿದರೆ, ಅಲ್ಲೇ ಇದ್ದ ಪ್ರಿಯಕರ ರಂಜಾನ್ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಮಗೇನು ತಿಳಿದೇ ಇಲ್ಲ ಎಂಬಂತೆ ತನ್ನು ಪತಿ ಏಕಾಏಕಿ ಮೃತ ಪಟ್ಟಿದ್ದಾನೆ ಎಂದು ಅಸ್ಮಾಬಾನು ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳ ಪರಿಶೀಲನೆಗೆ ತೆರೆಳಿದ ಪೊಲೀಸರು, ಮೃತನ ಮೈಮೇಲಿದ್ದ ಗಾಯದ ಗುರುತುಗಳನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ರಂಜಾನ್ ಪಶ್ಚಿಮ ಬಂಗಾಳದವನಾಗಿದ್ದರೆ, ಆಸ್ಮಾ ಭಾನು ಮುಂಬೈ ಮೂಲದವಳು. ಕೊಲೆ ಮಾಡಿದ ಬಳಿಕ ರಂಜಾನ್ ಪರಾರಿಯಾಗಲು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪುರುಷೋತ್ತಮ…, ವೃತ ನಿರೀಕ್ಷಕ ನರಸಿಂಹಮೂರ್ತಿ, ಪಿಎಸ್ಐ ಅನಂತ್ ರಾಮ್, ಎಎಸ್ ಐ ದೇವಕುಮಾರ್, ಮುಖ್ಯ ಪೇದೆ ಶರತ್ ಕುಮಾರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.