Asianet Suvarna News Asianet Suvarna News

ಕೇಂದ್ರ ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ನೀಟ್ ಸೇರಿದಂತೆ 4 ನಿರ್ಣಯ ಪಾಸ್

ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಮುಡಾ ಪ್ರಕರಣದ ಸಂಬಂಧ ಧರಣಿ ನಡೆಸುತ್ತಿರುವಾಗಲೇ ವಿಧಾನಸಭೆಹಾಗೂ ವಿಧಾನಪರಿಷತ್‌ನಲ್ಲಿ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ನಾಲ್ಕು ನಿರ್ಣಯಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. 
 

Passed 4 resolutions including NEET in Legislature against Central Govt gvd
Author
First Published Jul 26, 2024, 6:43 AM IST | Last Updated Jul 26, 2024, 10:41 AM IST

ವಿಧಾನಮಂಡಲ (ಜು.26): ಕೇಂದ್ರ ಸರ್ಕಾರದ 'ನೀಟ್' ವಿರೋಧಿಸುವುದು, ಒಂದು ದೇಶ ಒಂದು ಚುನಾವಣೆ ನೀತಿಯನ್ನು ಅನುಷ್ಠಾನಗೊಳಿಸದಂತೆ ಒತ್ತಾಯಿಸುವುದು, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು 1971ರ ಜನಸಂಖ್ಯೆ ಆಧಾರದ ಮೇಲೆಯೇ ನಡೆಸುವಂತೆ ಆಗ್ರಹಿಸುವುದು ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿ ನಾಲ್ಕು ನಿರ್ಣಯಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು. ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಮುಡಾ ಪ್ರಕರಣದ ಸಂಬಂಧ ಧರಣಿ ನಡೆಸುತ್ತಿರುವಾಗಲೇ ವಿಧಾನಸಭೆಹಾಗೂ ವಿಧಾನಪರಿ ಷತ್‌ನಲ್ಲಿ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ನಾಲ್ಕು ನಿರ್ಣಯಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. 

ಕೇಂದ್ರದ ಬುಡಕಟ್ಟು ಅಧಿನಿಯಮಕ್ಕೆ ತಿದ್ದುಪಡಿಗೆ ಒತ್ತಾಯಿಸುವ ನಿರ್ಣಯ 4ನೆಯದ್ದಾಗಿದೆ. ಈ ವೇಳೆ ಮುಡಾ ಗದ್ದಲದ ನಡುವೆಯೇ ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧದ ನಿರ್ಣಯಕ್ಕೆ ಬಿಜೆಪಿ ಸದಸ್ಯರ ಪರ ಪ್ರತಿಪಕ್ಷ ನಾಯಕ ಆ೯. ಅಶೋಕ್ ಬೆಂಬಲ ಘೋಷಿಸಿದರು. 'ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು ಈಗಿನ ಜನಗಣತಿ ಪ್ರಕಾರ ಮಾಡಬಾರದು. ಲೋಕಸಭೆ ಕ್ಷೇತ್ರಗ ಳನ್ನು ಕಡಿಮೆ ಮಾಡಿ ಲೋಕಸಭೆಯಲ್ಲಿ ರಾಜ್ಯದಪ್ರಾತಿನಿಧ್ಯತೆ ಕಡಿಮೆಮಾಡಬಾರದು. ರಾಜ್ಯ ಸರ್ಕಾರದ ಈ ನಿರ್ಣಯಕ್ಕೆ ನಮ್ಮ ಬೆಂಬಲವಿದೆ' ಎಂದು ತಿಳಿಸಿದರು. 

ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ, ರಾಜ್ಯಕ್ಕೆ ಮಾತ್ರ: ಸುಪ್ರೀಂಕೋರ್ಟ್‌ ತೀರ್ಪು

ನೀಟ್‌ಗೆ ವಿನಾಯಿತಿ ನೀಡಿ, ಸಿಇಟಿ ಪರಿಗಣಿಸಿ: ಪುನರಾವರ್ತಿತ ಅಕ್ರಮಗಳಿಂದ ನೀಟ್ ಮೇಲೆ ವಿಶ್ವಾಸ ಹೋಗಿದೆ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್‌ನಿಂದ ವಿನಾ ಯಿತಿ ನೀಡಿ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕ ಆಧರಿಸಿ ವೈದ್ಯಕೀಯ ಕಾಲೇಜುಗಳ ಪ್ರವೇಶಾ ತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು. 

