Asianet Suvarna News Asianet Suvarna News

ಕಾಂಗ್ರೆಸ್‌ನ ಗ್ಯಾರಂಟಿಗಳು ಸಿಂಗಾ​ಪು​ರ​ದಲ್ಲಿ ಕುಳಿ​ತ​ವರ ತಲೆ ಕೆಡಿಸ್ತಿವೆ: ಶಾಸಕ ಬಾಲ​ಕೃಷ್ಣ

ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿ​ದ್ದಾರೆ ಎಂಬ ಊಹಾಪೋಹ ಇದೆ. ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡುತ್ತಿ​ದ್ದಾರೆ ಅನಿ​ಸು​ತ್ತಿದೆ ಎಂದು ಸಂಶಯ ವ್ಯಕ್ತ​ಪ​ಡಿ​ಸಿ​ದ​ ಮಾಗಡಿ ಕ್ಷೇತ್ರ ಶಾಸಕ ಬಾಲ​ಕೃಷ್ಣ 

Magadi Congress MLA Balakrishna Slams Former CM HD Kumaraswamy grg
Author
First Published Aug 3, 2023, 11:30 PM IST | Last Updated Aug 3, 2023, 11:30 PM IST

ರಾಮ​ನ​ಗ​ರ(ಆ.03):  ಸಿಂಗಾಪುರದಲ್ಲಿ ಯಾರು ಕೂತಿದ್ದಾರೆ. ನಮ್ಮ ಹಳೆಯ ಸ್ನೇಹಿತರು ಅಲ್ವಾ. ಗ್ಯಾರಂಟಿ​ಗ​ಳನ್ನು ನೋಡಿ ಅವ​ರಿಗೆ ತಲೆ ಕೆಡುತ್ತಿದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡು​ತ್ತಿ​ದ್ದಾರೆ. ಇದೆಲ್ಲಾ ಅವರ ಕನಸು ಎಂದು ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರಿಗೆ ಮಾಗಡಿ ಕ್ಷೇತ್ರ ಶಾಸಕ ಬಾಲ​ಕೃಷ್ಣ ಪರೋ​ಕ್ಷ​ವಾಗಿ ಟಾಂಗ್‌ ನೀಡಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಯಾರಿಂದಲು ಸರ್ಕಾರ ಬೀಳಿಸಲು ಸಾಧ್ಯವಿಲ್ಲ. 40 ಜನ ಶಾಸಕರನ್ನು ಕರೆದುಕೊಂಡು ಹೋಗೊಕೆ ಆಗುತ್ತಾ. ಸಿದ್ದರಾಮಯ್ಯ ಅವರು ಏನು ನಿದ್ದೆ ಮಾಡುತ್ತಿ​ದ್ದಾರಾ. ಅವರೇನು ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಇಲ್ಲವಲ್ಲ. ಎಲ್ಲ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಕೇಳು​ತ್ತಾರೆ. ಜೊತೆಗೆ ಸಣ್ಣಪುಟ್ಟಏನೇ ಆದರೂ ಟ್ರಬಲ್‌ ಶೂಟರ್‌ ಡಿ.ಕೆ.​ಶಿ​ವ​ಕು​ಮಾರ್‌ ಇದ್ದಾರೆ. ಅವರು ಯಾವುದೇ ಹೋಟೆಲ್‌ನಲ್ಲಿ ಇಲ್ಲ. ಎಲ್ಲರ ಕಷ್ಟಕ್ಕೆ ಸ್ಪಂದಿ​ಸು​ತ್ತಿ​ದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿ​ದ್ದಾರೆ ಎಂಬ ಊಹಾಪೋಹ ಇದೆ. ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡುತ್ತಿ​ದ್ದಾರೆ ಅನಿ​ಸು​ತ್ತಿದೆ ಎಂದು ಸಂಶಯ ವ್ಯಕ್ತ​ಪ​ಡಿ​ಸಿ​ದ​ರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ

ಕಾಂಗ್ರೆಸ್‌ನ 5 ಗ್ಯಾಂರಂಟಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸ್ವಾತಂತ್ರ್ಯ ಬಂದ ನಂತರವೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಆರೋಪ ಇತ್ತು. ಈಗ ಎಲ್ಲಾ ಪುಣ್ಯಕ್ಷೇತ್ರಗಳು ಹೆಣ್ಣು ಮಕ್ಕಳಿಂದ ಕೂಡಿದೆ. ಇದೆಲ್ಲವನ್ನೂ ನೋಡಿದಾಗ ವಿರೋಧ ಪಕ್ಷದವರಿಗೆ ತಲೆ ಕೆಡುತ್ತಿದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡುತ್ತಿ​ದ್ದಾರೆ. ಇದೆಲ್ಲಾ ಅವರ ಕನಸು ಎಂದರು.

