Asianet Suvarna News Asianet Suvarna News

Karnataka Election Results 2023: ಗೆದ್ದ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆತರಲು ಕಾಂಗ್ರೆಸ್ ಸೂಚನೆ

ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಎಣಿಕೆ ನಡೆಯುತ್ತಿದ್ದಂತೆಯೇ ಕಾಂಗ್ರೆಸ್ ನ ಗೆದ್ದ ಎಲ್ಲಾ ಶಾಸಕರನ್ನು ಇಂದು ರಾತ್ರಿಯೊಳಗೆ ಬೆಂಗಳೂರಿಗೆ ಕರೆತರಲು ಸೂಚನೆ ನೀಡಲಾಗಿದೆ.

Karnataka election results live news 2023 congress hold legislative assembly meeting gow
Author
First Published May 13, 2023, 11:29 AM IST

ಬೆಂಗಳೂರು (ಮೇ.13): ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಎಣಿಕೆ ನಡೆಯುತ್ತಿದ್ದಂತೆಯೇ ಕಾಂಗ್ರೆಸ್ ನ ಗೆದ್ದ ಎಲ್ಲಾ ಶಾಸಕರನ್ನು ಇಂದು ರಾತ್ರಿಯೊಳಗೆ ಬೆಂಗಳೂರಿಗೆ ಕರೆತರಲು ಸೂಚನೆ ನೀಡಲಾಗಿದೆ. ನಾಳೆ  ಕಾಂಗ್ರೆಸ್ ಶಾಸಕಾಂಗದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಗತ್ಯವಾದರೆ ಮಾತ್ರ ರೇಸಾರ್ಟ್ ಗೆ ತೆರಳಲು ಚಿಂತನೆ ನಡೆಸಲಾಗಿದ್ದು, ರಾಜಸ್ತಾನ,  ಛತ್ತೀಸ್ ಘಡ , ಹೈದರಾಬಾದ್ ಗೆ ಕರೆದು ಕೊಂಡು ಹೋಗಲು ಯೋಜನೆ ಹಾಕಲಾಗಿದೆ. ಉದಯ್ ಪುರದ ತಾಜ್ ಲೇಕ್ ಪ್ಯಾಲೇಸ್ ಬುಕ್ ಮಾಡಲು ಚಿಂತನೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 

ಸಿದ್ದರಾಮಯ್ಯ ವರುಣಾ ದಿಂದ ಬೆಂಗಳೂರಿಗೆ ಬರುತ್ತಿದ್ದಂತೆಯೇ ಸಭೆ ನಡೆಯಲಿದ್ದು, ಕೆ.ಜೆ ಜಾರ್ಜ್ ಗೆ ಸೇರಿದ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರು ಸಭೆ ಸೇರಲಿದ್ದಾರೆ. ಬೆಂಗಳೂರಿಗೆ  ಕೆ ಸಿ ವೇಣುಗೋಪಾಲ್ ಮತ್ತು  ರಣದೀಪ್ ಸಿಂಗ್ ಸುರ್ಜೇವಾಲಾ ಬರುತ್ತಿದ್ದು ಇಲ್ಲೇ  ವಾಸ್ತವ್ಯ ಮಾಡಲಿದ್ದಾರೆ.

Karnataka Election 2023 Live: ಈ ಸಚಿವರಿಗೆ ಕಾಡುತ್ತಿದೆ ಸೋಲಿನ ಭೀತಿ

 ವಿಧಾನ ಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಹಿನ್ನೆಲೆ. ಬೆಂಗಳೂರಿನ ಕಾಂಗ್ರೆಸ್ ಕಚೇರಿ ಮುಂಭಾಗ  ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಕೆಪಿಸಿಸಿ ಮುಂಭಾಗ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಕೂಗುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಡಿಕೆ ಶಿವ ಕುಮಾರ್ , ಸಿದ್ದರಾಮಯ್ಯ ಗೆ ಜೈಕಾರ ಹಾಕುತ್ತಿದ್ದಾರೆ.

karnataka election results 2023: ಗೂಗಲ್‌ ಸರ್ಚ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಟಾಪ್‌ ಟ್ರೆಂಡಿಂಗ್‌ 

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

Follow Us:
Download App:
  • android
  • ios