Asianet Suvarna News Asianet Suvarna News

ಗೃಹ ಸಚಿವ ಸ್ಥಾನಕ್ಕೆ ಅರಗ ಜ್ಞಾನೇಂದ್ರ ಅಸಮರ್ಥ: ಎಚ್‌ಡಿಕೆ

ರಾಜ್ಯ​ದಲ್ಲಿ ಕಾನೂನು ಸುವ್ಯ​ವಸ್ಥೆ ಹದ​ಗೆ​ಟ್ಟಿ​ರು​ವುದು ಹಾಗೂ ಮಳೆ ಪ್ರವಾ​ಹ​ದಿಂದ ಸಂಕಷ್ಟ ಪರಿ​ಸ್ಥಿತಿ ಎದು​ರಾ​ಗಿ​ರು​ವು​ದ​ರಿಂದ ಚರ್ಚೆ ನಡೆಸಿ ಜನರ ನೆರ​ವಿಗೆ ಧಾವಿ​ಸ​ಬೇ​ಕಾ​ಗಿ​ರುವ ಕಾರಣ ಕೂಡಲೇ ವಿಧಾ​ನ​ಮಂಡಲ ಅಧಿ​ವೇ​ಶನ ಕರೆ​ಯ​ಬೇ​ಕೆಂದು ಮಾಜಿ ಸಿಎಂ ಎಚ್‌.ಡಿ.​ಕು​ಮಾ​ರ​ಸ್ವಾಮಿ ಸರ್ಕಾ​ರ​ವನ್ನು ಒತ್ತಾ​ಯಿ​ಸಿ​ದರು. 

jds leader hd kumaraswamy slams on araga jnanendra at ramanagara gvd
Author
Bangalore, First Published Aug 3, 2022, 1:31 PM IST

ರಾಮನಗರ (ಆ.03): ರಾಜ್ಯ​ದಲ್ಲಿ ಕಾನೂನು ಸುವ್ಯ​ವಸ್ಥೆ ಹದ​ಗೆ​ಟ್ಟಿ​ರು​ವುದು ಹಾಗೂ ಮಳೆ ಪ್ರವಾ​ಹ​ದಿಂದ ಸಂಕಷ್ಟ ಪರಿ​ಸ್ಥಿತಿ ಎದು​ರಾ​ಗಿ​ರು​ವು​ದ​ರಿಂದ ಚರ್ಚೆ ನಡೆಸಿ ಜನರ ನೆರ​ವಿಗೆ ಧಾವಿ​ಸ​ಬೇ​ಕಾ​ಗಿ​ರುವ ಕಾರಣ ಕೂಡಲೇ ವಿಧಾ​ನ​ಮಂಡಲ ಅಧಿ​ವೇ​ಶನ ಕರೆ​ಯ​ಬೇ​ಕೆಂದು ಮಾಜಿ ಸಿಎಂ ಎಚ್‌.ಡಿ.​ಕು​ಮಾ​ರ​ಸ್ವಾಮಿ ಸರ್ಕಾ​ರ​ವನ್ನು ಒತ್ತಾ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಸರಣಿ ಕೊಲೆ​ಗಳು, ಅಪ​ರಾ​ಧ​ಗ​ಳಿಂದಾಗಿ ರಾಜ್ಯ​ದ​ಲ್ಲಿ ಕಾನೂನು ಸುವ್ಯ​ವಸ್ಥೆ ಕುಸಿದಿರು​ವುದು ಒಂದೆ​ಡೆ​ಯಾ​ದರೆ, ಮಳೆ ಪ್ರವಾ​ಹ​ದಿಂದ ಜನರ ಪರಿ​ಸ್ಥಿತಿ ಭೀಕ​ರ​ವಾ​ಗಿದೆ. ಈ ಬಗ್ಗೆ ಕಲಾ​ಪ​ದಲ್ಲಿ ಚರ್ಚೆ ನಡೆಸಿ ತಕ್ಷಣ ಜನರ ನೆರ​ವಿಗೆ ಧಾವಿ​ಸ​ಬೇ​ಕಿದೆ ಎಂದ​ರು.

