ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ಜಗ್ಗೇಶ್ಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ
ದರ್ಶನ್ ಫ್ಯಾನ್ಸ್ ಜತೆಗಿನ ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ನಟ ಜಗ್ಗೇಶ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಹತ್ವ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ.
ಬೆಂಗಳೂರು, (ಫೆ.24): ಆಡಿಯೋ ಕ್ಲಿಪ್ ವಿಚಾರವೊಂದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಗಲಾಟೆ ಸುಖ್ಯಾಂತ ಕಂಡಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ, ನಟ ಜಗ್ಗೇಶ್ ಅವರಿಗೆ ರಾಜ್ಯ ಬಿಜೆಪಿ ಸಿಹಿ ಮಹತ್ವದ ಹುದ್ದೆಯೊಂದನ್ನು ನೀಡಿದೆ.
ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ
ಹೌದು... ಪಕ್ಷ ಸಂಘಟನೆಗೆ ರಾಜ್ಯ ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ ನೂತನ 10 ವಕ್ತಾರರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಇಂದು (ಬುಧವಾರ) ಆದೇಶ ಹೊರಡಿಸಿದ್ದಾರೆ. ಈ 10ರಲ್ಲಿ ನಟ ಜಗ್ಗೇಶ್ ಅವರನ್ನು ಬೆಂಗಳೂರು ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿದೆ.
ನೂತನ ವಕ್ತಾರರ ಪಟ್ಟಿ ಹೀಗಿದೆ..
1. ಗಣೇಶ್ ಕಾರ್ಣಿಕ್ - ಮುಖ್ಯ ವಕ್ತಾರರು, ಮಂಗಳೂರು.
2. ಜಗ್ಗೇಶ್- ವಕ್ತಾರರು, ಬೆಂಗಳೂರು.
3. ರಾಜೂಗೌಡ (ನರಸಿಂಹ ನಾಯಕ್)- ವಕ್ತಾರರು, ಯಾದಗಿರಿ.
4. ರಾಜ್ಕುಮಾರ್ ಪಾಟೀಲ್ ತೇಲ್ಕೂರು- ವಕ್ತಾರರು, ಕಲಬುರಗಿ.
5. ಛಲವಾದಿ ನಾರಾಯಣಸ್ವಾಮಿ- ವಕ್ತಾರರು. ಬೆಂಗಳೂರು.
6. ತೇಜಸ್ವಿನಿ ಗೌಡ- ವಕ್ತಾರರು, ಬೆಂಗಳೂರು.
7. ಗಿರಿಧರ ಉಪಾಧ್ಯಾಯ- ವಕ್ತಾರರು, ಬೆಂಗಳೂರು.
8. ಪಿ.ರಾಜೀವ್- ವಕ್ತಾರರು, ಬೆಳಗಾವಿ.
9. ಎಂ.ಬಿ.ಜಿರಲಿ- ವಕ್ತಾರರು, ಬೆಳಗಾವಿ.
10. ಮಹೇಶ್- ವಕ್ತಾರರು, ಮೈಸೂರು.