Asianet Suvarna News Asianet Suvarna News

ಸಮನ್ವಯ ಸಮಿತಿ ಅಧ್ಯಕ್ಷ ಅಂದ್ರೆ ಅಮ್ಮವರ ಗಂಡನಾ?: ಸಿದ್ದುಗೆ ಟಾಂಗ್

ಮಾಜಿ ಪುಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಸ್ಪರ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ರಾಯಚೂರಿನಲ್ಲಿ ಇಂದು [ಮಂಗಳವಾರ] ಮತ್ತೆ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

Karnataka BJP Leader KS Eshwarappa Takes A Dig At Siddaramaiah
Author
Bengaluru, First Published Dec 4, 2018, 11:54 AM IST

ರಾಯಚೂರು, [ಡಿ.04]: ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ನಡುವಿನ ಮಾತಿನ ಭರಾಟೆ ಮುಂದುವರೆದಿದೆ.

ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಅವರ ಪರಸ್ಪರ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ರಾಯಚೂರಿನಲ್ಲಿ ಇಂದು [ಮಂಗಳವಾರ] ಮತ್ತೆ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

'ಅವಕಾಶ ಸಿಕ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರಲು ರೆಡಿ'

ಸಿದ್ದರಾಮಯ್ಯ ದಿನಕ್ಕೊಂದು ಮಾತಾಡ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸತ್ತೋಗಿದ್ದು, ಸಮನ್ವಯ ಸಮಿತಿ ಅಧ್ಯಕ್ಷ ಅಂದ್ರೆ ಅಮ್ಮವರ ಗಂಡನಾ? ಈ ಸರ್ಕಾರದಲ್ಲಿ ನಿಮ್ಮದೇನು ನಡಿಯಲ್ವಾ? ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಅವರು ಬಿಜೆಪಿ ಸಿದ್ದಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಬಂದ್ರೆ  ಸ್ವಾಗತ ಮಾಡ್ತೇವೆ. ಸಿದ್ದರಾಮಯ್ಯ ಇನ್ನೂ ಕನಸಿನಲ್ಲಿ ನಾನು ಮಂಖ್ಯಮಂತ್ರಿ ಅಂದುಕೊಳ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಬಗ್ಗೆ ಕಾಂಗ್ರೇಸ್ ನವರು ಏನಾದ್ರು ಹೇಳಿಕೊಳ್ಳಲಿ.  ಬಿಜೆಪಿ ಬೆಳೆಯುತ್ತಿದ್ದು, ಕಾಂಗ್ರೇಸ್ ನಿರ್ನಾಮ ಆಗ್ತಾ ಇದೆ.  ಸತೀಶ್ ಜಾರಕಿಹೊಳಿಯವರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಇದೆ.

ಕಾಂಗ್ರೇಸ್, ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಶಾಸಕರು ಬಂದರೆ ಬಿಜೆಪಿ ಕರೆದುಕೊಳ್ಳುತ್ತೇವೆ ಎಂದು ಅಪರೇಷನ್ ಕಮಲದ ಮುನ್ಸೂಚನೆ ನೀಡಿದರು. 

Follow Us:
Download App:
  • android
  • ios