ಬಿಎಸ್ವೈ ಬೆನ್ನಿಗೆ ನಿಂತಿ ವೀರಶೈವ-ಲಿಂಗಾಯತ ಬ್ರಿಗೇಡ್: ಬಂಡಾಯಗಾರರಿಗೆ ಖಡಕ್ ವಾರ್ನಿಂಗ್
ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೋನಾನಾ ಮಹಾಮಾರಿ ರಾಜ್ಯಕ್ಕೂ ಕಾಲಿಟ್ಟಿದ್ದು, ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಇದರ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಬಂಡಾಯಗಾರರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಮೇ 29): ಕೊರೋನಾ ಕಾರಣಕ್ಕೆ ಕಳೆದ ಎರಡು ತಿಂಗಳಿನಿಂದ ತಣ್ಣಗಾಗಿದ್ದ ಬಿಜೆಪಿ ಪಕ್ಷದೊಳಗಿನ ಭಿನ್ನಮತೀಯರ ರಾಗ ಇದೀಗ ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಮತ್ತೆ ಸದ್ದು ಮಾಡಲು ಆರಂಭಿಸಿದೆ.
ಆರಂಭದಿಂದಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಔತಣ ಕೂಟದ ನೆಪದಲ್ಲಿ ಒಂದೆಡೆ ಸಭೆ ಸೇರಿದ್ದು, ಈ ಅತೃಪ್ತರ ಕೂಟದ ಹೊಸ ರಾಜಕೀಯ ಆಟಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ.
'ಕತ್ತಿ' ವರಸೆ ವಿರುದ್ಧ ಅಖಾಡಕ್ಕಿಳಿದ ಕೋರೆ; ಸೀಟಿಗಾಗಿ ನಾಯಕರ ಮೊರೆ
ಬಂಡಾಯಗಾರರಿಗೆ ಫೇಸ್ಬುಕ್ ಮೂಲಕ ಎಚ್ಚರಿಕೆ
ಹೌದು...ವೀರಶೈವ - ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು, ಬಿಎಸ್ವೈ ವಿರುದ್ಧ ಬಂಡಾಯ ಸಾರಿರುವ ನಾಯಕರಿಗೆ ಫೇಸ್ಬುಕ್ ಮೂಲಕ ಖಡಕ್ ವಾರ್ನಿಂಗ್ ಕೊಟ್ಟಿದೆ.
ವೀರಶೈವ ಲಿಂಗಾಯತ ಸಮಾಜದ ಮೇರು ನಾಯಕ ಶರಣ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಲಿಂಗಾಯತ ಶಾಸಕರು ಬಹಿರಂಗವಾಗಿ ಮಾತನಾಡಿದ್ದು ಕಂಡರೆ ನಾವು ಕೂಡ ನಿಮ್ಮ ಬಂಡವಾಳವನ್ನು ಬಹಿರಂಗವಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಂಡಾಯಗಾರರಿಗೆ ಫೇಸ್ ಬುಕ್ ಮೂಲಕ .ವೀರಶೈವ - ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.