Asianet Suvarna News Asianet Suvarna News

ಬೆಂಗ್ಳೂರಲ್ಲಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ

ಕಳೆದ ಮಂಗಳವಾರವಷ್ಟೇ ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ್ದ ಕುಮಾರಸ್ವಾಮಿ ಅವರು ಶನಿವಾರ ಮತ್ತೆ ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ ಅವರ ಪರವಾಗಿ ಕ್ಷೇತ್ರದ ಮುದ್ದಯ್ಯನಪಾಳ್ಯ, ಮುನೇಶ್ವರ ದೇವಸ್ತಾನ ಸರ್ಕಲ್‌, ಉಳ್ಳಾಲ ಉಪನಗರ, ದೊಡ್ಡಬಸ್ತಿ ಸೇರಿದಂತೆ ಕ್ಷೇತ್ರದ 18ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಥಯಾತ್ರೆ ಕೈಗೊಂಡು ಬೆಂಬಲಿಸುವಂತೆ ಕೋರಿದರು.

HD Kumaraswamy Held JDS Pancharatna Yatra in Bengaluru grg
Author
First Published Apr 2, 2023, 10:30 AM IST

ಬೆಂಗಳೂರು(ಏ.02):  ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶನಿವಾರ ಯಶವಂತಪುರ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಕೈಗೊಂಡು ಮತಯಾಚಿಸಿದರು. ಕಳೆದ ಮಂಗಳವಾರವಷ್ಟೇ ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ್ದ ಕುಮಾರಸ್ವಾಮಿ ಅವರು ಶನಿವಾರ ಮತ್ತೆ ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ ಅವರ ಪರವಾಗಿ ಕ್ಷೇತ್ರದ ಮುದ್ದಯ್ಯನಪಾಳ್ಯ, ಮುನೇಶ್ವರ ದೇವಸ್ತಾನ ಸರ್ಕಲ್‌, ಉಳ್ಳಾಲ ಉಪನಗರ, ದೊಡ್ಡಬಸ್ತಿ ಸೇರಿದಂತೆ ಕ್ಷೇತ್ರದ 18ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಥಯಾತ್ರೆ ಕೈಗೊಂಡು ಬೆಂಬಲಿಸುವಂತೆ ಕೋರಿದರು.

ಮುದ್ದಯ್ಯನ ಪಾಳ್ಯದಲ್ಲಿ ವಿಶೇಷ ಪಂಚರತ್ನ ಹಾರ, ಮಾರುತಿ ನಗರದಲ್ಲಿ ಬೃಹತ್‌ ಬಾಳೆಕಾಯಿ ಹಾರ ಸೇರಿದಂತೆ ಅನೇಕ ಹಾರಗಳ ಮೂಲಕ ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು, ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಬರಮಾಡಿಕೊಂಡರು.

ಹಾಲಿ, ಮಾಜಿ ಶಾಸಕರಿಗೆ ಆತಂಕ ಎದುರಾಗಿದೆ : ಜೆಡಿಎಸ್‌ ಮುಖಂಡ

ಗೋವಿಂದರಾಜ ನಗರ ಕ್ಷೇತ್ರದಲ್ಲಿ ಬಿರುಸಿನ ಸಂಚಾರ:

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಅವರು ಅಭ್ಯರ್ಥಿ ಆಗಿರುವ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ ಪಂಚರತ್ನ ರಥಯಾತ್ರೆ ನಡೆಸಿದ ಕುಮಾರಸ್ವಾಮಿ ಅವರು ಸುಮಾರು ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮತ ಯಾಚನೆ ನಡೆಸಿದರು.

ರಾಜಾಜಿನಗರ 6ನೇ ಬ್ಲಾಕ್‌ನಿಂದ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಆರಂಭ ಮಾಡಿದ ಕುಮಾರಸ್ವಾಮಿ ಅವರು ಪ್ರಸನ್ನ ಚಿತ್ರಮಂದಿರ, ಟೋಲ… ಗೇಟ್‌, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜ ಸ್ವಾಮಿ ದೇವಾಲಯದ ವೃತ್ತ, ಶೋಭಾ ಆಸ್ಪತ್ರೆ ವೃತ್ತ, ಪಟ್ಟಗಾರ ಪಾಳ್ಯ ಸರ್ಕಲ್‌, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ ಮುಂತಾದ ಪ್ರದೇಶಗಳಲ್ಲಿ ಸಂಚಾರ ಮಾಡಿದರು.

ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ರಾಮಸ್ವಾಮಿ

ಈ ಕ್ಷೇತ್ರದಲ್ಲಿ ಬೃಹತ್‌ ಸೇಬಿನ ಹಾರ, ಬೃಹತ್‌ ಮಲ್ಲಿಗೆ ಹಾರ ಹಾಕಿ ಮಾಜಿ ಮುಖ್ಯಮಂತ್ರಿಗಳನ್ನು ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ರಾಜ್ಯ ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಸೇರಿದಂತೆ ಪಕ್ಷದ ಹಿರಿಯ, ಕಿರಿಯ ಮುಖಂಡರು ಈ ವೇಳೆ ಹಾಜರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios