Asianet Suvarna News Asianet Suvarna News

ಲಿಂಗಪ್ಪರಿಗೆ ವಯ​ಸ್ಸಾಗಿದೆ ಅಭಿ​ವೃದ್ಧಿ ಕೆಲಸ ಕಾಣು​ತ್ತಿಲ್ಲ: ಅನಿತಾ ಕುಮಾರಸ್ವಾಮಿ

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಅಭಿ​ವೃದ್ಧಿ ​ಕೆ​ಲ​ಸ​ಗಳು ಕಣ್ಣಿಗೆ ಕಾಣುತ್ತಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹರಿಹಾಯ್ದರು. 

MLA Anitha Kumaraswamy Slams On CM Lingappa At Ramanagara gvd
Author
First Published Dec 27, 2022, 1:30 AM IST

ರಾಮ​ನ​ಗರ (ಡಿ.27): ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಅಭಿ​ವೃದ್ಧಿ ​ಕೆ​ಲ​ಸ​ಗಳು ಕಣ್ಣಿಗೆ ಕಾಣುತ್ತಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹರಿಹಾಯ್ದರು. ನಗರಸಭೆ ವ್ಯಾಪ್ತಿಯ ವಾರ್ಡು​ಗ​ಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿದ ಅವರು, ಲಿಂಗಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಈಗ​ಲಾ​ದರು ಅವರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಈಗ ಕೋಟ್ಯಂತರ ರುಪಾಯಿ ವೆಚ್ಚದ ಅಭಿ​ವೃದ್ಧಿ ಕಾಮ​ಗಾ​ರಿಗೆ ಚಾಲನೆ ನೀಡು​ತ್ತಿ​ದ್ದೇವೆ. ಜನರ ಸಮಸ್ಯೆ ಬಗೆ​ಹ​ರಿ​ಸುತ್ತಿದ್ದೇವೆ. 

ಇದನ್ನು ಅಭಿ​ವೃದ್ಧಿ ಅನ್ನದೇ ಮತ್ತೇನು ಹೇಳು​ತ್ತಾರೆ. ವಿಪಕ್ಷ ನಾಯ​ಕರು ಆರೋಪ ಮಾಡದೆ ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಜತೆ ಬಂದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನೇ ಮುಂದಿನ ತಿಂಗಳು ಬಸ್‌ ವ್ಯವಸ್ಥೆ ಮಾಡುತ್ತೇನೆ. ವಿಕ್ಷಪದವರು ನಮ್ಮ ಜತೆಗೆ ಬರಲಿ, ನಾವು ಏನೇನು ಅಭಿ​ವೃದ್ಧಿ ಕೆಲಸ ಮಾಡಿ​ದ್ದೇವೆ ಎಂಬು​ದನ್ನು ತೋರಿ​ಸು​ತ್ತೇವೆ. ಸಾಧ್ಯವಾದರೆ ಅಭಿ​ವೃದ್ಧಿ ಕಾರ್ಯ​ಗ​ಳಿಗೆ ಸಹ​ಕಾರ ನೀಡಲಿ. ಲಿಂಗಪ್ಪರವರು ಹಿರಿ​ಯ​ರು ನಮಗೆ ಮಾರ್ಗ​ದ​ರ್ಶನ ಮಾಡಲಿ, ಅದನ್ನು ಸ್ವೀಕ​ರಿ​ಸು​ತ್ತೇವೆ. ನಾವು ಏನೇ ಅಭಿವೃದ್ಧಿ ಕಾರ್ಯ ಮಾಡಿದರು.

Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ವಿಪಕ್ಷದ ಮುಖಂಡರು ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ವಿರೋಧ ಪಕ್ಷಗಳು ಕಾಮಗಾರಿಯಲ್ಲಿ ರಾಜಕೀಯ ಮಾಡದೆ ನಮಗೂ ಸಹಕಾರ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈ ಜೋಡಿಸಲಿ ಎಂದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ 450 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದ್ದು, ಎಲ್ಲರಿಗೂ ಅನುಕೂಲವಾಗಲಿದೆ. ನಿವೇಶನ ಹಂಚಿಕೆ ವಿಷಯವಾಗಿ ಈ ಹಿಂದೆಯೇ ಗುದ್ದಲಿ ಪೂಜೆ ಮಾಡಲಾಗಿತ್ತು. ಆದರೆ, ಅಲ್ಲಿಯು ರಾಜಕೀಯ ಮಾಡಿ ನಿಲ್ಲಿಸಿದರು ಎಂದು ಕಿಡಿ​ಕಾ​ರಿ​ದ​ ಶಾಸಕರು, ಕುಟುಂಬ ರಾಜಕಾರಣ ನಮ್ಮ ಪಕ್ಷ​ದಲ್ಲಿ ಮಾತ್ರ​ವಲ್ಲ.