ಬಿಜೆಪಿ ಸರ್ಕಾರದಿಂದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್‌ ಪಕ್ಷ ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳ ಒತ್ತಡ ಹೆಚ್ಚಾ​ಗಿದೆ. ಹಣ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಕ್ರೂಢೀಕರಣ ಮಾಡುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 6 ತಿಂಗಳ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಬಾಲ​ಕೃಷ್ಣ ಹೇಳಿ​ದ​ರು.

ಚುನಾ​ವಣೆ ಜವಾ​ಬ್ದಾರಿ ನೀಡಲು ಸಚಿ​ವರ ಸಭೆ

ರಾಮ​ನ​ಗ​ರ: ಕಾಂಗ್ರೆಸ್‌ ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಗಾಗಿ ತಯಾ​ರಿ​ಯಲ್ಲಿ ತೊಡ​ಗಿದೆ. ಹೀಗಾಗಿ ಪಕ್ಷದ ವರಿ​ಷ್ಠರು ರಾಜ್ಯ ನಾಯ​ಕರು ಹಾಗೂ ಸಚಿ​ವರಿಗೆ ಚುನಾ​ವ​ಣೆಯ ಜವಾ​ಬ್ದಾರಿ ವಹಿ​ಸಲು ದೆಹ​ಲಿಗೆ ಕರೆ​ಸಿ​ಕೊಂಡಿ​ದ್ದಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲ​ಕೃಷ್ಣ ಪ್ರತಿ​ಕ್ರಿ​ಯಿ​ಸಿ​ದರು.

ಅಕ್ರಮ ಆಸ್ತಿ ಗಳಿಕೆ ಕೇಸಲ್ಲಿ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌ ಕೊಟ್ಟ ಸುಪ್ರೀಂ ಕೋರ್ಟ್: ಸಿಬಿಐಗೆ ಹಿನ್ನಡೆ

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಎಲ್ಲ ರಾಜ​ಕೀಯ ಪಕ್ಷ​ಗ​ಳಲ್ಲಿ ಅಸ​ಮಾ​ಧಾನ ಸಹಜ. ನನ್ನ ಮೇಲೂ ಬೇರೆ​ಯ​ವರು ಬೇಡ ನಮ್ಮ ಸ್ನೇಹಿ​ತ​ರಿಗೆ ಅಸ​ಮಾ​ಧಾನ ಇದೆ. ಕಾರ್ಯ ಒತ್ತ​ಡದ ಕಾರಣ ಅವರ ಫೋನ್‌ ಅನ್ನು ಸ್ವೀಕ​ರಿ​ಸಿ ಮಾತ​ನಾ​ಡಲು ಆಗು​ತ್ತಿಲ್ಲ. ಶಾಸ​ಕ​ನಾ​ಗಿ​ರುವ ನನ್ನದೇ ಇಂತಹ ಪರಿ​ಸ್ಥಿತಿ ಇದೆ. ಹೀಗಿ​ರು​ವಾಗ ಸಚಿ​ವರು ಕಾರ್ಯ​ದೊ​ತ್ತ​ಡದ ಕಾರಣ ಶಾಸ​ಕ​ರಿ​ಗೆ ಸ್ಪಂದಿ​ಸದೆ ಇರ​ಬ​ಹುದು ಎಂದರು.

ಅಸಮಾಧಾನ ಎಲ್ಲರ ಮೇಲೂ ಇರುತ್ತದೆ.ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವುದು ಬೇಡ. ವರ್ಗಾ​ವಣೆ ವಿಚಾರ, ಸಣ್ಣ ಪುಟ್ಟಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಇರುತ್ತದೆ. ಇದನ್ನೆಲ್ಲ ಸರಿಪಡಿಸುವ ಕೆಲಸವನ್ನು ಮುಖ್ಯ​ಮಂತ್ರಿ ಹಾಗೂ ಉಪ​ಮು​ಖ್ಯ​ಮಂತ್ರಿ ಮಾಡು​ತ್ತಾರೆ. ಶಾಸ​ಕರ ಪತ್ರ ವ್ಯವ​ಹಾರ ಎಲ್ಲವೂ ಬೋಗಸ್‌, ಯಾರು ಸಹ ಪತ್ರಗಳನ್ನು ಬರೆದಿಲ್ಲ. ಪತ್ರವನ್ನು ಕಟ್‌ ಅಂಡ್‌ ಪೇಸ್ಟ್‌ ಮಾಡಿದ್ದಾರೆ ಎಂದು ಹೇಳಿ​ದ​ರು.

Latest Videos
Follow Us:
Download App:
  • android
  • ios