ವೈಯಕ್ತಿಕ ದ್ವೇಷ ಬಿಟ್ಟು ಒಗ್ಗಟ್ಟಿಂದ ಚುನಾವಣೆಗೆ ಸ್ಪರ್ಧೆ : ಪೈಲಟ್
ಚುನಾವಣೆ ಹೊಸ್ತಿಲಲ್ಲಿರುವ ನಾವು ವೈಯಕ್ತಿಕ ದ್ವೇಷ ಬಿಟ್ಟು ನಾವೆಲ್ಲ ಒಂದು ಎಂಬ ಭಾವನೆಯಿಂದ ಚುನಾವಣೆ ಎದುರಿಸಬೇಕು ಎಂದು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ನವದೆಹಲಿ: ‘ಚುನಾವಣೆ ಹೊಸ್ತಿಲಲ್ಲಿರುವ ನಾವು ವೈಯಕ್ತಿಕ ದ್ವೇಷ ಬಿಟ್ಟು ನಾವೆಲ್ಲ ಒಂದು ಎಂಬ ಭಾವನೆಯಿಂದ ಚುನಾವಣೆ ಎದುರಿಸಬೇಕು ಎಂದು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಕೋಟ್ ವಿರುದ್ಧದ ಸಮರ ನಿಲ್ಲಿಸುವ ಸುಳಿವು ನೀಡಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನದ್ದೆಲ್ಲ ಬಿಟ್ಟು ಮುಂದೆ ಆಗುವುರ ಬಗ್ಗೆ ಗಮನ ಕೊಡಬೇಕು ಎಂದು ಸಂದೇಶ ನೀಡಿದ್ದಾರೆ. ಅದರಂತೆ ಮುಖ್ಯಮಂತ್ರಿ ಗೆಹ್ಲೋಟ್ ನನಗಿಂತ ಹಿರಿಯರು, ಅವರಿಗೆ ಅಪಾರ ಅನುಭವ ಇದೆ. ಅವರ ಜವಾಬ್ದಾರಿಯೂ ಅಪಾರ. ಚುನಾವಣೆ ಇರುವಾಗ ವೈಯಕ್ತಿಕ ದ್ವೇಷ ಬಿಟ್ಟು, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ ಎಂದರು. ಇಲ್ಲಿ ಯಾರು, ಯಾವಾಗ, ಏನು ಹೇಳಿದರು ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಜನತೆಗೆ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಸರ್ಕಾರ ಬೇಕಿದೆ. ನಮ್ಮ ಮುಂದಿನ ಸವಾಲು ಚುನಾವಣೆ ಎದುರಿಸಿ ಗೆಲುವು ಸಾಧಿಸಬೇಕಿದೆ. ನಾವು ಒಗ್ಗಟ್ಟಾಗಿ ಹಿಂದಿನ ಅವಧಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.
ರಾಜಸ್ಥಾನ ಸಿಎಂಗೆ ಮುಖಭಂಗ: ಸಚಿನ್ ಪೈಲಟ್ ಪರ ಬ್ಯಾಟ್ ಬೀಸಿದ ಗೆಹ್ಲೋಟ್ ಸರ್ಕಾರದ ಸಚಿವ..!
Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್ಸ್ಟಾರ್ ಆದ್ರಲ್ಲಾ?