Asianet Suvarna News Asianet Suvarna News

ಕುಟುಂಬ ರಾಜ​ಕಾ​ರಣ, ಗುಂಪು​ಗಾ​ರಿಕೆಯಿಂದ ಬೇಸತ್ತು ಜೆಡಿ​ಎಸ್‌ ತೊರೆ​ದೆ: ಸಿಂಗ​ರಾಜ​ಪುರ ರಾಜಣ್ಣ

ಚನ್ನ​ಪಟ್ಟಣ ಕ್ಷೇತ್ರ​ದಲ್ಲಿ ಪಕ್ಷದ ಹಿರಿಯ ನಾಯ​ಕರ ಮಾತಿಗೆ ಮರ್ಯಾದೆ ಇಲ್ಲ​ದಂತಾ​ಗಿದೆ. ಕುಮಾ​ರ​ಸ್ವಾ​ಮಿಯ​ವರೇ ಬಣ ರಾಜ​ಕಾ​ರಣ ಪ್ರೋತ್ಸಾ​ಹಿ​ಸುತ್ತಿ​ರುವು​ದ​ರಿಂದ ಕಾರ್ಯ​ಕ​ರ್ತರೆ ಕಿತ್ತಾ​ಡು​ವ ಪರಿ​ಸ್ಥಿತಿ ನಿರ್ಮಾ​ಣ​ಗೊಂಡಿ​ದೆ: ರಾಜಣ್ಣ 

Singarajapura Rajanna Leave JDS in Ramanagara grg
Author
First Published Sep 22, 2022, 11:59 AM IST

ರಾಮ​ನ​ಗರ(ಸೆ.22): ಮಾಜಿ ಸಿಎಂ ಕುಮಾ​ರ​ಸ್ವಾ​ಮಿಯ​ವರ ಕುಟುಂಬ ರಾಜ​ಕಾ​ರಣ ಹಾಗೂ ಪಕ್ಷ​ದೊ​ಳ​ಗಿನ ಗುಂಪು​ಗಾ​ರಿ​ಕೆ​ಯಿಂದ ಬೇಸತ್ತು ತಾವು ಜೆಡಿ​ಎಸ್‌ ಪಕ್ಷ ತೊರೆ​ಯು​ತ್ತಿ​ರು​ವು​ದಾಗಿ ಹಿರಿಯ ಮುಖಂಡ ಲಿಂಗ​ರಾ​ಜೇ​ಗೌಡ (ಸಿಂಗ​ರಾ​ಜ​ಪುರ ರಾಜಣ್ಣ ) ತಿಳಿ​ಸಿ​ದರು. ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಚನ್ನ​ಪಟ್ಟಣ ಕ್ಷೇತ್ರ​ದಲ್ಲಿ ಪಕ್ಷದ ಹಿರಿಯ ನಾಯ​ಕರ ಮಾತಿಗೆ ಮರ್ಯಾದೆ ಇಲ್ಲ​ದಂತಾ​ಗಿದೆ. ಕುಮಾ​ರ​ಸ್ವಾ​ಮಿಯ​ವರೇ ಬಣ ರಾಜ​ಕಾ​ರಣ ಪ್ರೋತ್ಸಾ​ಹಿ​ಸುತ್ತಿ​ರುವು​ದ​ರಿಂದ ಕಾರ್ಯ​ಕ​ರ್ತರೆ ಕಿತ್ತಾ​ಡು​ವ ಪರಿ​ಸ್ಥಿತಿ ನಿರ್ಮಾ​ಣ​ಗೊಂಡಿ​ದೆ. ಇದೆ​ಲ್ಲ​ವನ್ನು ನೋಡಿ​ಕೊಂಡು ಪಕ್ಷ​ದಲ್ಲಿ ಇರಲು ಮನಸ್ಸು ಒಪ್ಪು​ತ್ತಿಲ್ಲ. ಆದ್ದ​ರಿಂದ ತಮ್ಮ ಬೆಂಬ​ಲಿ​ಗ​ರೊಂದಿಗೆ ಜೆಡಿ​ಎಸ್‌ ಪಕ್ಷ​ವನ್ನು ತೊರೆ​ಯು​ತ್ತಿದ್ದು, ಶೀಘ್ರ​ದಲ್ಲಿ ತಮ್ಮ ರಾಜ​ಕೀಯ ನಿರ್ಧಾರ ತಿಳಿ​ಸು​ವು​ದಾಗಿ ಹೇಳಿ​ದ​ರು.

1985ರಿಂದ ಜಿಲ್ಲೆ​ಯಲ್ಲಿ ದೇವೇ​ಗೌ​ಡ​ರ​ವರ ಕೈ ಬಲ​ಪ​ಡಿ​ಸುವ ಕೆಲಸ ಮಾಡು​ತ್ತಿ​ದ್ದೇವೆ. ಅವರು ಶಾಸ​ಕ​ರಾಗಿ ಪ್ರಧಾನಿ ಹುದ್ದೆ ಅಲಂಕ​ರಿ​​ಸಿ​ದರು. ಇದೆಲ್ಲ ಜೆಡಿ​ಎಸ್‌ ಕಾರ್ಯ​ಕ​ರ್ತರ ಪರಿ​ಶ್ರ​ಮದ ಫಲ. ಕುಮಾ​ರ​ಸ್ವಾಮಿ ಮತ್ತು ಅನಿತಾ ಕುಮಾ​ರ​ಸ್ವಾಮಿ ಪರ​ವಾಗಿಯೂ ಕಾರ್ಯ​ಕ​ರ್ತರು 40 ವರ್ಷ​ಗ​ಳಿಂದ ದುಡಿ​ಯು​ತ್ತಲೇ ಇದ್ದರೂ ಯಾವ ಕಾರ್ಯ​ಕ​ರ್ತ​ರಿಗೂ ಅಧಿ​ಕಾರ ನೀಡಿಲ್ಲ.

ಕರ್ನಾಟಕ ಅಭಿವೃದ್ಧಿಪಡಿಸುತ್ತೇನೆ ನಮಗೊಂದು ಸಲ ಅವಕಾಶ ನೀಡಿ: ಕುಮಾರಸ್ವಾಮಿ

ಮಗ, ಮೊಮ್ಮ​ಕ್ಕ​ಳಿಗೂ ದುಡಿ​ಯ​ಬೇಕೇ?:

ಎಲ್ಲ ಅಧಿ​ಕಾರ ತಮ್ಮ ಕುಟುಂಬಕ್ಕೆ ಬೇಕು ಎಂಬ ಭಾವ​ನೆ​ಯಲ್ಲಿ ಕುಟುಂಬ ರಾಜ​ಕಾ​ರ​ಣ​ವನ್ನು ಮಾಡು​ತ್ತಿ​ದ್ದಾರೆ. ಅಪ್ಪ , ಮಗ ಹಾಗೂ ಸೊಸೆ​ಗಾಗಿ ಕಾರ್ಯ​ಕ​ರ್ತರು ದುಡಿ​ದಿ​ದ್ದಾ​ಗಿದೆ. ಈಗ ಅವರ ಮಗ ಹಾಗೂ ಮೊಮ್ಮ​ಕ್ಕ​ಳಿಗೂ ದುಡಿ​ಯಬೇಕಾ​ಗಿದೆ. ಕುಮಾ​ರ​ಸ್ವಾ​ಮಿ​ರ​ವರ ಈ ಧೋರಣೆ ನನ್ನಂತಹ ಅನೇಕ ಮುಖಂಡ​ರಿಗೆ ಬೇಸರ ತರಿ​ಸಿದೆ ಎಂದು ರಾಜಣ್ಣ ಅಸ​ಮಾ​ಧಾನ ಹೊರ ಹಾಕಿ​ದರು.

ಕಾರ್ಯ​ಕ​ರ್ತರು ಕೂಲಿ ಆಳು​ಗ​ಳು:

16 ತಿಂಗಳು ಮುಖ್ಯ​ಮಂತ್ರಿ​ಯಾ​ಗಿದ್ದ ಅವ​ಧಿ​ಯಲ್ಲಿ ಚನ್ನ​ಪ​ಟ್ಟಣ ಯೋಜನಾ ಪ್ರಾಧಿ​ಕಾರ ಸೇರಿ​ದಂತೆ ನಿಗಮ ಮಂಡಳಿ ಅಧ್ಯಕ್ಷ - ನಿರ್ದೇ​ಶಕ ಸ್ಥಾನ​ಗ​ಳಲ್ಲಿ ಕಾರ್ಯ​ಕ​ರ್ತ​ರಿಗೆ ಅವ​ಕಾಶ ನೀಡ​ಲಿಲ್ಲ. ದಲಿ​ತರು, ಹಿಂದುಳಿದ ವರ್ಗ ಹಾಗೂ ಇತರೆ ಜಾತಿ​ಗ​ಳಿಗೂ ಪ್ರಾತಿ​ನಿಧ್ಯ ನೀಡಿ ಪಕ್ಷ ಬಲ​ಪ​ಡಿ​ಸಲು ಸಹ​ಕ​ರಿ​ಸು​ವಂತೆ ಮಾಡಿದ ಮನ​ವಿಗೂ ಸೊಪ್ಪು ಹಾಕ​ಲಿಲ್ಲ. ಅವ​ರಿಗೆ ಮಾತ್ರ ಅಧಿ​ಕಾರ ಬೇಕು, ಕಾರ್ಯ​ಕ​ರ್ತರು ಕೂಲಿ ಆಳು​ಗ​ಳಂತೆ ಕೆಲಸ ಮಾಡಿ​ಕೊಂಡಿ​ರ​ಬೇಕು ಎಂದು ಕುಮಾ​ರ​ಸ್ವಾಮಿ ವಿರುದ್ಧ ಕಿರಿ​ಕಾ​ರಿ​ದರು.

