Asianet Suvarna News Asianet Suvarna News

ಬೀದ​ರ್‌ನ ಜೋಡೆ​ತ್ತುಗಳಿಗೊಲಿದ ಸಚಿ​ವ​ ಸ್ಥಾನ: ಖಂಡ್ರೆಗೆ ಅರಣ್ಯ, ರಹೀಮ್ ಖಾನ್‌ಗೆ ಪೌರಾಡಳಿತ ಖಾತೆ ಸಾಧ್ಯತೆ

ಮತ್ತೊಮ್ಮೆ ಜಿಲ್ಲೆಯ ಶಾಸ​ಕ​ರಿಗೆ ಸಚಿವ ಸ್ಥಾನ. ಅದೂ ಗಡಿ ಜಿಲ್ಲೆ ಕರ್ನಾ​ಟ​ಕದ ಕಿರೀಟ ಎಂದೇ ಖ್ಯಾತ​ವಾದ ಬೀದ​ರ್‌ಗೆ ಎರ​ಡೆ​ರೆಡು ಸಚಿವ ಸ್ಥಾನ. ಭಾಲ್ಕಿ ಶಾಸಕ, ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಬೀದರ್‌ ಶಾಸಕ ರಹೀಮ್‌ ಖಾನ್‌ ಇವ​ರಿ​ಬ್ಬ​ರೂ ಸಿದ್ದ​ರಾ​ಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾ​ರ​ದ ಸಚಿವ ಸಂಪು​ಟದಲ್ಲಿ ಸ್ಥಾನ ಪಡೆ​ದಿ​ದ್ದಾರೆ.

Ishwar Khandre and Rahim Khan appointed as new ministers at bidar rav
Author
First Published May 28, 2023, 6:05 AM IST

ಅಪ್ಪಾ​ರಾವ್‌ ಸೌದಿ

ಬೀದರ್‌ (ಮೇ.28) : ಮತ್ತೊಮ್ಮೆ ಜಿಲ್ಲೆಯ ಶಾಸ​ಕ​ರಿಗೆ ಸಚಿವ ಸ್ಥಾನ. ಅದೂ ಗಡಿ ಜಿಲ್ಲೆ ಕರ್ನಾ​ಟ​ಕದ ಕಿರೀಟ ಎಂದೇ ಖ್ಯಾತ​ವಾದ ಬೀದ​ರ್‌ಗೆ ಎರ​ಡೆ​ರೆಡು ಸಚಿವ ಸ್ಥಾನ. ಭಾಲ್ಕಿ ಶಾಸಕ, ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಬೀದರ್‌ ಶಾಸಕ ರಹೀಮ್‌ ಖಾನ್‌ ಇವ​ರಿ​ಬ್ಬ​ರೂ ಸಿದ್ದ​ರಾ​ಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾ​ರ​ದ ಸಚಿವ ಸಂಪು​ಟದಲ್ಲಿ ಸ್ಥಾನ ಪಡೆ​ದಿ​ದ್ದಾರೆ.

ಪ್ರಸಕ್ತ ವಿಧಾ​ನ​ಸಭಾ ಚುನಾ​ವ​ಣೆ​(Karnataka assembly electin)ಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಕಳೆ​ದು​ಕೊಂಡು ಮೂರ​ರಿಂದ ಎರ​ಡಕ್ಕೆ ಇಳಿ​ದಿ​ದ್ದರೂ ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯನ್ನು ಮುಂದಿ​ಟ್ಟು​ಕೊಂಡು ಕಾಂಗ್ರೆಸ್‌ ಈ ಇಬ್ಬ​ರಿಗೂ ಸಚಿವ ಸ್ಥಾನ ನೀಡಿ​ದಂತಿ​ದ್ದರೂ ಸಿದ್ದ​ರಾ​ಮಯ್ಯ, ಡಿ.ಕೆ. ಶಿವ​ಕು​ಮಾರ್‌(DK Shivakumar) ಜೋಡೆ​ತ್ತಿನ ಸರ್ಕಾ​ರ​ದಿಂದ ಬೀದ​ರ್‌ಗೆ ಜೋಡೆ​ತ್ತು​ಗ​ಳ ಬಂಪರ್‌ ಕೊಡು​ಗೆ ಎಂದರೆ ತಪ್ಪಾ​ಗ​ಲಿ​ಕ್ಕಿಲ್ಲ.

ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ

ಭಾಲ್ಕಿ ವಿಧಾ​ನ​ಸಭಾ ಕ್ಷೇತ್ರ(Bhalki assembly constituency)​ದಿಂದ ಸತತ 4 ಚುನಾ​ವ​ಣೆ​ಗ​ಳಲ್ಲಿ ಜಯ​ಭೇರಿ ಬಾರಿ​ಸಿ​ರು​ವ ಈಶ್ವರ ಖಂಡ್ರೆ (Eshwar khandre)ಈ ಬಾರಿಯ ಚುನಾ​ವ​ಣೆ​ಯ​ಲ್ಲಿ ಅತೀ ಹೆಚ್ಚು ಅಂತ​ರದ ಜಯ ದಾಖ​ಲಿ​ಸಿ​ದ್ದರೆ, ಬೀದ​ರ್‌ ಕ್ಷೇತ್ರ​ದಿಂದ ರಹೀ​ಮ್‌​ ಖಾ​ನ್‌ ಕೂಡ 4 ಬಾರಿ ಸತತ ಜಯ ದಾಖ​ಲಿ​ಸಿದ್ದು ಜಿಲ್ಲೆ​ಯ ಕಾಂಗ್ರೆಸ್‌ ಶಾಸ​ಕರ ಸಾಧನೆ ಎಂದೆ​ನ್ನ​ಬ​ಹುದು.

ಕಳೆದ 2016ರಲ್ಲಿ ಪೌರಾ​ಡ​ಳಿತ ಸಚಿ​ವ​ರಾ​ಗಿದ್ದ ಈಶ್ವರ ಖಂಡ್ರೆ ಅವ​ರು ಮತ್ತೊಮ್ಮೆ ಸಚಿ​ವ​ರಾಗಿ ಅಧಿ​ಕಾರ ಸ್ವೀಕ​ರಿ​ಸಿದ್ದಾರೆ. ಈ ಬಾರಿ ಅರಣ್ಯ, ಪರಿ​ಸರ ವಿಜ್ಞಾನ ಹಾಗೂ ಪರಿ​ಸ​ರ ಖಾತೆಯ ಸಂಪುಟ ದರ್ಜೆ​ಯ ಸಚಿ​ವ ಸ್ಥಾನ ನೀಡಿದ್ದು ಜಿಲ್ಲೆಯ ಅಭಿ​ವೃ​ದ್ಧಿಗೆ ಪೂರಕ ಯೋಜ​ನೆ​ಗಳ ಜಾರಿಯ ಭರ​ವಸೆ ಮೂಡಿದೆ.

ಭಾಲ್ಕಿ ಕ್ಷೇತ್ರದಲ್ಲಿನ ಅರ​ಣ್ಯೀ​ಕ​ರ​ಣಕ್ಕೆ ಆದ್ಯ​ತೆ, ರೈತ​ರಿಗೆ ಕಾರಂಜಾ​ದಿಂದ ನೀರು ಪೂರೈ​ಕೆಗೆ ಪೂರ್ಣ​ಪ್ರ​ಮಾ​ಣದ ವ್ಯವಸ್ಥೆ, ಪ್ರವಾಸಿ ತಾಣ​ಗಳ ಅಭಿ​ವೃದ್ಧಿ, ಕಾರಂಜಾ ಸಂತ್ರಸ್ತರಿಗೆ ಪರಿ​ಹಾರ, ಗೋದಾ​ವರಿ ನದಿ ನೀ​ರಿನ ಸದ್ಬ​ಳ​ಕೆಗೆ ಯೋಜನೆ, ಬೆಳೆ ಹಾನಿ ಪರಿ​ಹಾರ, ರೈತ ಪರ ನೀರಾ​ವರಿ ಯೋಜ​ನೆ​ಗಳ ಜಾರಿ ಸೇರಿ​ದಂತೆ ರಾಜ್ಯದ ಹಲ​ವಾರು ಪ್ರಗತಿ ಪರ ಕಾರ್ಯ​ಕ್ರ​ಮ​ಗಳು ಹೀಗೆಯೇ ಸಾಲು ಸಾಲು ಸವಾ​ಲು​ಗಳು ಸ್ವಾಗ​ತಿ​ಸು​ತ್ತಿವೆ.