ಎಲ್ಲ ರಾಜ​ಕೀಯ ಪಕ್ಷ​ಗ​ಳ​ಲ್ಲಿಯೂ ಇದೆ. ಜನರು ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ತಿಳಿದಿದ್ದಾರೆ. ಅವರಿಗೆ ಬೆಂಬಲ ನೀಡಿ ಆಶೀ​ರ್ವಾದ ಮಾಡುತ್ತಾರೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡುಗಳಲ್ಲಿ 9.87 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಪಾಕರ್‌ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಗುಣಮಟ್ಟಕಾಪಾಡಿಕೊಳ್ಳಬೇಕೆಂದು ಸೂಚಿಸಿದ್ದೇನೆ ಎಂದು ತಿಳಿ​ಸಿ​ದ​ರು. ​ಜೆ​ಡಿ​ಎಸ್‌ ತಾಲೂ​ಕು ಅಧ್ಯಕ್ಷ ರಾಜ​ಶೇ​ಖರ್‌ ಇತರರಿದ್ದರು.

ಅಭಿವೃದ್ಧಿಯೇ ಜೆಡಿಎಸ್‌ ಧ್ಯೇಯ: ಗ​ರ​ಸಭೆ ವ್ಯಾಪ್ತಿಯ ವಿವಿಧ ವಾರ್ಡು​ಗ​ಳಲ್ಲಿ 10.40 ಕೋಟಿ ರು. ವೆಚ್ಚದ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೆ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಸೋಮ​ವಾರ ಭೂಮಿಪೂಜೆ ನೆರ​ವೇ​ರಿ​ಸಿ​ ಚಾಲನೆ ನೀಡಿದ​ರು. ನಗ​ರದ 23ನೇ ವಾರ್ಡಿನ ಟಿಪ್ಪು ಶಾಲೆ ಬಳಿಯ ಸೀರಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ, 22ನೇ ವಾರ್ಡಿನ ಕೊತ್ತೀಪುರ ಮುಖ್ಯರಸ್ತೆ ಡಾಂಬರೀಕರಣ , 11ನೇ ವಾರ್ಡಿ​ನಲ್ಲಿ ಜೋಡಿ ರಸ್ತೆ ಡಾಂಬರೀಕರಣ, 12ನೇ ವಾರ್ಡಿನಲ್ಲಿ ಡಾಂಬರೀಕರಣ. 6ನೇ ವಾರ್ಡಿನ ಚಾಮುಂಡೇಶ್ವರಿ ದೇವಾಸ್ಥಾನದ ಮುಂದೆ ಚರಂಡಿ ಕಾಮಗಾರಿಗೆ ಶಾಸ​ಕರು ಗುದ್ದಲಿಪೂಜೆ ನೆರ​ವೇ​ರಿ​ಸಿ​ದರು.

Ramanagara: ಸುಗ್ಗ​ನ​ಹ​ಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ

ಆನಂತರ ಆಗ್ರಹಾರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಡಾಂಬರೀಕರಣ, ಆದಿಶಕ್ತಿಪುರದಲ್ಲಿ ಚರಂಡಿ ಕಾಮಗಾರಿ, ರೋಟರಿ ಕ್ಲಬ್‌ನಿಂದ ಆಂಜನೇಯಸ್ವಾಮಿ ದೇವಾಲಯದವರೆಗೆ ರಸ್ತೆ ನಿರ್ಮಾಣ, ಮಲ್ಲೇಶ್ವರ ಬಡಾವಣೆಯ ಉದ್ಯಾವನ ಬಳಿ ಹಿರಿಯ ನಾಗರಿಕರ ತಂಗುದಾಣ, ರಂಗರಾಯರದೊಡ್ಡಿಯ ಕೆರೆ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಂಗರಾಯರದೊಡ್ಡಿಯ ಗ್ರಾಮದವರೆಗೆ ಡಾಂಬರೀಕರಣ ಕಾಮಗಾರಿಗೆ ಅನಿತಾಕುಮಾರಸ್ವಾಮಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಮಹಿಳೆಯಾಗಿ ಸಾಕಷ್ಟುದುಡಿಯುತ್ತಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನ ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ಜೆಡಿಎಸ್‌ ಪಕ್ಷದ್ದು ಅಭಿವೃದ್ಧಿಯೇ ಧ್ಯೇಯ ಮಂತ್ರವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios