Asianet Suvarna News Asianet Suvarna News

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾ​ಮಿ​ ರೂಪಿ​ಸಿ​ರುವ ಪಂಚ​ರತ್ನ ಯೋಜ​ನೆ​ಗಳನ್ನು ಕಾರ್ಯ​ಗ​ತ​ಗೊ​ಳಿ​ಸಲು ಮಾಗಡಿ ಕ್ಷೇತ್ರ​ದಿಂದ ಮಂಜು​ನಾಥ್‌ ಅವ​ರನ್ನು ಗೆಲ್ಲಿಸಿ ವಿಧಾ​ನ​ಸೌ​ಧಕ್ಕೆ ಕಳು​ಹಿ​ಸಿ​ಕೊ​ಡು​ವಂತೆ ಮಾಜಿ ಪ್ರಧಾನಿ ಎಚ್‌.ಡಿ.​ದೇ​ವೇ​ಗೌಡ ಮನವಿ ಮಾಡಿ​ದರು.

JDS should come to power for the implementation of Pancharatna schemes Says HD Devegowda gvd
Author
First Published Apr 30, 2023, 8:42 PM IST

ಮಾಗಡಿ /ರಾಮ​ನ​ಗರ (ಏ.30): ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾ​ಮಿ​ ರೂಪಿ​ಸಿ​ರುವ ಪಂಚ​ರತ್ನ ಯೋಜ​ನೆ​ಗಳನ್ನು ಕಾರ್ಯ​ಗ​ತ​ಗೊ​ಳಿ​ಸಲು ಮಾಗಡಿ ಕ್ಷೇತ್ರ​ದಿಂದ ಮಂಜು​ನಾಥ್‌ ಅವ​ರನ್ನು ಗೆಲ್ಲಿಸಿ ವಿಧಾ​ನ​ಸೌ​ಧಕ್ಕೆ ಕಳು​ಹಿ​ಸಿ​ಕೊ​ಡು​ವಂತೆ ಮಾಜಿ ಪ್ರಧಾನಿ ಎಚ್‌.ಡಿ.​ದೇ​ವೇ​ಗೌಡ ಮನವಿ ಮಾಡಿ​ದರು. ಮಾಗಡಿ ಪಟ್ಟ​ಣದ ಕೋಟೆ ಮೈದಾ​ನ​ದಲ್ಲಿ ನಡೆದ ಚುನಾ​ವಣಾ ಪ್ರಚಾ​ರ​ದಲ್ಲಿ ಮಾತ​ನಾ​ಡಿದ ಅವರು, ಜೆಡಿ​ಎಸ್‌ ಪಕ್ಷ ಎಲ್ಲ ವರ್ಗದ ಜನ​ರಿಗೆ ಅನು​ಕೂಲವಾಗ​ಲಿ​ರುವ ಪಂಚ​ರತ್ನ ಯೋಜ​ನೆ​ ರೂಪಿ​ಸಿದೆ. 