ಹಾಗೆಯೇ ರಹೀಮ್‌ ಖಾನ್‌ 2018ರಲ್ಲಿ ಯುವ​ಜನ ಸೇವಾ ಹಾಗೂ ಕ್ರೀಡಾ ಖಾತೆಯ ಸಚಿ​ವ​ರಾ​ಗಿ​ದ್ದರು. ಈಗ ಮತ್ತೊಂದು ಅವ​ಧಿಯ ಸಚಿವ ಸ್ಥಾನ ಲಭಿ​ಸಿ​ದ್ದು ಈ ಬಾರಿ ಪೌರಾ​ಡ​ಳಿತ ಖಾತೆ ಸಚಿ​ವ​ರಾ​ಗಿದ್ದಾರೆ. ಸ್ಥಳೀಯ ಸಂಸ್ಥೆ​ಗಳ ಬಲ​ವ​ರ್ಧ​ನೆ​ಯಲ್ಲಿ ಮಹ​ತ್ವದ ಪಾತ್ರ ವಹಿ​ಸುವುದು ಅಲ್ಲದೆ ಬೀದ​ರ್‌​ನ​ಲ್ಲಿ ಜಿಲ್ಲಾ ಸಂಕೀ​ರ್ಣ​ ನಿ​ರ್ಮಾ​ಣ, ಬೀದರ್‌ ಮಿನಿ ವಿಧಾನ ಸೌಧ ನಿರ್ಮಾ​ಣ, ಐತಿ​ಹಾ​ಸಿಕ ಕರೇಜ್‌ ಪುನ​ರು​ಜ್ಜೀ​ವನ, ಕೈಗಾ​ರಿಕಾ ಘಟ​ಕ​ಗಳ ಸ್ಥಾಪ​ನೆಗೆ ಅಗತ್ಯ ಕಾರ್ಯ ಯೋಜನೆ, ನಿರು​ದ್ಯೋಗ ಸಮಸ್ಯೆಗೆ ಪರಿ​ಹಾ​ರೋ​ಪಾ​ಯ​ಗಳು ಹೀಗೆಯೇ ಹತ್ತು ಹಲವು ಕಾರ್ಯ ಅಲ್ಲದೆ ಯೋಜ​ನೆ​ಗಳ ಜಾರಿ ಸೇರಿ​ದಂತೆ ರಾಜ್ಯದ ಹಲ​ವಾರು ಪ್ರಗತಿ ಪರ ಕಾರ್ಯ​ಕ್ರ​ಮ​ಗಳ ಜಾರಿ​ಯಲ್ಲಿ ಮಹ​ತ್ವದ ಪಾತ್ರ ವಹಿ​ಸ​ಬೇ​ಕಾದ ಅಗ​ತ್ಯ​ತೆ​ಯಿದೆ.

ಹೀಗಾಗಿ ಒಟ್ಟಾರೆ ಜಿಲ್ಲೆಯ ಈ ಇಬ್ಬ​ರು ಸಚಿವ​ರು​ಗ​ಳ ಮೇಲೆ ಜನತೆ ಭಾರಿ ನಿರೀ​ಕ್ಷೆ​ಗ​ಳನ್ನು ಇಟ್ಟು​ಕೊಂಡಿದ್ದು, ಜಿಲ್ಲೆಯ ಪ್ರವಾ​ಸೋ​ದ್ಯಮ, ಕೈಗಾ​ರಿ​ಕೋ​ದ್ಯಮ, ನೀರಾ​ವ​ರಿ, ಶೈಕ್ಷ​ಣಿಕ ಪ್ರಗತಿ, ​ಕಾ​ರಂಜಾ ಸಂತ್ರ​ಸ್ತರ ಪರಿ​ಹಾರ, ರಸ್ತೆ ಸುಧಾ​ರಣೆ ಸೇರಿ​ದಂತೆ ಮತ್ತಿ​ತ​ರ​ವು​ಗಳ ಕಾರ್ಯ​ಕ್ರಮ, ಕಾಮ​ಗಾ​ರಿ​ಗ​ಳತ್ತ ಹೆಚ್ಚಿನ ಒಲುವು ತೋರ​ಬೇ​ಕಿ​ದೆ.

