Asianet Suvarna News Asianet Suvarna News

ಲೋಕ​ಸಭಾ ಚುನಾ​ವ​ಣೆಯಲ್ಲಿ ಸ್ಪರ್ಧಿ​ಸಲು ಸಿದ್ಧ: ಅಶೋಕ್‌ ಖೇಣಿ

ಪಕ್ಷದ ವರಿಷ್ಠರು ಲೊಕಸಭಾ ಚುನಾವಣೆ ಸ್ಪರ್ಧೆಗೆ ಸೂಚನೆ ನೀಡಿದರೆ ನಾನು ಸ್ಪರ್ಧೆ ಮಾಡುವುದಕ್ಕೆ ಸಿದ್ಧ ಎಂದು ಮಾಜಿ ಶಾಸ​ಕ, ನೈಸ್‌ ಸಂಸ್ಥೆಯ ಮುಖ್ಯ​ಸ್ಥ ಅಶೋಕ್‌ ಖೇಣಿ ತಿಳಿ​ಸಿ​ದ​ರು. 

Ready to Contest Lok Sabha Elections Says Ashok Kheny At Bidar gvd
Author
First Published Jun 15, 2023, 11:42 PM IST

ಬೀದ​ರ್‌ (ಜೂ.15): ಪಕ್ಷದ ವರಿಷ್ಠರು ಲೊಕಸಭಾ ಚುನಾವಣೆ ಸ್ಪರ್ಧೆಗೆ ಸೂಚನೆ ನೀಡಿದರೆ ನಾನು ಸ್ಪರ್ಧೆ ಮಾಡುವುದಕ್ಕೆ ಸಿದ್ಧ ಎಂದು ಮಾಜಿ ಶಾಸ​ಕ, ನೈಸ್‌ ಸಂಸ್ಥೆಯ ಮುಖ್ಯ​ಸ್ಥ ಅಶೋಕ್‌ ಖೇಣಿ ತಿಳಿ​ಸಿ​ದ​ರು. ಬೀದರ್‌ ದಕ್ಷಿಣ ಕ್ಷೇತ್ರದ ಬಗದಲ್‌ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಚಿಂತನ-ಮಂಥನ ಸಭೆಯಲ್ಲಿ ಮತದಾರರಿಗೆ ಧನ್ಯ​ವಾ​ದ​ಗ​ಳನ್ನು ಅರ್ಪಿಸಿ ಮಾತ​ನಾ​ಡಿದ ಅವ​ರು, ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ ಮತದಾರರು, ಪಕ್ಷದ ಪರವಾಗಿ ಪ್ರಚಾರ ನಡೆಸಿದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಗರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿ​ಸಿ​ದ​ರು.

ಮುಂಬರುವ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾ​ಯ​ತ್‌ ಚುನಾವಣೆಯಲ್ಲಿ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜಯಭೇರಿ ಸಾಧಿಸುವುದಕ್ಕೆ ಪೂರ್ವ ತಯಾರಿ ಮಾಡೋಣ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಸರ್ವ ಧರ್ಮದವರಿಗೆ ಸಮಾನವಾಗಿ ನೋಡುವ ಪಕ್ಷ ಕಾಂಗ್ರೆಸ್‌ ಎಂದು ಖೇಣಿ ತಿಳಿ​ಸಿ​ದ​ರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾದ ಬಸವರಾಜ ಜಾಬಶಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಅಮೃತರಾವ್‌ ಚಿಮಕೋಡೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ​ಮೀನಾಕ್ಷಿ ಸಂಗ್ರಾಮ್‌ ಮಾತಾನಾಡಿದರು.

ಟೋಲ್‌ ದರ ಏರಿಕೆ ಅನ್ಯಾ​ಯದ ಪರ​ಮಾ​ವ​ಧಿ: ಎಚ್‌.ಡಿ.ಕುಮಾರಸ್ವಾಮಿ

ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್‌ ಚನಶಟ್ಟಿ, ಕರೀಮಸಾಬ್‌ ಕಮಠಾಣ ಮುಖಂಡರಾದ ಬಾಬುರಾವ್‌ ತುಂಬಾ, ಪಂಡಿತ ಚಿದ್ರಿ, ತನ್ವೀರ ಆಹ್ಮದ್‌, ಶಾಮರಾವ್‌ ಬಂಬುಳಗಿ, ಅ​ಮೃತರಾವ್‌ ಪಾಟೀಲ, ಸಚಿನ್‌ ಮಲ್ಕಾಪೂರ, ರಮೇಶ ಹೌದಖಾನಿ, ಗೋವರ್ಧನ ರಾಠೋಡ, ಉದಯ ಕುಮಾರ್‌ ಮಲಶೆಟ್ಟಿ, ಬಶಿರೊದ್ದಿನ್‌ ಸೌದಗಾರ, ಲೋಕೇಶ ಮಂಗಲಗಿ, ಶಾಮರಾವ್‌ ಬಂಬುಳಗಿ, ಖಮಾಮ, ಗೌತಮ, ಜಯಪ್ರಕಾಶ ಉಪಸ್ಥಿತರಿದ್ದರು.

ಬೀದ​ರ್‌​ನಲ್ಲಿ ಕೃಷ್ಣಮೃಗ​ಗಳ ಸಂರಕ್ಷಿತ ಪ್ರದೇ​ಶ: ಬೀದರ್‌ ಜಿಲ್ಲೆ​ಯಲ್ಲಿ ಹೇರ​ಳ​ವಾ​ಗಿ​ರುವ ಕೃಷ್ಣ​ಮೃ​ಗ​ಗಳ ಸುರ​ಕ್ಷ​ತೆ​ಗಾಗಿ ಸಂರ​ಕ್ಷಿತ ಪ್ರದೇ​ಶ​ವನ್ನು ಗುರು​ತಿಸಿ ಬೇಲಿ ಹಾಕಿ ಅಪ​ರೂ​ಪದ ಈ ಪ್ರಾಣಿ​ಗ​ಳನ್ನು ಸಂರ​ಕ್ಷಿ​ಸ​ಲಾ​ಗು​ವದು ಎಂದು ಜಿಲ್ಲಾ ಉಸ್ತು​ವಾರಿ ಹಾಗೂ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಘೋಷಿ​ಸಿ​ದರು. ಅವರು ಜಿಪಂ ಸಭಾಂಗ​ಣ​ದಲ್ಲಿ ನಡೆದ ಜಿಲ್ಲಾಮಟ್ಟದ ಅಧಿ​ಕಾ​ರಿ​ಗಳ ಸಭೆ​ಯಲ್ಲಿ ಅರಣ್ಯ ಇಲಾಖೆ ಅಧಿ​ಕಾ​ರಿ​ಗ​ಳಿಗೆ ಕೃಷ್ಣ​ಮೃ​ಗ​ಗಳ ಗಣ​ತಿ​ಯನ್ನು ಮಾಡು​ವ​ದ​ಲ್ಲದೆ ಅವು​ಗಳ ಸಂರ​ಕ್ಷ​ಣೆಗೆ ಅಗತ್ಯ ಕ್ರಮ​ಗ​ಳನ್ನು ಕೈಗೊ​ಳ್ಳು​ವಂತೆ ಬರುವ ಎರಡು ವರ್ಷ​ಗ​ಳಲ್ಲಿ ಈ ಯೋಜನೆ ಜಾರಿ​ಗೊ​ಳಿ​ಸಲಾಗು​ವದು ಎಂದರು.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್‌ 1ರ ಅಡಿಯಲ್ಲಿ ಕೃಷ್ಣಮೃಗ ಬೇಟೆಯನ್ನು ನಿಷೇಧಿಸಲಾಗಿದ್ದು, ಇಂಥ​ದ್ದೊಂದು ಅಪ​ರೂ​ಪದ ಜೀವಿ ಬೀದರ್‌ ಜಿಲ್ಲೆ​ಯಲ್ಲಿ ಹೇರ​ಳ​ವಾಗಿ ಕಾಣ​ಬ​ಹು​ದಷ್ಟೇ ಅಲ್ಲದೇ, ಪ್ರವಾ​ಸಿ​ಗರ ಕಣ್ಮನ ಸೆಳೆದು ಪ್ರವಾ​ಸೋ​ದ್ಯಮ ಹೆಚ್ಚ​ಳಕ್ಕೂ ಕಾರ​ಣ​ವಾ​ಗಿ​ದೆ. ಆದರೆ ಬೆಳೆ​ಯು​ತ್ತಿ​ರುವ ನಗರ ಪ್ರದೇಶ, ಹಿಡಿ​ತ​ದ​ಲ್ಲಿ​ರದ ಬೇಟೆ​ಗಾ​ರರ ಕಾಟ​ದಿಂದ ಇವುಗಳ ಸಂತತಿ ದಿನೆ ದಿನೇ ಕ್ಷೀಣಿ​ಸು​ತ್ತಿ​ರುವ ಬೆನ್ನ​ಲ್ಲಿಯೇ ಅರಣ್ಯ ಸಚಿ​ವರ ಇಂಥ​ದ್ದೊಂದು ನಿರ್ಧಾರ ಕೃಷ್ಣ​ಮೃ​ಗ​ಗಳ ಸಂರ​ಕ್ಷ​ಣೆ​ಗೆ ಹೆಚ್ಚಿನ ಮಹತ್ವ ಸಿಕ್ಕಂತಾ​ಗಿ​ದೆ.

ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್‌ ತಿರುಗೇಟು

ನವಿಲು ಧಾಮ ನಿರ್ಮಾ​ಣಕ್ಕೆ ಡಾ. ಬೆಲ್ದಾಳೆ ಆಗ್ರ​ಹ: ಈ ಸಂದ​ರ್ಭ​ದಲ್ಲಿ ಮಾತ​ನಾ​ಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕೃಷ್ಣ​ಮೃ​ಗ​ಗಳ ಸಂರ​ಕ್ಷಿತ ಪ್ರದೇಶ ಮಾಡಿ​ದಂತೆ ಜಿಲ್ಲೆ​ಯಲ್ಲಿ ಹೇರ​ಳ​ವಾ​ಗಿ​ರುವ ನವಿ​ಲು​ಧಾಮ ಮಾಡು​ವಂತೆ ಕೋರಿ​ದ್ದಕ್ಕೆ ಸಚಿವ ಖಂಡ್ರೆ ಮುಂದಿ​ನ ದಿನ​ಗ​ಳಲ್ಲಿ ಈ ಕುರಿ​ತಂತೆ ಗಮ​ನ​ಹ​ರಿ​ಸೋಣ ಎಂದರು. ರಾಜ್ಯಾ​ದ್ಯಂತ ಅರ​ಣ್ಯೀ​ಕ​ರಣ ಹೆಚ್ಚಳ ಮಾಡುವ ಹಿನ್ನೆ​ಲೆ​ಯಲ್ಲಿ 5ಕೋಟಿ ಸಸಿ​ಗ​ಳನ್ನು ನೆಟ್ಟು ಪೋಷಿ​ಸುವ ಗುರಿ ಹೊಂದಿದ್ದು, ಬರುವ ಎರಡು ತಿಂಗ​ಳಲ್ಲಿ ಬೀದರ್‌ ಜಿಲ್ಲೆ​ಯಲ್ಲಿ 5ಲಕ್ಷ ಸಸಿ​ಗ​ಳನ್ನು ನೆಟ್ಟು ಪೋಷಿ​ಸಲಾ​ಗು​ವದು ಎಂದು ಸಚಿವ ಈಶ್ವರ ಖಂಡ್ರೆ ತಿಳಿ​ಸಿ​ದರು.

Follow Us:
Download App:
  • android
  • ios