Asianet Suvarna News Asianet Suvarna News

ಕುಚುಕು ಗೆಳೆಯ ಶ್ರೀರಾಮುಲುಗೆ ಡಿಫ್ರೆಂಟ್ ಅಗಿ ಬರ್ತ್ ಡೇ ವಿಶ್ ಮಾಡಿದ ಜನಾರ್ದನ ರೆಡ್ಡಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಸಚಿವ ಬಿ. ಶ್ರೀರಾಮುಲು ನಡುವಿನ ಗೆಳೆತನ ಹೇಗಿದೆ ಎನ್ನುವುದು ಗೊತ್ತಿರುವ ವಿಚಾರವೇ. ಇದೀಗ ಕುಚುಕು ಗೆಳಯನ ಬರ್ತ್‌ ಡೇಗೆ ಜನಾದರ್ನ ರೆಡ್ಡಿ  ಕವನದ ಮೂಲಕ ಶುಭಾಶಯ ಕೋರಿದ್ದಾರೆ.

Gali janardhana reddy wishes to minister sriramulu birth day
Author
Bengaluru, First Published Aug 8, 2020, 6:28 PM IST

ಬೆಂಗಳೂರು, (ಆ.8): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ‌ ಅವರು ಪರಮಾಪ್ತ ಗೆಳೆಯ ಶಾಸಕ ಬಿ ಶ್ರೀರಾಮುಲು ಅವರಿಗೆ ವಿಶೇಷವಾಗಿ ಬರ್ತ್ ಡೇ ವಿಶ್ ಮಾಡಿದ್ದಾರೆ.

ಹೌದು...ಇಂದು (ಶನಿವಾರ) ಸಚಿವ ಶ್ರೀರಾಮುಲು ಜನ್ಮ ದಿನಕ್ಕೆ ಸ್ನೇಹಿತ ಜನಾರ್ದನ ರೆಡ್ಡಿ ಭಾವನಾತ್ಮಕವಾಗಿ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲ ಶ್ರೀರಾಮುಲು ಅವರಿಗಾಗಿ ಕವನ ಬರೆದು ಜನುಮ ದಿನದ ಶುಭಾಶಯ ತಿಳಿಸಿದ್ದಾರೆ. 

ಧಾರವಾಡ: ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಮೊಮ್ಮಗಳಿಗೆ ಕಲಘಟಗಿ ತೊಟ್ಟಿಲು..!

ಜನ ನಾಯಕ, ಬಡವರ ಬಂಧು, ಆರೋಗ್ಯ ಸಚಿವ, ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು ಅವರಿಗೆ ಸಾಗರದಷ್ಟು ಆಳವಾಗಿರುವ
ನಮ್ಮ ಗಟ್ಟಿ ಗೆಳತನವನ್ನು ಚಿಕ್ಕ ಕವನದ ರೂಪದಲ್ಲಿ ಕಟ್ಟಿ ಹಾಕುವ ಮೂಲಕ ಹುಟ್ಟು ಹಬ್ಬದ ಶುಭ ಕೋರುತ್ತೇನೆ ಎಂದು ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ, ರೆಡ್ಡಿ, ಶ್ರೀರಾಮುಲುಗೆ ಯಾವ ರೀತಿ ಶುಭೋರಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಭೂತಾಯಿಯ ಮಡಿಲಲ್ಲಿ ಆಡಿ ಬೆಳೆದ ಸ್ನೇಹ ನಮ್ಮದು.
ಕನ್ನಡಮ್ಮನ ಮಣ್ಣಲ್ಲಿ ಹದವಾಗಿ ಬೆಳೆದ ಪವಿತ್ರ ಸ್ನೇಹ ನಮ್ಮದು.
ಬಡತನ ಸಿರಿತನವನ್ನು ಮೆಟ್ಟಿ ನಿಂತ ಸ್ನೇಹ ನಮ್ಮದು.
ರಕ್ತ ಸಂಬಂದವನ್ನು ಮೀರಿ ಬೆಳೆದ ಸ್ನೇಹ ನಮ್ಮದು.
ಜಾತಿ, ಮತ, ಭೇದವನ್ನು ಮೀರಿದ ಸ್ನೇಹ ನಮ್ಮದು.
ಸ್ವಾರ್ಥವನ್ನು ಹತ್ತಿರ ಸುಳಿಯಲು ಬಿಡದ, ನಿಸ್ವಾರ್ಥ ಸ್ನೇಹ ನಮ್ಮದು.
ಅವನು ಜೀವಕ್ಕೆ ಜೀವ ಕೊಡುವ ಗೆಳೆಯ
ಅಧಿಕಾರದ ದಾಹವಿಲ್ಲ, ಸಿರಿ ಸಂಪತ್ತಿನ ಚಿಂತೆ ಇಲ್ಲ. 
ಇವೆಲ್ಲವನ್ನು ಮೀರಿದ್ದು, ನಮ್ಮ ಸ್ನೇಹ.
ಹೇಗೆ ವರ್ಣಿಸಲಿ ಈ ನನ್ನ ಸ್ನೇಹಿತನ ಸ್ನೇಹವನ್ನು
ಅಕ್ಷರಗಳಲ್ಲಿ ಹೇಗೆ ಕಟ್ಟಿಹಾಕಲಿ ಈ ನನ್ನ ಗೆಳೆಯನ ಗೆಳೆತನವನ್ನು.
ನನ್ನ ಕಷ್ಟ ಕಾಲದಲ್ಲಿ ಸ್ನೇಹವೆಂಬ ವಜ್ರದ ರಕ್ಷಾ ಕವಚ ನೀಡಿದವನು ನನ್ನ ಗೆಳೆಯ.
ಗೆಳೆತನದಲ್ಲಿ ಸ್ವಾರ್ಥ ಬಯಸದೆ ಸದಾ ನನ್ನ ಬೆನ್ನ ಹಿಂದೆ ನೆರಳಾಗಿ ನಿಂತವನು ನನ್ನ ಗೆಳೆಯ.
ನಮ್ಮ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಸ್ನೇಹಕ್ಕೆ ಸಾಕ್ಷಿಯಾದವನು ನನ್ನ ಗೆಳೆಯ.
ಬಡವರ ಬಂಧು ನೀನು.
ಬಡವ, ಬಲ್ಲಿದರ ಆದರ್ಶ ನಾಯಕ ನೀನು.
ಕಷ್ಟದಲ್ಲಿರುವ ಜನರ ರಕ್ಷಕ ನೀನು.
ಜನ ನಾಯಕನಾಗಿ ಜನರ ಮನದಾಳದಲ್ಲಿ ಬೇರೂರಿದ ನಾಯಕ ನೀನು.
ಆಕಾಶದಲ್ಲಿನ ಸಹಸ್ರಾರು ತಾರೆಗಳಲ್ಲಿನ ದೃವ ತಾರೆ ನೀನು.
ಇವನೇ ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು..
ಆ ಭಗವಂತನು ನಿನಗೆ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ರಾಜಕೀಯ ಜೀವನದಲ್ಲಿ ಮೇಲೆತ್ತರಕ್ಕೆ ಬೆಳೆದು, ಅತ್ಯುನ್ನತ ಸ್ಥಾನ ದೊರಕಲಿ, ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೆ ಆಚರಿಸಿಕೊಳ್ಳುವ ಭಾಗ್ಯ ನಮ್ಮದಾಗಲಿ, ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಎಂದು ಆಶಿಸುತ್ತಾ..
ಇದೋ ನಿನಗೆ ಮತ್ತೊಮ್ಮೆ ಮನಪೂರ್ವಕವಾಗಿ ನಿನ್ನ ಪ್ರಾಣ
ಸ್ನೇಹಿತ ಕೋರುತ್ತಿರುವ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ..
ನಿನ್ನ ನಲ್ಮೆಯ ಜೀವದ ಗೆಳೆಯ
-ಗಾಲಿ ಜನಾರ್ಧನ್  ರೆಡ್ಡಿ.

Follow Us:
Download App:
  • android
  • ios