ಕರಾವಳಿಯಲ್ಲಿ ಕೊಲೆಗೀಡಾಗಿದ್ದ ಮೂವರು ಯುವಕರ ಮನೆಗಳಿಗೆ ಭೇಟಿ ನೀಡಿದ್ದೆ. ಆ ಕುಟುಂಬಗಳು ತೀವ್ರ ಭೀತಿಯಲ್ಲಿವೆ. ಮನೆಯವರು ಒಬ್ಬೊಬ್ಬರಾಗಿ ಹೊರಗೆ ಬರಲು ಹೆದರುತ್ತಿದ್ದಾರೆ. ಕರಾವಳಿಯಲ್ಲಿನ ಸರಣಿ ಕೊಲೆಗಳು ಬೆಚ್ಚಿ ಬೀಳಿಸಿವೆ. ಆದರೆ, ಬಿಜೆಪಿ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸರ್ಕಾರದ ವೈಫಲ್ಯಗಳೇ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವ​ರಿಗೆ ನಾಚಿಗೆ ಆಗಬೇಕು. ಗೃಹ ಸಚಿವರಾಗಲು ಅವರು ಸಮರ್ಥರಲ್ಲ. ಅವರಿಗೆ ಮನುಷ್ಯತ್ವ ಇಲ್ಲ. ಹತ್ಯೆ​ಯಾದ ಹಿಂದು ಯುವ​ಕರ ಕುಟುಂಬ​ಗ​ಳಿಗೆ 50 ಲಕ್ಷ ಏಕೆ ನೀಡಿ​ದರು. 

ಕರಾವಳಿಯ ಎಲ್ಲ ಹತ್ಯೆ ಕೇಸ್‌ ಎನ್‌ಐಎಗೆ ವಹಿಸಿ: ಎಚ್‌ಡಿಕೆ

ಆ ಪ್ರಕ​ರ​ಣ​ಗಳ ತನಿಖೆ ಮುಗಿ​ದಿಯೇ. ಫಾಝಿಲ್‌ ಕುಟುಂಬ ಏನು ತಪ್ಪು ಮಾಡಿತ್ತು. ಆ ಯುವ​ಕ 18 ಜನರ ಜೀವ ಉಳಿಸಿದವನು. ಅವನನ್ನು ಹತ್ಯೆ ಮಾಡಿದರೂ ಪರಿಹಾರ ನೀಡಿಲ್ಲ. ಈ ಹತ್ಯೆಗಳ ತನಿಖೆ ಪೂರ್ಣಗೊಂಡಿಲ್ಲ. ಗೃಹ ಸಚಿವರ ಹೇಳಿಕೆಯೇ ಸರಿ ಇಲ್ಲ ಎಂದ​ರು. ಬೆಳ್ಳಾರೆ ಮಸೂದ್‌, ಪ್ರವೀಣ್‌ ನೆಟ್ಟಾರೆ ಹತ್ಯೆ ಪೊಲೀಸರು ತಡೆಯಬಹುದಿತ್ತು. ಫಾಝಿಲ್‌ ಹತ್ಯೆ ಬಗ್ಗೆ ಪೊಲೀಸರಿಗೆ ಘಟನೆ ನಡೆದ ದಿನದ ಮಧ್ಯಾಹ್ನದಿಂದಲ್ಲೇ ಮಾಹಿತಿ ಇದ್ದರೂ, ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಗೃಹ ಇಲಾಖೆಯನ್ನು ಹಾಳು ಮಾಡಿದ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಗೃಹ ಸಚಿವ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಂಚರತ್ನ ಯಾತ್ರೆ ವೇಳೆ 104 ಅಸೆಂಬ್ಲಿ ಕ್ಷೇತ್ರಗಳಲ್ಲಿ ಗ್ರಾಮವಾಸ್ತವ್ಯ: ಎಚ್‌ಡಿಕೆ

ಭಟ್ಕಳದಲ್ಲಿ ನಾಲ್ವರು, ಕುಕ್ಕೆ ಸುಬ್ರಮಣ್ಯದಲ್ಲಿ ಇಬ್ಬರು ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅನೇಕ ಕಡೆ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಕೃಷಿ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲದಾಗಿದೆ. ಹೀಗಾಗಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು. ಎಲ್ಲದರ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕು​ಮಾ​ರ​ಸ್ವಾಮಿ ಒತ್ತಾಯಿಸಿದರು. ಪರಿಸ್ಥಿತಿ ಮುಂದುವರಿದರೆ, ಆಡಳಿತ ಪಕ್ಷಕ್ಕೆ ಮಾತ್ರವಲ್ಲ, ವಿರೋಧ ಪಕ್ಷವೂ ಜನರ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ವಿಧಾ​ನ​ಸ​ಭಾ​ಧ್ಯ​ಕ್ಷರ ಕ್ಷೇತ್ರ​ದಲ್ಲಿಯೇ ದೊಡ್ಡ ಪ್ರಮಾ​ಣದ ಹಾನಿ​ಯಾ​ಗಿದೆ. ವಿಧಾನಸಭಾಧ್ಯಕ್ಷರು ಕೂಡಲೇ ಕಲಾಪ ನಡೆಸಲು ಸರ್ಕಾರಕ್ಕೆ ಕಿವಿ ಹಿಂಡಿ ಸೂಚನೆ ನೀಡಬೇಕು ಎಂದು ಕುಮಾ​ರ​ಸ್ವಾಮಿ ಹೇಳಿ​ದರು.

Follow Us:
Download App:
  • android
  • ios