ನಮ್ಮ ಮೇಲೆ ವಿಶ್ವಾ​ಸ​ವಿಟ್ಟು ಕಾಂಗ್ರೆಸ್‌ನ ವರಿ​ಷ್ಠ​ರಾದ ಸೋನಿ​ಯಾ​ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿ​ಕಾ​ರ್ಜುನ್‌ ಖರ್ಗೆ, ಸಿದ್ದ​ರಾ​ಮಯ್ಯ, ಡಿ.ಕೆ ಶಿವ​ಕು​ಮಾರ್‌ ಅವರು ದೊಡ್ಡ ಜವಾ​ಬ್ದಾರಿ ನೀಡಿ​ದ್ದಾರೆ. ಕಾಂಗ್ರೆಸ್‌ ಕಾರ್ಯಾ​ಧ್ಯ​ಕ್ಷ​ನಾಗಿ ಸೇವೆ ಸಲ್ಲಿ​ಸಿ, ಪಕ್ಷ ಅಧಿ​ಕಾ​ರಕ್ಕೆ ಬರಲು ಪ್ರಯತ್ನ ಮಾಡಿ​ದ್ದೇನೆ, ಒಳ್ಳೆಯ ಆಡ​ಳಿತ ಕೊಡು​ತ್ತೇ​ವೆ. ನಮ್ಮ ರಾಜ್ಯ ಹಾಗೂ ಕಲ್ಯಾಣ ಕರ್ನಾ​ಟಕ ಭಾಗ​ವನ್ನು ಅಭಿ​ವೃ​ದ್ಧಿ ಪಥ​ದತ್ತ ಕೊಂಡೊ​ಯ್ಯಲು ಶ್ರಮ​ವ​ಹಿ​ಸು​ತ್ತೇನೆ, ಹಗ​ರಣ ರಹಿತ ದಕ್ಷ ಆಡ​ಳಿತ ನೀಡ್ತೇವೆ.

-ಈಶ್ವರ ಖಂಡ್ರೆ, ನೂತನ ಸಚಿವ

ಕಲಬುರಗಿ: ಡಾ. ಶರಣಪ್ರಕಾಶ ಪಾಟೀಲರಿಗೆ ಮತ್ತೆ ಮಂತ್ರಿ ಭಾಗ್ಯ! 

ಎರ​ಡನೇ ಬಾರಿಗೆ ಸಚಿ​ವ​ನ​ನ್ನಾಗಿ ಮಾಡಿ​ರುವ ಕಾಂಗ್ರೆ​ಸ್‌ನ ವರಿ​ಷ್ಠ​ರಿಗೆ ನಾನು ಚಿರ ಋುಣಿ​ಯಾ​ಗಿ​ದ್ದೇ​ನೆ. ಬೀದ​ರ್‌ನ ಸರ್ವ ಜನಾಂಗದ ಜನ​ರನ್ನು ಜೊತೆಗೆ ತೆಗೆ​ದು​ಕೊಂಡು ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮಾಡು​ವತ್ತ ಮುಂದಾ​ಗು​ತ್ತೇ​ನೆ. ರಾಜ್ಯದ ಅಭಿ​ವೃ​ದ್ಧಿಯ ಜೊತೆ ಜೊತೆಗೆ ಕಲ್ಯಾಣ ಕರ್ನಾ​ಟಕ ಭಾಗಕ್ಕೂ ಹೆಚ್ಚಿನ ಶ್ರಮ ಹಾಕು​ತ್ತೇ​ನೆ. ಸಚಿ​ವ​ನಾಗಿ ಕಾರ್ಯ ಮಾಡುವ ಅವ​ಕಾ​ಶದ ಸದ್ಬ​ಳಕೆ ಮಾಡಿ​ಕೊಂಡು ರಾಜ್ಯದ ಸರ್ವ​ತೋ​ಮುಖ ಬೆಳ​ವ​ಣಿ​ಗೆಗೆ ಶ್ರಮಿ​ಸು​ತ್ತೇನೆ.

-ರಹೀಮ್‌ ಖಾನ್‌, ನೂತನ ಸಚಿ​ವ

Follow Us:
Download App:
  • android
  • ios