ಅವು​ಗ​ಳ ಅನು​ಷ್ಠಾ​ನ​ಕ್ಕೆ ಕುಮಾ​ರ​ಸ್ವಾ​ಮಿ ಮುಖ್ಯ​ಮಂತ್ರಿ​ಯಾಗಲು ಮಂಜು​ನಾಥ್‌ ಅವ​ರನ್ನು ಗೆಲ್ಲಿ​ಸುವ ಮೂಲಕ ಮಾಗಡಿ ಜನರು ಕೊಡುಗೆ ನೀಡ​ಬೇಕು. ಹಣ ಮತ್ತು ಮಂತ್ರಿ​ಗಿ​ರಿಯ ಸ್ಥಾನಕ್ಕೆ ಆಸೆ ಪಡದೆ ತನ್ನ ಮೇಲೆ ಎಷ್ಟೇ ಒತ್ತ​ಡ​ಗಳು ಬಂದರೂ ಅದೆ​ಲ್ಲ​ವನ್ನು ಮೀರಿ ನಿಂತ ಮಂಜು​ನಾಥ್‌ ಯೋಗ್ಯ ರಾಜ​ಕಾ​ರಣಿ. ಪಕ್ಷಾಂತರ ಮಾಡದೆ ಪಕ್ಷ ನಿಷ್ಠೆ ಪ್ರದ​ರ್ಶಿ​ಸಿದ ಅವರು, ಕ್ಷೇತ್ರದ ಜನರ ಆಶೋ​ತ್ತ​ರ​ಗ​ಳಿಗೆ ನೆರ​ವಾ​ದ​ವರು. ಪೂರ್ವ​ದಲ್ಲಿ ಸೂರ್ಯ ಹುಟ್ಟು​ವುದು ಎಷ್ಟುಸತ್ಯವೊ ಮಂಜು​ನಾಥ್‌ ಗೆಲುವು ಅಷ್ಟೇ ಸತ್ಯ ಎಂದು ದೇವೇ​ಗೌ​ಡರು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ರಾಜಕೀಯದಲ್ಲಿ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ: ಎಚ್‌.ಡಿ.ದೇವೇಗೌಡ

ಪಕ್ಷ, ಕ್ಷೇತ್ರಕ್ಕೆ ನಿಯ​ತ್ತಿನ ನಾಯಿ ಆಗಿರುವೆ: ಜೆಡಿ​ಎಸ್‌ ಅಭ್ಯರ್ಥಿ ಎ.ಮಂಜು​ನಾಥ್‌ ಮಾತ​ನಾಡಿ, ನೀವು ನನ್ನನ್ನು ಮೇ 10ರವ​ರೆಗೆ ರಕ್ಷಣೆ ಮಾಡಿ, ನಿಮ್ಮನ್ನು 20 ವರ್ಷ ಕಾಯು​ತ್ತೇನೆ. ಯಾರ ಮೇಲು ದೌರ್ಜನ್ಯ ಎಸ​ಗಲ್ಲ, ದರ್ಪ ಪ್ರದ​ರ್ಶಿ​ಸಲ್ಲ, ಹಗ​ರಣ ಮಾಡು​ವು​ದಿಲ್ಲ. ದೇವೇ​ಗೌ​ಡರ ಕುಟುಂಬಕ್ಕೆ ನಂಬಿಕೆ ದ್ರೋಹ ಬಗೆ​ಯಲ್ಲ. ಪಕ್ಷ ಮತ್ತು ನಿಮಗೆ (ಕ್ಷೇ​ತ್ರ​) ನಿಯ​ತ್ತಿನ ನಾಯಿ​ಯಾ​ಗಿ ಇರು​ತ್ತೇನೆ. ದೇವೇ​ಗೌ​ಡರ ಪಾದ ಮುಟ್ಟಿಹೇಳು​ತ್ತಿ​ದ್ದೇನೆ. ನನಗೂ ಹಲ​ವಾರು ಆಫರ್‌ಗಳು ಬಂದಿ​ದ್ದವು. ಅವ​ರಿ​ಗಿಂತ (ಮಾಜಿ ಶಾಸಕ ಬಾಲ​ಕೃ​ಷ್ಣ) 10 ಪಟ್ಟು ಹೆಚ್ಚಿನ ಆಫರ್‌ಗಳು ಅದಾ​ಗಿ​ದ್ದವು. ಕೋಟಿ ಕೋಟಿ ಹಣ, ಅಧಿ​ಕಾ​ರದ ಆಮಿ​ಷ​ವೊ​ಡ್ಡಿ​ದರು. ನನ್ನ ಮಗಳೂ ಪಕ್ಷ ಬಿಡ​ಬಾ​ರ​ದೆಂದು ಹೇಳಿ​ದಳು. ಅದ​ರಂತೆ ನಾನು ಜೆಡಿ​ಎಸ್‌ ಪಕ್ಷ ಮತ್ತು ದೇವೇ​ಗೌ​ಡರ ಕುಟುಂಬಕ್ಕೆ ದ್ರೋಹ ಬಗೆ​ಯದೆ ನಿಯ​ತ್ತಿನ ನಾಯಿ​ಯಾಗಿ ಉಳಿ​ದು​ಕೊಂಡೆ ಎಂದು ಹೇಳಿ ಭಾವು​ಕ​ರಾದ​ರು.

ದೇವೇ​ಗೌ​ಡರ ಹಣೆ ಬರಹವನ್ನು ತಾವೇ ಬರೆ​ದಿದ್ದು ಅನ್ನು​ತ್ತಾರೆ. ತುಮ​ಕೂ​ರಿ​ನಲ್ಲಿ ದೇವೇ​ಗೌಡ ಮತ್ತು ಮಂಡ್ಯ​ದಲ್ಲಿ ನಿಖಿಲ್‌ ಸೋಲಿ​ಸಿ​ದೆವೆಂದು ಸಂಭ್ರ​ಮಿ​ಸಿ​ದರು. ಅವ​ರಂತೆ ನಂಬಿಸಿ ಕತ್ತು ಕುಯ್ಯುವ ಕೆಲಸ ನಾನೆಂದೂ ಮಾಡಿಲ್ಲ ಎಂದು ಮಾಜಿ ಶಾಸಕ ಬಾಲ​ಕೃಷ್ಣ ವಿರುದ್ಧ ಹರಿ​ಹಾ​ಯ್ದರು. ಕ್ಷೇತ್ರ​ದಲ್ಲಿ ಬಿಜೆ​ಪಿ​ಯಿಂದ ಗೆದ್ದಿದ್ದ ನೀವು 1999ರಲ್ಲಿ ಅದೇ ಪಕ್ಷ​ದಿಂದ ಗೆಲ್ಲಲು ಆಗು​ತ್ತಿತ್ತೆ. ನೀವು ಜೆಡಿ​ಎಸ್‌ ಸೇರದೆ ಹೋಗಿ​ದ್ದರೆ ಮೂರು ಬಾರಿ ಶಾಸ​ಕ​ರಾ​ಗು​ತ್ತಿ​ರ​ಲಿಲ್ಲ. ದೇವೇ​ಗೌಡ ಮತ್ತು ಕುಮಾ​ರ​ಸ್ವಾ​ಮಿ ಆಶ್ರ​ಯ​ದ​ಲ್ಲಿದ್ದ ಕಾರ​ಣಕ್ಕೆ ಜನರು ನಿಮ್ಮನ್ನು ಗೆಲ್ಲಿ​ಸಿ​ದರು. ಇದು ನಿಮ್ಮ ಅನು​ಭ​ವಕ್ಕೂ ಬಂದಿ​ರ​ಬೇ​ಕ​ಲ್ಲವೇ ಎಂದು ಛೇಡಿ​ಸಿ​ದರು.

ನಿಮ್ಮಂತೆ 600 ಕೋಟಿ ಹಗ​ರಣ ಮಾಡಲಿಲ್ಲ. ಕಳ್ಳ ಬಿಲ್ಲು, ಸುಳ್ಳು ಬಿಲ್ಲು ಮಾಡ​ಲಿಲ್ಲ. ಯಾರ ಮೇಲು ಒಂದೇ ಒಂದು ಎಫ್‌ಐಆರ್‌ ಹಾಕಿ​ಸಲಿಲ್ಲ. ನಮ್ಮ ಪಕ್ಷ ಮಾತ್ರ​ವಲ್ಲ ಕಾಂಗ್ರೆಸ್‌ನವರ ಮೇಲೂ ಪ್ರಕ​ರಣ ದಾಖ​ಲಾ​ಗ​ದಂತೆ ನೋಡಿ​ಕೊಂಡಿ​ದ್ದೇನೆ. ನಾನು ಅವ್ಯ​ವ​ಹಾರ ಮಾಡಿ​ರು​ವು​ದನ್ನು ಸಾಬೀತು ಪಡಿ​ಸಿ​ದರೆ ರಾಜ​ಕೀ​ಯ​ದಿಂದ ನಿವೃತ್ತಿ ಘೋಷಿ​ಸು​ತ್ತೇನೆ ಎಂದು ಸವಾಲು ಹಾಕಿ​ದ​ರು. ಶಾಸಕ ಎ.ಮಂಜು​ನಾಥ್‌ ಪತ್ನಿ ಲಕ್ಷ್ಮಿ ಮಂಜು​ನಾಥ್‌ , ಪುರ​ಸಭೆ ಅಧ್ಯಕ್ಷೆ ವಿಜಯಾ ರೂಪೇಶ್‌, ಜೆಡಿ​ಎಸ್‌ ರಾಜ್ಯ ಉಪಾ​ಧ್ಯಕ್ಷ ಪೂಜಾ​ರಿ​ಪಾಳ್ಯ ಕೃಷ್ಣ​ಮೂರ್ತಿ, ತಾಲೂಕು ಅಧ್ಯಕ್ಷ ರಾಮಣ್ಣ, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ, ಮುಖಂಡ​ರಾದ ಸುಬ್ಬಾ​ಶಾ​ಸ್ತ್ರಿ, ದೊಡ್ಡಯ್ಯ, ಶಿವ​ರು​ದ್ರಪ್ಪ, ಶೇಷಪ್ಪ, ಗಂಗಾ​ಧರ್‌, ಜುಟ್ಟ​ನ​ಹಳ್ಳಿ ಜಯ​ರಾಮು ಉಪ​ಸ್ಥಿ​ತ​ರಿ​ದ್ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್‌ ಕುಮಾರಸ್ವಾಮಿ

ನ​ನ್ನನ್ನು ಸೋಲಿ​ಸಲು ಎಲ್ಲರೂ ಒಂದಾ​ಗಿ​ದ್ದಾರೆ. ಇದನ್ನು ದೇವೇ​ಗೌ​ಡರ ಬಳಿ ಹೇಳಿ​ಕೊಂಡೆ. ಅದ​ಕ್ಕಾಗಿ ಸ್ವತಃ ಅವರೇ ಬಂದು ಆಶೀ​ರ್ವಾದ ಮಾಡಿ​ದ್ದಾರೆ. ಇಳಿ ವಯ​ಸ್ಸಿ​ನಲ್ಲಿಯೂ ಬಡ​ವರು, ರೈತರು, ದೀನ ದಲಿ​ತರು, ಅಲ್ಪ​ಸಂಖ್ಯಾ​ತರು, ಮಹಿ​ಳೆ​ಯ​ರು, ಕಾರ್ಮಿ​ಕರು, ವಿದ್ಯಾ​ರ್ಥಿ​ಗಳ ​ಬಗ್ಗೆ ಅಪಾ​ರ​ ಕಾಳಜಿ ಹೊಂದಿ​ದ್ದಾರೆ. ಈ ಎಲ್ಲ ವರ್ಗದ ಜನರ ಹಿತ​ದೃ​ಷ್ಟಿ​ಯಿಂದ ಅವರ ಆಶ​ಯ​ದಂತೆ ಜೆಡಿ​ಎಸ್‌ ಅನ್ನು ಅಧಿ​ಕಾ​ರಕ್ಕೆ ತರುವ ಸಂಕಲ್ಪ ಮಾಡ​ಬೇ​ಕಿದೆ. ಅವರ ಆಸೆ​ಯನ್ನು ಈಡೇ​ರಿ​ಸ​ಬೇಕು.ಇಲ್ಲ​ದಿ​ದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತಾ​ಗು​ತ್ತದೆ.
-ಎ.ಮಂಜು​ನಾಥ್‌, ಜೆಡಿ​ಎಸ್‌ ಅಭ್ಯರ್ಥಿ, ಮಾಗಡಿ

Follow Us:
Download App:
  • android
  • ios