ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ರಾಜಕೀಯಕ್ಕೆ ಸೇರ್ತಾರಾ?
ಶಿಕ್ಷಣತಜ್ಞೆ, ಲೇಖಕಿ, ಸಮಾಜಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ರಾಜಕೀಯದ ಬಗೆಗಿರುವ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶಿಕ್ಷಣತಜ್ಞೆ, ಲೇಖಕಿ, ಸಮಾಜಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ರಾಜಕೀಯಕ್ಕೆ ಸೇರುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಇತ್ತೀಚೆಗೆ ಮಾತನಾಡಿದ್ದಾರೆ. ಸುಧಾ ಮೂರ್ತಿ ಅವರು ರಾಜಕೀಯ ಸೇರುವ ಆಸಕ್ತಿ ನನಗಿಲ್ಲ, ನಾನು ಇರುವ ರೀತಿ ಖುಷಿ ತಂದಿದೆ ಎಂದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ, ನಾನು ಏನಾಗಿದ್ದರೂ ನನಗೆ ಸಂತೋಷವಾಗಿದೆ, ನಾನು ಇದ್ದಂತೆಯೇ ಸಂತೋಷವಾಗಿದ್ದೇನೆ ಎಂದ ಅವರು ಹೊಸ ಸಂಸತ್ ಕಟ್ಟಡವನ್ನು ಶ್ಲಾಘಿಸಿದರು ಮತ್ತು ಕಟ್ಟಡಕ್ಕೆ ಭೇಟಿ ನೀಡುವುದು ಅವರ ಕನಸು ನನಸಾಗಿದೆ ಎಂದು ಹೇಳಿದರು.
ಜಿಯೋ ಏರ್ಫೈಬರ್ಗೆ ಬೂಸ್ಟರ್ ಪ್ಲಾನ್ ಘೋಷಿಸಿದ ಆಕಾಶ್ ಅಂಬಾನಿ, ಅತ್ಯಂತ ಕಡಿಮೆ ದರಕ್ಕೆ 1000GB ಡೇಟಾ ಲಭ್ಯ!
ಇದು ತುಂಬಾ ಸುಂದರವಾಗಿದೆ. ಅದನ್ನು ವರ್ಣಿಸಲು ಪದಗಳಿಲ್ಲ. ನಾನು ಇದನ್ನು ಬಹಳ ದಿನಗಳಿಂದ ನೋಡಬೇಕೆಂದು ಬಯಸಿದ್ದೆ. ಇಂದು ಕನಸು ನನಸಾಯಿತು. ಇದು ಕಲೆ, ಸಂಸ್ಕೃತಿ, ಭಾರತೀಯ ಇತಿಹಾಸ ಎಲ್ಲವೂ ಸುಂದರವಾಗಿದೆ" ಎಂದು ಸುಧಾ ಮೂರ್ತಿ ಹೇಳಿದರು.
ಸುಧಾ ಮೂರ್ತಿ ಅವರು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಸುಧಾ ಅಮ್ಮ ಹೊಸ ಅನಿಮೇಟೆಡ್ ಸರಣಿ ಸ್ಟೋರಿ ಟೈಮ್ ಅನ್ನು ಪ್ರಾರಂಭಿಸಿದರು ಮತ್ತು ತಮ್ಮ ಸೊಸೆ ಅಪರ್ಣಾ ಕೃಷ್ಣನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದು, ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ನಮ್ಮಿಬ್ಬರ ನಡುವೆ ಪರಸ್ಪರ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು.
ಸುಧಾ ಮೂರ್ತಿ ಅವರ ಸೊಸೆಯೊಂದಿಗಿನ ಭಾಂದವ್ಯದ ಬಗ್ಗೆ ಕೇಳಿದ್ದಕ್ಕೆ ದೇವರ ದಯೆಯಿಂದ ಏನೂ ತೊಂದರೆ ಇಲ್ಲ. ಇದಕ್ಕೆ ಕಾರಣ ನಾನು ನನ್ನ ಕಥೆಯನ್ನು ನೀಡಿದ್ದೇನೆ. ನಾನು ಅವಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅದು ಅವಳ ಜಗತ್ತು ಎಂದು ನಾನು ಭಾವಿಸುತ್ತೇನೆ, ನಾನು ಜ್ಞಾನವಿಲ್ಲದೆ ಅಲ್ಲಿ ಹಸ್ತಕ್ಷೇಪ ಮಾಡಬಾರದು. ನಮ್ಮಿಬ್ಬರಿಗೂ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಮತ್ತು ಒಬ್ಬರನ್ನೊಬ್ಬರು ಅಪಾರ್ಥ ಮಾಡಿಕೊಳ್ಳಲು ಅಷ್ಟು ಸಮಯವಿಲ್ಲ.. ಹೆಚ್ಚಿನ ಸಮಯ ಅವಳು ಅವಳ ಕೆಲಸದಲ್ಲಿ ನಿರತಳಾಗಿದ್ದಾಳೆ ಮತ್ತು ನಾನು ಸಹ ಪ್ರಯಾಣಿಸುತ್ತಿದ್ದೇನೆ. ಅವಳು ಒಳ್ಳೆಯವಳು, ದಕ್ಷಳು ಮತ್ತು ಅವಳು ಒಳ್ಳೆಯ ಕೆಲಸ ಮಾಡುತ್ತಾಳೆ ನಾನು ಯಾಕೆ ಚಿಂತಿಸಬೇಕು?" ಎಂದಿದ್ದಾರೆ.