Asianet Suvarna News Asianet Suvarna News

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ​ ಅವರು ತಮ್ಮ ಅಧಿ​ಕಾ​ರದ ಅವ​ಧಿ​ಯಲ್ಲಿ ನೀಡಿದ ಕಾರ್ಯ​ಕ್ರ​ಮ​ಗ​ಳನ್ನು ಜನರು ಮರೆ​ತಿಲ್ಲ. ಅವರ ಮೇಲೆ ನಾಡಿನ ಜನರು ಹೆಚ್ಚಿನ ವಿಶ್ವಾಸ ಇಟ್ಟು​ಕೊಂಡಿ​ದ್ದಾರೆ ಎಂಬು​ದಕ್ಕೆ ಪಂಚ​ರತ್ನ ರಥ​ಯಾ​ತ್ರೆಗೆ ಸಿಗು​ತ್ತಿ​ರುವ ಅಭೂ​ತ​ಪೂರ್ವ ಬೆಂಬ​ಲವೇ ಸಾಕ್ಷಿ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ತಿಳಿ​ಸಿ​ದರು. 

Nikhil Kumaraswamy Talks About HD Kumaraswamy At Ramanagara gvd
Author
First Published Dec 12, 2022, 10:56 AM IST

ರಾಮ​ನ​ಗ​ರ (ಡಿ.12): ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ​ ಅವರು ತಮ್ಮ ಅಧಿ​ಕಾ​ರದ ಅವ​ಧಿ​ಯಲ್ಲಿ ನೀಡಿದ ಕಾರ್ಯ​ಕ್ರ​ಮ​ಗ​ಳನ್ನು ಜನರು ಮರೆ​ತಿಲ್ಲ. ಅವರ ಮೇಲೆ ನಾಡಿನ ಜನರು ಹೆಚ್ಚಿನ ವಿಶ್ವಾಸ ಇಟ್ಟು​ಕೊಂಡಿ​ದ್ದಾರೆ ಎಂಬು​ದಕ್ಕೆ ಪಂಚ​ರತ್ನ ರಥ​ಯಾ​ತ್ರೆಗೆ ಸಿಗು​ತ್ತಿ​ರುವ ಅಭೂ​ತ​ಪೂರ್ವ ಬೆಂಬ​ಲವೇ ಸಾಕ್ಷಿ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ತಿಳಿ​ಸಿ​ದರು. 

ನಗ​ರದ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ ಅವರ ಹುಟ್ಟುಹಬ್ಬದ ಅಂಗ​ವಾಗಿ ಆಯೋಜಿಸು​ತ್ತಿ​ರುವ ಶ್ರೀ ಶ್ರೀನಿ​ವಾಸ ಕಲ್ಯಾ​ಣೋ​ತ್ಸವ ಕಾರ್ಯ​ಕ್ರ​ಮದ ವೇದಿಕೆ ನಿರ್ಮಾಣ ಕಾರ್ಯ ವೀಕ್ಷಿ​ಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕುಮಾ​ರ​ಸ್ವಾ​ಮಿ​ ಅವರ ಮೇಲಿನ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟುಹೆಚ್ಚಾ​ದಂತೆ ಪಂಚ​ರತ್ನ ರಥ​ಯಾ​ತ್ರೆ​ಯಿಂದ ವ್ಯಕ್ತ​ವಾ​ಗು​ತ್ತಿದೆ ಎಂದ​ರು. ರಾಷ್ಟ್ರೀಯ ಪಕ್ಷ​ಗ​ಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾ​ರ​ಗಳ ಆಡ​ಳಿತ ವೈಖ​ರಿ​ಯನ್ನು ನೋಡಿ ಜನರು ರೋಸಿ ಹೋಗಿ​ದ್ದಾರೆ. ಕುಮಾ​ರ​ಸ್ವಾ​ಮಿ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿ​ತ​ರಾ​ಗದೆ ಆಡ​ಳಿತ ನಡೆಸಿ ತೋರಿ​ಸಿ​ದ್ದಾರೆ. ಹೀಗಾ​ಗಿಯೇ ಕುಮಾ​ರ​ಸ್ವಾ​ಮಿ​ ಮೇಲೆ ಜನರು ಹೆಚ್ಚಿನ ಭರ​ವಸೆ ಇಟ್ಟು​ಕೊಂಡಿ​ದ್ದಾರೆ ಎಂದು ಹೇಳಿ​ದ​ರು.