1971ರ ಜನಗಣತಿ ಆಧರಿಸಿ ಕ್ಷೇತ್ರ ವಿಂಗಡಣೆ ಮಾಡಿ: ಕೇಂದ್ರ ಸರ್ಕಾರವು 2026ರಲ್ಲಿ ನಡೆವ ಅಥವಾ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ನಡೆಸಬಾರದು. ಈ ರೀತಿ ಮಾಡಿದರೆ ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಸ್ಥಾನಗಳು ಕಡಿಮೆಯಾಗಲಿವೆ. ರಾಜ್ಯದ ಪ್ರಾತಿನಿಧ್ಯತೆ ಕುಸಿಯಲಿದೆ ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.

ಒಂದು ದೇಶ, ಒಂದು ಚುನಾವಣೆ ಬೇಡ: ದೇಶದ ಪ್ರಾದೇಶಿಕತೆ, ಸಮಗ್ರತೆಗೆ ಧಕ್ಕೆ ತರುವ ಒಂದು ದೇಶ, ಒಂದು ಚುನಾವಣೆಯಂತಹ ಕಠೋರ ನೀತಿ ಅನುಷ್ಠಾನ ಬೇಡ ಎಂದು ಒತ್ತಾಯಿಸುವ ನಿರ್ಣಯವನ್ನೂ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಯಿತು. ಈ ನಿರ್ಣಯವನ್ನು ಬಿಜೆಪಿ ಸದಸ್ಯರು ವಿರೋಧಿಸಿ ಒಂದು ದೇಶ, ಒಂದು ಚುನಾವಣೆ ಪರವಾಗಿ ಮಾತನಾಡಿದರು.

ಕೊಲೆ ಆರೋಪಿ ದರ್ಶನ್‌ಗೆ ಬಿರಿಯಾನಿ ಕೊಡಲಾಗದು: ಕೋರ್ಟ್‌ ಹೇಳಿದ್ದೇನು?

ಕೇಂದ್ರದ ಬುಡಕಟ್ಟು ಅಧಿನಿಯಮಕ್ಕೆ ತಿದ್ದುಪಡಿಗೆ ಒತ್ತಾಯ: ಅರಣ್ಯ ಇಲಾಖೆ ವತಿ ಯಿಂದ ನಿರ್ಣಯ ಮಂಡಿಸಿದ ಸಚಿವ ಈಶ್ವ‌ ಖಂಡ್ರೆ, ಕೇಂದ್ರ ಸರ್ಕಾರವು 2005ಕ್ಕೆ ಮೊದಲು ಅರಣ್ಯದಲ್ಲಿ ವಾಸಿಸುತ್ತಿದ್ದ ಬುಡ ಕಟ್ಟು ಜನರಿಗೆ ರಕ್ಷಣೆ ನೀಡಲು ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ ಜಾರಿಗೆ ತಂದಿದೆ. ಇದರಲ್ಲಿ ಬುಡಕಟ್ಟು ಜನರಿಗೆ ಮಾತ್ರವಲ್ಲದೆ ಇತರೆ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿ ಸಲು ವಿಧೇಯಕವನ್ನು ಸಮರ್ಪಕವಾಗಿ ಮಾರ್ಪಾಡು ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ನಿರ್ಣಯ ತರಲಾಗಿದೆ' ಎಂದು ಹೇಳಿದರು. ಈ ನಿರ್ಣಯವು ಉಭಯ ಸದನಗಳಲ್ಲಿ ಸರ್ವಾನು ಮತದಿಂದ ಅಂಗೀಕಾರಗೊಂಡಿತು.

Latest Videos
Follow Us:
Download App:
  • android
  • ios