ಎಚ್‌ಡಿಕೆಗೆ ತೆರಿಗೆ ರೀತಿ​ಯಲ್ಲಿ ಹಣ:

ಕ್ಷೇತ್ರ​ದಲ್ಲಿ ಗೋವಿಂದ​ಹಳ್ಳಿ ನಾಗ​ರಾಜು ಹೊರತು ಪಡಿ​ಸಿ​ದರೆ ಬೇರೆ ಗುತ್ತಿ​ಗೆ​ದಾ​ರ​ನಿಗೆ ಕೆಲಸ ನೀಡಿಲ್ಲ. ಹೊರಗಿ​ನ​ ಗುತ್ತಿ​ಗೆ​ದಾ​ರ​ರಿಗೆ ಮಣೆ ಹಾಕುವ ಮೂಲಕ ಸಣ್ಣ​ಪುಟ್ಟಗುತ್ತಿ​ಗೆ​ದಾ​ರರು ಕೆಲಸ ಇಲ್ಲದೆ ಮನೆ ಸೇರು​ವಂತಾ​ಗಿದೆ. ಕಮಿ​ಷನ್‌ ರೀತಿ​ಯಲ್ಲಿ ಹಣ ಪಡೆ​ಯ​ದಿ​ದ್ದರೂ ಬೇರೆ ತೆರಿಗೆ ರೂಪ​ದಲ್ಲಿ ಕುಮಾ​ರ​ಸ್ವಾಮಿ ಹಣ ಪಡೆ​ದಿ​ದ್ದಾರೆ ಎಂದು ರಾಜಣ್ಣ ಆರೋಪ ಮಾಡಿ​ದರು.

ಕುಮಾ​ರ​ಸ್ವಾ​ಮಿ ಪಿಎ, ಗನ್‌ಮ್ಯಾನ್‌​ಗ​ಳಿಗೆ ಲಂಚ ಕೊಡ್ಬೇಕು

ರಾಮ​ನ​ಗ​ರ: ಮಾಜಿ ಸಿಎಂ ಕುಮಾ​ರ​ಸ್ವಾಮಿ ಅವ​ರನ್ನು ಭೇಟಿ ಮಾಡ​ಬೇ​ಕಾ​ದರೆ ಅವರ ಆಪ್ತ ಸಹಾ​ಯ​ಕರು ಮತ್ತು ಗನ್‌ಮ್ಯಾನ್‌ಗಳಿಗೆ ಲಂಚ ಕೊಡ​ಬೇಕು ಎಂದು ಸಿಂಗ​ರಾ​ಜ​ಪುರ ರಾಜಣ್ಣ ಆರೋ​ಪಿ​ಸಿ​ದರು.

ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ರಾಜ್ಯ ರಾಜಕಾರಣದಲ್ಲಿ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಜೆಡಿ​ಎಸ್‌ ಮುಖಂಡರು ಮತ್ತು ಕಾರ್ಯ​ಕ​ರ್ತರು ನೇರ​ವಾಗಿ ಕುಮಾ​ರ​ಸ್ವಾಮಿ ಅವ​ರನ್ನು ಭೇಟಿ ಮಾಡಲು ಆಪ್ತ ಸಹಾ​ಯ​ಕರು - ಗನ್‌ಮ್ಯಾನ್‌ಗಳು ಅವ​ಕಾಶ ನೀಡಲ್ಲ. ಅವ​ರಿಗೆ ಸ್ವಲ್ಪ ಹಣ ನೀಡಿ​ದ​ರಷ್ಟೇ ಕುಮಾ​ರ​ಸ್ವಾ​ಮಿ​ರ​ವರ ಬಳಿಗೆ ನೇರ​ವಾಗಿ ಕರೆ​ದು​ಕೊಂಡು ಹೋಗು​ತ್ತಾರೆ ಎಂದು ಟೀಕಿ​ಸಿ​ದರು.

ಈಗ ಜಲ​ಧಾರೆ ಹೆಸ​ರಿ​ನಲ್ಲಿ ಜನ​ರಿಗೆ ಮಂಕು​ಬೂದಿ ಎರ​ಚುವ ಕೆಲಸ ಮಾಡು​ತ್ತಿ​ದ್ದಾರೆ. ಇವರ ಕುಟುಂಬ ರಾಜ​ಕಾ​ರಣ, ಅನು​ಕೂ​ಲ​ಸಿಂಧು ಧೋರಣೆ, ಜನ​ವಿ​ರೋಧಿ ನಿಲುವು ಅರಿತು ಜನರು ಜೆಡಿ​ಎಸ್‌ಅನ್ನು ತಿರ​ಸ್ಕ​ರಿ​ಸು​ತ್ತಿ​ದ್ದಾರೆ. ಈ ತಪ್ಪನ್ನು ಮುಚ್ಚಿ​ಕೊ​ಳ್ಳಲು ಪಂಚ​ರತ್ನ ಯಾತ್ರೆ ಕೈಗೊಂಡಿ​ದ್ದಾರೆ ಅಂತ ಸಿಂಗ​ರಾ​ಜ​ಪುರ ರಾಜಣ್ಣ ತಿಳಿಸಿದ್ದಾರೆ. 
 

Follow Us:
Download App:
  • android
  • ios