ಎಚ್ಡಿಕೆ ಸಿಎಂ ಆಗುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ: ನಿಖಿಲ್‌ ಕುಮಾರಸ್ವಾಮಿ

ಪ್ರತಿ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ 30ರಿಂದ 40 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸು​ತ್ತಿತ್ತು. ಮೈತ್ರಿ ಸರ್ಕಾರ ರಚನೆ ಮಾಡಿ ಆಡ​ಳಿತ ನಡೆ​ಸುವ ಅನಿ​ವಾ​ರ್ಯತೆ ಸೃಷ್ಟಿ​ಯಾ​ಗು​ತ್ತಿ​ತ್ತು. ಈ ಬಾರಿ ಅದಕ್ಕೆ ಅವ​ಕಾಶ ನೀಡ​ಬಾ​ರ​ದೆಂಬ ಕಾರ​ಣ​ದಿಂದ ಪಂಚ​ರತ್ನ ಯೋಜ​ನೆ​ಗ​ಳನ್ನು ಮುಂದಿ​ಟ್ಟುಕೊಂಡು ಜನರ ಎದುರು ಹೋಗು​ತ್ತಿ​ದ್ದೇವೆ. ಮೈತ್ರಿ ಸರ್ಕಾ​ರದ ಒತ್ತ​ಡ​ದಲ್ಲಿ ಕುಮಾ​ರ​ಸ್ವಾ​ಮಿ​ರ​ವರ ಆಡ​ಳಿತ ವೈಖರಿ ಕಣ್ಣ ಮುಂದಿದೆ. ಸ್ವತಂತ್ರ​ವಾಗಿ ಸರ್ಕಾರ ರಚನೆಯಾ​ದರೆ ಎಲ್ಲ​ವನ್ನೂ ಸಾಕಾ​ರ​ಗೊ​ಳಿ​ಸಲು ಸಾಧ್ಯ​ವಾ​ಗು​ತ್ತದೆ. ಹಾಗಾಗಿ ಕುಮಾ​ರ​ಸ್ವಾ​ಮಿ ಹೋರಾ​ಟಕ್ಕೆ ಜನರು ಕೈಜೋಡಿ​ಸುವ ಅನಿ​ವಾ​ರ್ಯತೆ ಇದೆ ಎಂದು ತಿಳಿ​ಸಿ​ದರು.

ವರಿ​ಷ್ಠರ ತೀರ್ಮಾ​ನಕ್ಕೆ ಬದ್ಧ: ನಿಖಿಲ್‌ ಕುಮಾ​ರ​ಸ್ವಾಮಿ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸು​ತ್ತಾ​ರೆಯೇ ಎಂಬ ಪತ್ರ​ಕ​ರ್ತರ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ನಾನು ಸ್ಪರ್ಧಿ​ಸು​ತ್ತಿನೊ, ಸ್ಪರ್ಧಿ​ಸು​ವು​ದಿ​ಲ್ಲವೊ ಎಂಬು​ದನ್ನು ಹೇಳಲ್ಲ. ನಾನು ಸ್ವಾರ್ಥಿಯಾಗಲು ಇಷ್ಟಪಡು​ವು​ದಿಲ್ಲ. ಪಕ್ಷದ ವರಿ​ಷ್ಠರು ಏನು ತೀರ್ಮಾನ ಮಾಡು​ತ್ತಾರೊ ಅದಕ್ಕೆ ಬದ್ಧ​ನಾಗಿರುತ್ತೇನೆ. ನಾನು ಪಕ್ಷ ಸಂಘಟನೆಗೆ ಮೊದಲು ಆದ್ಯತೆ ನೀಡುತ್ತೇನೆ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದ​ರು.

ಶಿಕ್ಷಣ, ಆರೋಗ್ಯ, ವಸತಿ, ಕೃಷಿ ಹಾಗೂ ಉದ್ಯೋಗದಂತಹ ಪ್ರಮುಖ ಕಾರ್ಯ​ಕ್ರ​ಮ​ಗಳು ಪಂಚ​ರತ್ನ ಯೋಜ​ನೆ​ಯ​ಲ್ಲಿವೆ. ಈ ಕಾರ್ಯ​ಕ್ರ​ಮ​ಗಳು ಅನು​ಷ್ಠಾ​ನ​ಗೊ​ಳ್ಳ​ಬೇ​ಕಾ​ದರೆ ಜೆಡಿ​ಎಸ್‌ ಪಕ್ಷ ಬಹು​ಮ​ತ​ದೊಂದಿಗೆ ಅಧಿ​ಕಾ​ರಕ್ಕೆ ಬರ​ಬೇಕು. ಈ ಯೋಜ​ನೆ​ಗಳ ಅನು​ಷ್ಠಾ​ನಕ್ಕೆ ನಾಡಿನ ಜನರು ಆಶೀ​ರ್ವಾದ ಮಾಡು​ತ್ತಾ​ರೆಂಬ ವಿಶ್ವಾಸವಿದೆ. ರಥ​ಯಾತ್ರೆ ಆರಂಭ​ಗೊಂಡ ದಿನ​ದಿಂದ ಇಲ್ಲಿ​ವ​ರೆಗೂ ಅಭೂತಪೂರ್ವ ಬೆಂಬಲ ಸಿಗು​ತ್ತಿದೆ. ತಡ​ರಾತ್ರಿ 3 ಗಂಟೆಯಾದರೂ ಜನರು ನಿರೀಕ್ಷೆ ಮೀರಿ ಸ್ವಾಗ​ತಿ​ಸು​ತ್ತಿ​ದ್ದಾರೆ. ಅದೇ ರೀತಿ ರಥ​ಯಾತ್ರೆ ರಾಮ​ನ​ಗ​ರಕ್ಕೆ ಆಗ​ಮಿ​ಸಿ​ದಾಗ ಐತಿ​ಹಾ​ಸಿಕ ಕ್ಷಣ​ಗ​ಳಿಗೆ ಸಾಕ್ಷಿ​ಯಾ​ಗ​ಲಿದೆ ಎಂಬು​ದ​ರಲ್ಲಿ ಅನು​ಮಾನ ಇಲ್ಲ ಎಂದು ಹೇಳಿ​ದರು.

ಮಳೆಯ ಕಾರಣ ಕೆಲ​ವೆಡೆ ರಥ​ಯಾತ್ರೆ ರದ್ದು ಪಡಿ​ಸ​ಲಾ​ಗಿದೆ. ಡಿ.15ರಂದು ಮಾಗಡಿ ಕ್ಷೇತ್ರ ಪ್ರವೇ​ಶಿ​ಸ​ಲಿ​ರುವ ಯಾತ್ರೆ ಡಿ.16ರಂದು ರಾಮನಗರ ಕ್ಷೇತ್ರ​ದಲ್ಲಿ ಸಂಚ​ರಿ​ಸ​ಲಿದೆ. ಆನಂತ ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರ​ದಲ್ಲಿ ಸಂಚ​ರಿ​ಸಿದ ನಂತರ ಮಂಡ್ಯ ಪ್ರವೇಶೀಸಲಿದೆ. ಡಿ.16ರಂದು ಕುಮಾ​ರ​ಸ್ವಾ​ಮಿ​ರ​ವರು ಜನ್ಮ​ದಿನ ಪ್ರಯುಕ್ತ ರಾಮ​ನ​ಗ​ರ​ದಲ್ಲಿ ಶ್ರೀನಿ​ವಾಸ ಕಲ್ಯಾ​ಣೋ​ತ್ಸವ ಆಯೋ​ಜನೆ ಮಾಡಿ​ದ್ದೇವೆ. ನಮ್ಮ ಕುಟುಂಬದವ​ರು ದೇವ​ರನ್ನು ತುಂಬಾ ನಂಬು​ತ್ತೇ​ವೆ. ತಿರುಪತಿ ತಿಮ್ಮಪ್ಪ ನಮಗೆ ಶಕ್ತಿ ನೀಡಿದ್ದು ಐತಿಹಾಸಿಕ ಕಾರ್ಯಕ್ರಮದ ಮೂಲಕ ಮುನ್ನಡೆಯುತ್ತೇವೆ. ನಮಗೆ ಎಲ್ಲ ಧರ್ಮದ ಮೇಲೆ ಪ್ರೀತಿ ಗೌರವ ಇದೆ. ವಿಶೇಷವಾಗಿ ರಾಜ್ಯದ ಅಭಿವೃದ್ಧಿಗೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪೂಜೆ ನಡೆಸುತ್ತಿದ್ದೇವೆ ಎಂದು ತಿಳಿ​ಸಿ​ದ​ರು.

