ಕಾಂಗ್ರೆಸ್‌ ಪಕ್ಷ ಬಹು​ಮತ ಪಡೆ​ದಿ​ದ್ದರೂ ಮುಖ್ಯ​ಮಂತ್ರಿ ಆಯ್ಕೆ ಕಗ್ಗಂಟಾ​ಗಿತ್ತು. ಆದರೆ, ಇದೀಗ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಕರುನಾಡ ಮುಖ್ಯಮಂತ್ರಿಯಾಗ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ಡಿಕೆಶಿ ಅಭಿಮಾನಗಳು ಪ್ರತಿಭಟನೆ ಹಾಗೂ ಗಲಾಟೆಗೆ ಮುಂದಾಗಬಹುದೆಂಬದು ಅವರ ಮನೆ ಮುಂದೆ ಬಿಗಿ ಭದ್ರತೆ ನೀಡಲಾಗಿದೆ. 

ರಾಮ​ನ​ಗ​ರ (ಮೇ.18): ಹಗ್ಗ ಜಗ್ಗಾಟದ ನಡುವೆ, ಕರ್ನಾಟಕ ಮುಖ್ಯಮಂತ್ರಿಯ ಆಯ್ಕೆ ಮುಗಿದಿದ್ದು, ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಏರಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಬಹುದೆಂದು ಅವರ ಮನೆಯ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ(Siddaramaiah) ಅವ​ರನ್ನು ಮುಖ್ಯ​ಮಂತ್ರಿ ಹುದ್ದೆಗೆ ಆಯ್ಕೆ ಮಾಡ​ಲಾ​ಗಿದೆ ಎಂದು ಸುದ್ದಿ​ಗಳು ಹರಿ​ದಾ​ಡು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌(KPCC President DK Shivakumar) ತವರು ಜಿಲ್ಲೆ​ಯಲ್ಲಿ ಅವರ ಅಭಿ​ಮಾ​ನಿ​ಗಳು ಗಲಾಟೆ ಮಾಡುವ ಸಾಧ್ಯ​ತೆ​ಗ​ಳಿ​ರುವ ಕಾರ​ಣಕ್ಕೆ ಪ್ರಮುಖ ವೃತ್ತ​ಗ​ಳಲ್ಲಿ ಪೊಲೀ​ಸರು ಬಂದೋ​ಬ​ಸ್ತಿನ ಕಾರ್ಯದಲ್ಲಿ ತೊಡ​ಗಿ​ದ್ದಾರೆ. ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಮುಖ್ಯ​ಮಂತ್ರಿ ಸ್ಥಾನ ಕೈತ​ಪ್ಪಿ​ದರೆ ಅಭಿ​ಮಾ​ನಿ​ಗಳು ಬೀದಿ​ಗಿ​ಳಿದು ಪ್ರತಿ​ಭ​ಟಿ​ಸು​ತ್ತಾರೆ. ಯಾವುದೇ ಅಹಿ​ತ​ಕರ ಘಟ​ನೆ​ಗಳು ನಡೆ​ಯ​ದಂತೆ ಮುಂಜಾ​ಗ್ರತಾ ಕ್ರಮ​ಗ​ಳನ್ನು ಪೊಲೀ​ಸರು ಕೈಗೊಂಡಿ​ದ್ದಾರೆ.

Karnataka CM: ಡಿಕೆಶಿ ಮಣಿಯುತ್ತಿಲ್ಲ, ಸಿದ್ದು ಬಿಡುತ್ತಿಲ್ಲ, ಕಾಂಗ್ರೆಸ್‌ ಸಿಎಂ ಕಗ್ಗಂಟು 4ನೇ ದಿನಕ್ಕೆ!

ಹೈಅಲರ್ಚ್‌ ಆಗಿರುವಂತೆ ಪೊಲೀಸರಿಗೆ ಹಿರಿಯ ಅ​ಧಿಕಾರಿಗಳು ಸೂಚನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಕೈತಪ್ಪುವು​ದ​ರಿಂದ ಅವರ ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆಗಳು ಇವೆ. ಇದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಕಾರಿಗೆ ಸಂದೇಶ ರವಾನಿಸಲಾಗಿದೆ. ರಾಮನಗರದ ಐಜೂರು ವೃತ್ತದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ, ಒಬ್ಬರು ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕನ​ಕ​ಪು​ರ​ದಲ್ಲೂ ಬಂದೋ​ಬಸ್‌್ತ:

ಸಿದ್ದರಾಮಯ್ಯ ಸಿಎಂ ಆಗುತ್ತಾರೆಂಬ ಊಹಾಪೋಹ ಸುದ್ದಿ ನಡುವೆ ಕನಕಪುರದಲ್ಲಿ ಪೊಲೀಸರು ಅಲರ್ಚ್‌ ಆಗಿ​ದ್ದಾರೆ. ಕನಕಪುರದಲ್ಲಿ ಮಧ್ಯಾಹ್ನ ಮುಖ್ಯರಸ್ತೆ ಸೇರಿದಂತೆ ಚೆನ್ನಬಸಪ್ಪ ವೃತ್ತದಲ್ಲಿ ಬಿಕೋ ಎನ್ನುವ ವಾತಾವರಣ ಕಂಡುಬಂದಿತು. ಜೆತೆಗೆ ನಗರದ ಮೈಸೂರು ರಸ್ತೆಯಲ್ಲಿನ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಮನೆಯ ಮುಂದೆಯೂ ಬಿಕೋ ಎನ್ನುವ ವಾತಾವರಣ ಇತ್ತು. ಈ ನಡುವೆ ನಗರದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಪರ ವಿರೋಧದ ಘೋಷಣೆಯಾಗಲಿ ಸಂಭ್ರಮಾಚರಣೆಯಾಗಲಿ ಇರಲಿಲ್ಲ. ಪೊಲೀಸ್‌ ಇಲಾಖೆ ಮಾತ್ರ ನಗರದ ಮುಖ್ಯ ಸ್ಥಳಗಳಲ್ಲಿ ರಿಸವ್‌ರ್‍ವ್ಯಾನ್‌ಗಳನ್ನು ಹಾಕುವ ಮೂಲಕ ಸೂಕ್ತ ಭದ್ರತೆ ಏರ್ಪ​ಡಿ​ಸಿ​ದೆ.

ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಸೀಕ್ರೆಟ್‌ ಬಾಕ್ಸ್‌ ಮತ್ತು 4 ಸೂತ್ರಗಳು!

17ಕೆಆರ್‌ ಎಂಎನ್‌ 3,4.ಜೆ​ಪಿಜಿ

3.ರಾಮ​ನ​ಗ​ರದ ಐಜೂರು ವೃತ್ತ​ದಲ್ಲಿ ಪೊಲೀ​ಸರು ಬಂದೋ​ಬಸ್‌್ತನಲ್ಲಿ ತೊಡ​ಗಿ​ರು​ವುದು.

4.ಕನ​ಕ​ಪು​ರ​ದಲ್ಲಿ ಪೊಲೀಸ್‌ ಭದ್ರತೆ ಮಾಡಿ​ರು​ವುದು.