Asianet Suvarna News Asianet Suvarna News

ವಿಜಯೇಂದ್ರ ಇಲ್ಲಿಂದ ಚುನಾವಣೆ ಸ್ಪರ್ಧೆಗೆ BSYಗೆ ಮನಸ್ಸಿಲ್ಲ : ನಿಂತ್ರೆ ಗೆಲ್ಲೋದು 100%,

ವಿಜಯೇಂದ್ರ ಚುನಾವಣೆಗೆ ನಿಂತರೆ ಅವರು ಗೆಲ್ಲೋದು ಮಾತ್ರ ನೂರಕ್ಕೆ ನೂರು ಗ್ಯಾರಂಟಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ. 

Renukacharya Speaks About BY Vijayendra Politics snr
Author
Bengaluru, First Published Nov 5, 2020, 3:49 PM IST

ಬೆಂಗಳೂರು (ನ.05): ಸಿಎಂ ಬಿಎಸ್‌ ವೈ ಪುತ್ರ ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು, ಮುಖಂಡರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಸ್ಪರ್ಧೆ ಮಾಡೋ ಬಗ್ಗೆ ಎಲ್ಲೂ ಹೇಳಿಲ್ಲ. ಯುವ ನಾಯಕರಾಗಿ ವಿಜಯೇಂದ್ರ ಬೆಳೆಯುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.  

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ರೇಣುಕಾಚಾರ್ಯ  ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡಬಹುದು, ಹೇಳಲು ಆಗುವುದಿಲ್ಲ. ಸ್ಪರ್ಧೆ ಮಾಡಿದರೆ ಗೆಲ್ಲುವುದು ಮಾತ್ರ ಖಚಿತ. ಅವರು ಸ್ಪರ್ಧೆ ಮಾಡಲಿ ಅಂತ ಹೇಳೋ ಅಧಿಕಾರ ನನಗೆ ಇಲ್ಲ ಎಂದರು. 

ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ ...

ಬಸವಕಲ್ಯಾಣದಿಂದ ಸ್ಪರ್ಧೆಸಿದ್ರೆ ನೂರಕ್ಕೆ ನೂರು ಗೆಲ್ಲುತ್ತಾರೆ. ಆದರೆ ವಿಜಯೇಂದ್ರ ಹಾಗೂ ಸಿಎಂಗೆ ಆ ಮನಸ್ಸಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು. 

Follow Us:
Download App:
  • android
  • ios