ಶ್ರೀನಿ​ವಾಸ ಕಲ್ಯಾ​ಣೋ​ತ್ಸ​ವವನ್ನು ಪಕ್ಷಾ​ತೀ​ತ​ವಾಗಿ ನಡೆ​ಸು​ತ್ತಿ​ದ್ದೇವೆ. ಮೂಲದೇವರ ವಿಗ್ರಹವನ್ನು 11 ಕಲಾತಂಡಗಳೊಂದಿಗೆ ರಾಮನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಧಾರ್ಮಿಕ ಕಾರ್ಯ​ಕ್ರ​ಮದ ವೇದಿ​ಕೆ​ಯಲ್ಲಿ ಮಾಜಿ ಪ್ರಧಾನಿ ದೇವೇ​ಗೌಡ, ಚೆನ್ನಮ್ಮ, ಕುಮಾ​ರ​ಸ್ವಾಮಿ, ಅನಿತಾ ಕುಮಾ​ರ​ಸ್ವಾಮಿ ಅವ​ರನ್ನು ಹೊರ​ತು ಪಡಿಸಿ ಬೇರೆ ಯಾರೂ ಇರು​ವು​ದಿಲ್ಲ. ಧಾರ್ಮಿಕ ಕಾರ್ಯ​ಕ್ರ​ಮ​ದಲ್ಲಿ ಸಹ​ಸ್ರಾರು ಜನರು ಭಾಗ​ವ​ಹಿ​ಸುವ ನಿರೀ​ಕ್ಷೆ​ಯಿದೆ. ಕ್ರೀಡಾಂಗ​ಣ​ದಲ್ಲಿ 30 ಸಾವಿರ ಜನರು ಕುಳಿತು ಕಾರ್ಯ​ಕ್ರಮ ವೀಕ್ಷಣೆ ಮಾಡಲು ಅನು​ಕೂ​ಲ​ವಾ​ಗು​ವಂತೆ ಆಸ​ನ ಹಾಗೂ ಭಕ್ತ​ರಿಗೆ ಪ್ರಸಾ​ದದ ವ್ಯವಸ್ಥೆ ಮಾಡ​ಲಾ​ಗು​ತ್ತಿದೆ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದ​ರು.

ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್‌ ಕುಮಾರಸ್ವಾಮಿ

ನಗ​ರ​ಸಭಾ ಸದ​ಸ್ಯ​ರಾದ ಮುನ​ಜಿಲ್‌ ಆಗಾ, ಗ್ಯಾಬ್ರಿ​ಯಲ್‌, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ಮುಖಂಡ​ರಾದ ಬಿ.ಉ​ಮೇಶ್‌, ಅಶ್ವತ್‌್ಥ, ರಾಜ​ಶೇ​ಖರ್‌, ಜಯ​ಕು​ಮಾರ್‌, ಅತಾ​ವುಲ್ಲಾ , ಗೂಳಿ​ಗೌಡ, ಹನುಮಂತ, ಪ್ರಕಾಶ್‌, ಗ್ರಾಪಂ ಸದಸ್ಯ ಬೋರೇ​ಗೌ​ಡ ಇತರರಿದ್ದ​ರು.

Follow Us:
Download App:
  • android
  • ios