Asianet Suvarna News Asianet Suvarna News

Ramanagara: ಸುಗ್ಗ​ನ​ಹ​ಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ

ನಿರಂತ​ರ​ವಾಗಿ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ಕುಸಿದು ಹೋದ ಸುಗ್ಗ​ನ​ಹಳ್ಳಿ ಸೇತುವೆ ಹಾಗೂ ಏರಿ ಒಡೆದು ಅನಾ​ಹು​ತಕ್ಕೆ ಕಾರ​ಣ​ವಾದ ಭಕ್ಷಿ ಕೆರೆ ಕಾಮ​ಗಾ​ರಿ​ಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಬುಧ​ವಾರ ವೀಕ್ಷಿಸಿದರು. 

Ramanagara MLA Anita Kumaraswamy Saw Sugganahalli Bridge and Bhakshi Lake gvd
Author
First Published Sep 8, 2022, 2:57 PM IST

ರಾಮ​ನ​ಗರ (ಸೆ.08): ನಿರಂತ​ರ​ವಾಗಿ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ಕುಸಿದು ಹೋದ ಸುಗ್ಗ​ನ​ಹಳ್ಳಿ ಸೇತುವೆ ಹಾಗೂ ಏರಿ ಒಡೆದು ಅನಾ​ಹು​ತಕ್ಕೆ ಕಾರ​ಣ​ವಾದ ಭಕ್ಷಿ ಕೆರೆ ಕಾಮ​ಗಾ​ರಿ​ಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಬುಧ​ವಾರ ವೀಕ್ಷಿಸಿದರು. ಅರ್ಕಾ​ವತಿ ನದಿ​ಯಲ್ಲಿ ಪ್ರವಾ​ಹಕ್ಕೆ ಕುಸಿದು ಹೋದ ಸುಗ್ಗ​ನ​ಹಳ್ಳಿ ಸೇತು​ವೆ​ಯನ್ನು ವೀಕ್ಷಿಸಿದ ಶಾಸ​ಕರು, ಗ್ರಾಮ​ಸ್ಥ​ರಿಂದ ಅಹ​ವಾಲು ಆಲಿಸಿ ಸುಗ್ಗ​ನ​ಹಳ್ಳಿ - ಮಾಯ​ಗಾ​ನ​ಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿ​ಸಲು ತಾತ್ಕಾ​ಲಿಕ ವ್ಯವಸ್ಥೆ ಮಾಡುವ ಭರ​ವಸೆ ನೀಡಿ​ದ​ರು. 

ಸುಗ್ಗ​ನ​ಹಳ್ಳಿ ಸೇತುವೆ ಕುಸಿ​ದಿ​ರು​ವು​ದ​ರಿಂದ ಸುಗ್ಗ​ನ​ಹಳ್ಳಿ - ಮಾಯ​ಗಾ​ನ​ಹಳ್ಳಿ ಮಾರ್ಗದ ಐದಾರು ಗ್ರಾಮ​ಗಳಿಗೆ ಪರ್ಯಾಯ ಮಾರ್ಗ​ದಲ್ಲಿ ಸಾರಿಗೆ ಬಸ್‌ಗಳ ಸಂಚಾ​ರಕ್ಕೆ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ಅಧಿ​ಕಾ​ರಿ​ಗ​ಳಿಗೆ ಸೂಚಿಸಿದ​ರು. ಆನಂತರ ಕೆರೆ ಏರಿ ಒಡೆದು ಸೀರ​ಳ್ಳದ ಮೂಲಕ ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಜಿಯಾ ಉಲ್ಲಾ ಬ್ಲಾಕ್‌, ಗೌಸಿಯಾ ನಗರ, ಯಾರಬ್‌ ನಗರ ಸೇರಿದಂತೆ ಹಲ ಬಡಾವಣೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿ​ಸಿದ ಭಕ್ಷಿ ಕೆರೆ ಏರಿ ನಿರ್ಮಾಣ ಕಾಮ​ಗಾರಿ ವೀಕ್ಷಿ​ಸಿ​ದ​ರು. 

Ramanagara: ನೆರೆ ಸಂತ್ರ​ಸ್ತ​ರಿಗೆ 1 ಲಕ್ಷ ಪರಿ​ಹಾರ ನೀಡಿ: ಇ​ಬ್ರಾ​ಹಿಂ

ಅನಿತಾ ಕುಮಾ​ರ​ಸ್ವಾಮಿ, ಮಹಾ ಮಳೆ​ಯಿಂದ ಆಗಿ​ರುವ ಅನಾ​ಹು​ತಕ್ಕೆ ಪರಿ​ಹಾರ ಕಲ್ಪಿ​ಸುವ ನಿಟ್ಟಿ​ನಲ್ಲಿ ರಾಮ​ನ​ಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡು​ವಂತೆ ವಿಧಾ​ನ​ಸಭಾ ಅಧಿ​ವೇ​ಶ​ನ​ದಲ್ಲಿ ಪ್ರಸ್ತಾ​ಪಿಸಿ ರಾಜ್ಯ​ಸ​ರ್ಕಾ​ರ​ವನ್ನು ಒತ್ತಾ​ಯಿ​ಸು​ವು​ದಾಗಿ ಹೇಳಿ​ದರು. ಮಳೆ​ಯಿಂದ ​ಸಾ​ವಿ​ರಾರು ಮನೆ​ಗಳು ಜಖಂಗೊಂಡಿ​ವೆ. ಕೃಷಿ, ತೋಟ​ಗಾ​ರಿಕೆ ಉತ್ಪ​ನ್ನ​ಗಳು ನೀರು ಪಾಲಾ​ಗಿ​ವೆ. ಕೆರೆಗಳ ಏರಿ ಒಡೆ​ದ​ರೆ, ಸೇತು​ವೆ​ಗಳು ಕೊಚ್ಚಿ ಹೋಗಿವೆ. ಇದೆ​ಲ್ಲ​ವನ್ನು ಸರಿ​ಪ​ಡಿ​ಸುವ ಕೆಲಸ ಆಗ​ಬೇ​ಕಿದ್ದು, ಇದ​ಕ್ಕಾಗಿ ಸರ್ಕಾರ ವಿಶೇಷ ಅನು​ದಾನ ಬಿಡು​ಗಡೆ ಮಾಡಬೇಕು ಎಂದರು. ಸುಗ್ಗ​ನಹಳ್ಳಿ ಸೇತುವೆ ನಿರ್ಮಾ​ಣ​ವಾಗಿ 35 ವರ್ಷ​ಗ​ಳಾ​ಗಿದೆ. 

ಅರ್ಕಾ​ವತಿ ನದಿ​ಯಿಲ್ಲಿ 5 ಸಾವಿರ ಕ್ಯುಸೆಕ್‌ ನೀರು ಹರಿ​ಯು​ತ್ತಿ​ರುವ ಕಾರಣ ಅದರ ರಭ​ಸಕ್ಕೆ ಸೇತುವೆ ಕುಸಿ​ದಿದ್ದು, ಸರ್ಕಾ​ರದ ಗಮ​ನಕ್ಕೆ ತಂದು ನೂತನ ಸೇತುವೆ ನಿರ್ಮಾ​ಣಕ್ಕೆ ಕ್ರಮ ವಹಿ​ಸ​ಲಾ​ಗು​ವುದು ಎಂದು ಹೇಳಿದರು. ಮರ​ಳ​ವಾಡಿ ಸೇರಿ​ದಂತೆ ಅನೇಕ ಭಾಗ​ಗಳಲ್ಲಿ ಕೆರೆ​ಗಳ ಜತೆಗೆ ಸೇತು​ವೆ​ಗ​ಳನ್ನು ದುರಸ್ತಿ ಪಡಿ​ಸ​ಬೇ​ಕಿದೆ. ಮಳೆ ನಿಲ್ಲು​ವ​ವ​ರೆಗೂ ಕಾಮ​ಗಾರಿ ಕೈಗೆ​ತ್ತಿ​ಕೊ​ಳ್ಳಲು ಸಾಧ್ಯ​ವಿಲ್ಲ. ಮಳೆ ನಿಂತ ಮೇಲೆ ಸೇತು​ವೆ​ಗಳು ಕುಸಿ​ದಿ​ರುವ ಭಾಗ​ಗ​ಳಲ್ಲಿ ತಾತ್ಕಾ​ಲಿಕ ವ್ಯವಸ್ಥೆ ಕಲ್ಪಿ​ಸಲು ಕ್ರಮ ವಹಿ​ಸ​ಲಾ​ಗು​ವುದು ಎಂದು ಅನಿತಾ ತಿಳಿ​ಸಿ​ದರು.

ಪ್ರವಾಹ ಸ್ಥಳಗಳಿಗೆ ಭೇಟಿ: ಮಳೆ ಹಾನಿ ಪೀಡಿತ ಹಾರೋ​ಹಳ್ಳಿಯ ವಿವಿಧ ಪ್ರದೇ​ಶ​ಗ​ಳಿಗೆ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಹಾಗೂ ಜಿಲ್ಲಾ​ಧಿ​ಕಾರಿ ಅವಿ​ನಾಶ್‌ ಭೇಟಿ ನೀಡಿ ಪರಿ​ಶೀ​ಲಿಸಿ​ದರು. ಅಧಿಕಾರಿಗಳೊಂದಿಗೆ ಮಳೆ ಹಾನಿ ವೀಕ್ಷಣೆ ಆರಂಭಿಸಿದ ಶಾಸಕರು, ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿನ ಹತ್ತಾರು ಮನೆಗಳಿಗೆ ಭೇಟಿ ನೀಡಿ ಮಳೆ ಹಾನಿಯಿಂದಾದ ನಷ್ಟದ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ

ಮಾರಸಂದ್ರ ರಸ್ತೆಯ ಕೆರೆ ವೀಕ್ಷಿ​ಸಿದ ನಂತರ ಜಲಾವೃತವಾಗಿರುವ ಸರ್ಕಾರಿ ಆಸ್ಪತ್ರೆ ಪರಿಶೀಲಿಸಿ ಮಾತ​ನಾ​ಡಿದ ಅನಿತಾ, ಸರ್ಕಾರಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎರಡು ಎಕರೆ ಜಾಗ ಗುರುತಿಸಿ ಆ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲು ಕಾಮಗಾರಿ ಅಂದಾಜುಪಟ್ಟಿತಯಾರಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿ ಮುಗಿಯುವವರೆಗೂ ಕೆರೆಯಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಲಾಗುವುದು. ಕೆರೆಯ ಪಕ್ಕದಲ್ಲಿರುವ ಕೋಡಿಯಿಂದ ನೀರನ್ನು ಹೊರಬಿಡಲಾಗಿದೆ ಎಂದು ಹೇಳಿ​ದ​ರು.

Follow Us:
Download App:
  • android
  • ios