Asianet Suvarna News Asianet Suvarna News

ಬಂಗಾಳದಲ್ಲಿ ಮಮತಾ ಮಾಡುತ್ತಿರುವ ತಪ್ಪೇನು?

 ಬಂಗಾಳದಲ್ಲಿ ಕೆಂಪು ಪಾರ್ಟಿಗಳನ್ನು ಇನ್ನಷ್ಟು ಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್‌ನಿಂದ. 

Mamata Banerjee and her Ideology in West Bengal hls
Author
Bengaluru, First Published Oct 23, 2020, 1:38 PM IST

ಬೆಂಗಳೂರು (ಅ. 23): 3 ದಶಕಗಳ ಕಮ್ಯುನಿಸ್ಟ್‌ ಆಡಳಿತದ ನಂತರ ಬಂಗಾಳಿಗಳು ಹವಾಯಿ ಚಪ್ಪಲಿ ಹಾಕಿ ಹಳೆ ಕಾರ್‌ನಲ್ಲಿ ಓಡಾಡುವ ಹೋರಾಟಗಾರ್ತಿ ಮಮತಾ ಮೇಲೆ ವಿಶ್ವಾಸವಿಟ್ಟು ಅಧಿ​ಕಾರ ಕೊಟ್ಟಿದ್ದರು. ಮಮತಾ ಕೆಂಪು ಪಾರ್ಟಿಗಳಿಗಿಂತ ಹೆಚ್ಚು ಸಮಾಜವಾದಿ ಆರ್ಥಿಕ ನಿಲುವುಗಳನ್ನು ತೋರಿಸುತ್ತಿದ್ದಾರೆ. ಆದರೆ ಅಭಿವೃದ್ಧಿವಂಚಿತ ಬಂಗಾಳಿ ಯುವಕರಿಗೆ 10 ವರ್ಷಗಳಲ್ಲಿ ಏನನ್ನಾದರೂ ಕೆಲಸ ಮಾಡಿ ತೋರಿಸುವ ಉತ್ಸಾಹ, ಇಚ್ಛಾಶಕ್ತಿ ತೋರಿಸಲಿಲ್ಲ.

ಬದಲಾಗಿ ಕೆಂಪು ಪಾರ್ಟಿಗಳನ್ನು ಇನ್ನಷ್ಟುಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್‌ನಿಂದ. 34 ವರ್ಷ ಕೆಂಪು ಪಕ್ಷಗಳು ಕೇವಲ ರಾಜಕೀಯ ಅ​ಧಿಕಾರ ಹಿಡಿದಿರಲಿಲ್ಲ; ಬದಲಾಗಿ ಕೃಷಿ, ಶಿಕ್ಷಣ, ಮಹಿಳೆ, ಸಿನೆಮಾ, ನಾಟಕ, ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಂಪು ಆವರಿಸಿಕೊಂಡಿತ್ತು. ಮಮತಾ ಎಡದಿಂದ ರಾಜಕೀಯ ಅ​ಧಿಕಾರವೇನೋ ಕಿತ್ತುಕೊಂಡರು. ಆದರೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವಂಥ ಬುದ್ಧಿಜೀವಿಗಳು ಮಮತಾ ಬಳಿ ಇರಲಿಲ್ಲ.

ಈಗಿನ ಯುವಜನತೆ 'ಕೇಸರಿ' ಯತ್ತ ವಾಲುತ್ತಿರುವುದೇಕೆ?

ಹೀಗಾಗಿ ಸ್ಥಳೀಯ ಅವಕಾಶವಾದಿಗಳು, ಗೂಂಡಾಗಳು, ಅಧಿ​ಕಾರಶಾಹಿ ಇಂಥ ಕ್ಷೇತ್ರಗಳನ್ನು ಆವರಿಸಿಕೊಳ್ಳತೊಡಗಿದರು. ಇದು ಪ್ರತಿರೋಧಕ್ಕೆ ಕಾರಣವಾಯಿತು. ಮಮತಾರ ಬಲವಂತದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೆಂಪು ಪಕ್ಷಗಳಿಗೆ ಇಲ್ಲ ಎಂದು ಗೊತ್ತಾದ ನಂತರ, ಕೆಂಪು ಸಮರ್ಥಕರು ಕೂಡ ನಿಧಾನವಾಗಿ ಬಿಜೆಪಿ ಕಡೆ ವಾಲತೊಡಗಿದ್ದಾರೆ.

2000 ರ ಆಸುಪಾಸು ಹುಟ್ಟಿರುವ ಯುವಕರಿಗೆ ‘ಕೆಂಪು’ ಬಗ್ಗೆ ಆಸಕ್ತಿಯಿಲ್ಲ, ಮಮತಾ ಬಗ್ಗೆ ಪ್ರೀತಿಯಿಲ್ಲ, ಕೋಪವಿದೆ. ಹೀಗಾಗಿ ಆಸೆಯ ಕಣ್ಣಿನಿಂದ ಮೋದಿ, ಹಿಂದುತ್ವ, ಬಿಜೆಪಿ ಕಡೆ ನೋಡುತ್ತಿದ್ದಾರೆ. ಬಂಗಾಳದಲ್ಲಿ 30 ಪ್ರತಿಶತಕ್ಕೂ ಹೆಚ್ಚಿರುವ ಮುಸ್ಲಿಮರು ಈಗ ಮಮತಾರ ಸಾಮರ್ಥ್ಯವೂ ಹೌದು ದೌರ್ಬಲ್ಯವು ಹೌದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios