Asianet Suvarna News Asianet Suvarna News

ಡಿಕೆ ಸಹೋ​ದ​ರರ ಜತೆ ಆಡಿದ ಆಟ ನನ್ನ ಬಳಿ ನಡೆ​ಯಲ್ಲ: ಎಚ್‌ಡಿಕೆ ಲೇವಡಿ

ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ. ಸಚಿ​ವ​ರಾ​ದರು ತಲೆ​ಯಲ್ಲಿ ಪ್ರಜ್ಞೆ ಇಟ್ಟು​ಕೊಂಡು ಮಾತ​ನಾ​ಡ​ಬೇಕು. ನಾಲಿಗೆ ಹೊರ​ಳಿ​ದಂತೆಲ್ಲ ಮಾತ​ನಾ​ಡು​ವುದು ಸರಿ​ಯಲ್ಲ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯಣ ವಿರುದ್ಧ ಮಾಜಿ ಸಿಎಂ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು. 

jds leader hd kumaraswamy slams on dr cn ashwath narayan in ramanagara gvd
Author
Bangalore, First Published Aug 3, 2022, 7:55 PM IST

ರಾಮನಗರ (ಆ.03): ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ. ಸಚಿ​ವ​ರಾ​ದರು ತಲೆ​ಯಲ್ಲಿ ಪ್ರಜ್ಞೆ ಇಟ್ಟು​ಕೊಂಡು ಮಾತ​ನಾ​ಡ​ಬೇಕು. ನಾಲಿಗೆ ಹೊರ​ಳಿ​ದಂತೆಲ್ಲ ಮಾತ​ನಾ​ಡು​ವುದು ಸರಿ​ಯಲ್ಲ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯಣ ವಿರುದ್ಧ ಮಾಜಿ ಸಿಎಂ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ದುಡ್ಡಿನ ಮದ ಅಶ್ವತ್ಥ ನಾರಾ​ಯಣ ಅವ​ರನ್ನು ಹೀಗೆಲ್ಲ ಮಾತನಾಡಿಸುತ್ತಿದೆ. 

ಹತ್ಯೆಯಾದ​ವ​ರಿಗೆ 25 ಲಕ್ಷ ಕೊಡ​ಲು​ ಪ್ರಾರಂಭಿ​ಸಿದ್ದು ಯಾರು. ಒಂದೊಂದು ಕಡೆ ಒದೊಂದು ರೂಲ್ಸ್‌ ಮಾಡಿದ್ದಾರೆ. ದುಡ್ಡಿನ ಮದದಿಂದ ಮಾತಿನ ಮೇಲೆ ಹಿಡಿತ ಮೀರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಭೇಟಿ ಬಗ್ಗೆ ಕುಟುಕಿದ ಕುಮಾ​ರ​ಸ್ವಾಮಿ, ಇನ್ನೊಂದಷ್ಟು ಹೆಣಗಳನ್ನು ಬೀಳಿಸಲು ಅವರು ರಾಜ್ಯಕ್ಕೆ ಬರುತ್ತಿರಬೇಕು. ಗುಜರಾತ್‌ ನಲ್ಲಿನ ಹತ್ಯೆಗಳನ್ನೇ ಇಲ್ಲಿ ಮುಂದುವರಿಸಲು ಅವರು ಇಲ್ಲಿಗೆ ಬರುತ್ತಿರಬಹುದು ಎಂದು ಟೀಕಿ​ಸಿ​ದರು.

ಹತ್ಯೆಯಾದ ಮೂರೂ ಯುವಕರ ಮನೆಗೆ ಎಚ್‌ಡಿಕೆ ಭೇಟಿ, ಸೂಕ್ತ ತನಿಖೆಗೆ ಸರ್ಕಾರಕ್ಕೆ ಒತ್ತಾಯ

ಪ್ರಧಾನಿ ಮೋದಿ ಅವರು ಫೋಟೋ ರಾಜಕೀಯ ಶುರು ಮಾಡಿದ್ದರು. ಅದನ್ನು ಮುಂದು​ವ​ರೆ​ಸಿ​ರುವ ಅವರ ಶಿಷ್ಯ ಪ್ರತಾಪ್‌ ಸಿಂಹ ಕೂಡ ಫೋಟೋಗೆ ಸೀಮಿತವಾಗಿ​ದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಕಳಪೆಯಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಯಾರದೋ ಸರ್ಕಾರ​ದಲ್ಲಿ ಆಗಿದ್ದ ಕೆಲಸಕ್ಕೆ ಬಿಜೆಪಿ ಸರ್ಕಾರ ಟೇಪ್‌ ಕತ್ತರಿಸಿ ಬಿಲ್ಡಪ್‌ ತೆಗೆದುಕೊಳ್ಳುತ್ತಿದೆ ಎಂದು ಕುಮಾ​ರ​ಸ್ವಾಮಿ ಚಾಟಿ ಬೀಸಿದರು.

ರಾಮನಗರ ಡೀಸಿ, ಎಸ್ಪಿ ವಿರುದ್ಧ ಕಿಡಿ: ರಾಮನಗರ ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಇಬ್ಬರೂ ಎಂಜಿನಿಯರ್‌ ಗಳನ್ನು ಹೆದರಿಸಿ, ರಸ್ತೆಯ ಹಂಫ್ಸ್‌ ಗಳನ್ನು ತೆಗೆಸಿದ್ದಾರೆ. ಬಸವನಪುರದ ಬಳಿ ಪಿಡಿಒ ಒಬ್ಬರು ಮೃತಪಟ್ಟರೆ, ಒಬ್ಬರು ಕಾಲು ಕಳೆದುಕೊಂಡಿದ್ದಾರೆ. ನಿತ್ಯವೂ ಅಪಘಾತಗಳು ಆಗುತ್ತಿವೆ. ಅಧಿಕಾರಿಗಳು ಇರುವುದು ಜನರ ರಕ್ಷಣೆ ಮಾಡುವುದಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ತೋಟದ ಮನೆಯ ಮುಂದೆಯೇ ಅಪಘಾತ ಆಗಿ ಒಬ್ಬರು ಮೃತಪಟ್ಟಿದ್ದಾರೆ. ಹಂಫ್ಸ್‌ ಹಾಕಿ ಎಂದರು ಈವರೆಗೂ ಹಾಕಿಲ್ಲ. ಇವರಿಗೆ ಯಾವ ಕೋರ್ಟ್‌ ಆದೇಶ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾ​ರ​ಸ್ವಾಮಿ ಹೇಳಿದರು.

ದೇವೇಗೌಡರ ಆರೋಗ್ಯ ನೆನೆದು ಸಮಾವೇಶದಲ್ಲಿ ಎಚ್‌ಡಿಕೆ ಕಣ್ಣೀರು!

ಮಾಜಿ ಶಾಸಕ ಬಾಲಕೃಷ್ಣ ಅವರು, ನನಗೂ ಒಂದು ಚಾನ್ಸ್‌ ನೀಡಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜಕೀಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಕೆಲವೊಂದು ನಿರ್ಣಯ ಮಾಡಬೇಕಾಗುತ್ತದೆ. 2006ರಲ್ಲಿ ಎಂ.ಪಿ.ಪ್ರಕಾಶ್‌ ಮನೆಗೆ ಹೋಗಿ ನೀವೇ ಸಿಎಂ ಆಗಿ ಎಂದಿದ್ದೆ. ಆ ಸನ್ನಿವೇಶ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇನ್ನಾರೋ ನನ್ನನ್ನು ಸಿಎಂ ಮಾಡಿದ್ದಲ್ಲ.
-ಕುಮಾ​ರ​ಸ್ವಾಮಿ, ಮಾಜಿ ಸಿಎಂ

Follow Us:
Download App:
  • android
  • ios