Asianet Suvarna News Asianet Suvarna News

ಹಣ ಜಪ್ತಿ: ಪುಟ್ಟರಂಗ ಶೆಟ್ಟಿಗೆ ಸಿದ್ದರಾಮಯ್ಯ ಬುಲಾವ್, ಗುಪ್ತ್-ಗುಪ್ತ್ ಮೀಟಿಂಗ್

ವಿಧಾನಸೌಧದಲ್ಲಿ ಹಣ ಜಪ್ತಿ ಪ್ರಕರಣ ವಿವಾದ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

Siddaramaiah calls minister Puttaranga Shetty to seek information about cash seizure in Vidhana Soudha
Author
Bengaluru, First Published Jan 5, 2019, 10:26 PM IST

ಬೆಂಗಳೂರು, [ಜ.05]: ವಿಧಾನಸೌಧದಲ್ಲಿ ಹಣ ಜಪ್ತಿ ಪ್ರಕರಣ ವಿವಾದದ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಪುಟ್ಟರಂಗಶೆಟ್ಟಿಗೆ ಬುಲಾವ್​ ನೀಡಲಾಗಿದೆ.

ವಿಧಾನಸೌಧದಲ್ಲಿ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಟೈಪಿಸ್ಟ್​​ ಮೋಹನ್ ಸುಮಾರು 25 ಲಕ್ಷ ಅಕ್ರಮ ಹಣ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ವಿಧಾನಸೌಧದಲ್ಲೇ ಲಕ್ಷ ಲಕ್ಷ ಹಣದೊಂದಿದೆ ಪೊಲೀಸ್ ಬಲೆಗೆ ಸಚಿವರ ಆಪ್ತ : ಯಾರಾತ..?

ಈ ಹಿನ್ನೆಲೆ ತನ್ನನ್ನು ತಕ್ಷಣ ಭೇಟಿ ಮಾಡುವಂತೆ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯ ಬುಲಾವ್​​ ನೀಡಿದ್ದು, ಅದರಂತೆ  ಪುಟ್ಟರಂಗಶೆಟ್ಟಿ ಅವರು ಕಾವೇರಿ ನಿವಾಸಕ್ಕೆ ಬಂದು ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದರು.

ಮಾಜಿ ಸಿಎಂ ಆಪ್ತ ಸಚಿವರ ಸಿಬ್ಬಂದಿ ಬಳಿ ವಿಧಾನಸೌಧದಲ್ಲೆ ಲಕ್ಷಗಟ್ಟಲೆ ಹಣ ಪತ್ತೆ

ವಿಧಾನಸೌಧದಲ್ಲಿ ಹಣ ಜಪ್ತಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಳೆ [ಭಾನುವಾರ] ಬಿಜೆಪಿ ರಾಜ್ಯಾದ್ಯಾಂತ ಪ್ರತಿಭಟನೆಗೆ ಕರೆ ನೀಡಿದೆ.

Follow Us:
Download App:
  • android
  • ios