Asianet Suvarna News Asianet Suvarna News

ಡಿಕೆಶಿ, ಸಿದ್ದು ಪರಸ್ಪರ ಯಾವಾಗ ಚುಚ್ಚಿಕೊಳ್ತಾರೋ?: ಈಶ್ವರಪ್ಪ

ಸಿದ್ದ​ರಾ​ಮಯ್ಯ ಕೆಲ ಬಾರಿ ಹೈಕಮಾಂಡ್‌ ಸೂಚಿಸಿದ ಕಡೆ ಸ್ಪರ್ಧಿಸು​ತ್ತೇ​ನೆ ಎನ್ನುತ್ತಾರೆ. ಹಾಗಿದ್ದರೆ, ಕೋಲಾರದಲ್ಲಿ ನಿಲ್ಲಲು ಅವ​ರಿ​ಗೆ ಹೈಕಮಾಂಡ್‌ ಹೇಳಿತ್ತಾ? ಅವರು ಬಾದಾ​ಮಿ​ಯಲ್ಲಿ ಸೋಲುವ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅವ​ರನ್ನು ಇದೀಗ ಅಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌​ನ ಒಳಗಿರುವವರೇ ಸೋಲಿಸಲಿದ್ದಾ​ರೆ: ಈಶ್ವರಪ್ಪ

Former Minister KS Eshwarappa Slams DK Shivakumar and Siddaramaiah  grg
Author
First Published Mar 3, 2023, 2:51 PM IST | Last Updated Mar 3, 2023, 2:51 PM IST

ಚಾಮರಾಜನಗರ(ಮಾ.03): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿ​ಪಕ್ಷ ನಾಯ​ಕ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ​ ಹೇಳಿದರು ಎಂಬ ಕಾರ​ಣಕ್ಕಷ್ಟೇ ಪರ​ಸ್ಪರ ತಬ್ಬಿ​ಕೊ​ಳ್ಳು​ತ್ತಾ​ರೆ. ಆದರೆ, ಇಬ್ಬರ ಕೈಯಲ್ಲೂ ಚಾಕು ಇದೆ. ಯಾವಾಗ ಪರಸ್ಪರ ಚುಚ್ಚಿಕೊಳ್ಳುತ್ತಾರೋ ಗೊತ್ತಿ​ಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು. 

ನಗ​ರ​ದಲ್ಲಿ ಗುರು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ, ಸಿದ್ದ​ರಾ​ಮಯ್ಯ ಅವರು ಕೆಲ ಬಾರಿ ಹೈಕಮಾಂಡ್‌ ಸೂಚಿಸಿದ ಕಡೆ ಸ್ಪರ್ಧಿಸು​ತ್ತೇ​ನೆ ಎನ್ನುತ್ತಾರೆ. ಹಾಗಿದ್ದರೆ, ಕೋಲಾರದಲ್ಲಿ ನಿಲ್ಲಲು ಅವ​ರಿ​ಗೆ ಹೈಕಮಾಂಡ್‌ ಹೇಳಿತ್ತಾ? ಅವರು ಬಾದಾ​ಮಿ​ಯಲ್ಲಿ ಸೋಲುವ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅವ​ರನ್ನು ಇದೀಗ ಅಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌​ನ ಒಳಗಿರುವವರೇ ಸೋಲಿಸಲಿದ್ದಾ​ರೆ ಎಂದರು. 

ಬೇಡಗಂಪಣ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾ​ಯಿ

ಈ ಹಿಂದೆ ಮುಖ್ಯಮಂತ್ರಿ ಸ್ಥಾನ​ಕ್ಕೆ ಪ್ರತಿಸ್ಪರ್ಧಿ ಎಂದು ಜಿ.ಪರಮೇಶ್ವರ್‌ರನ್ನು ಸೋಲಿಸಿದರೆ, ತಮ್ಮ ಆಪ್ತ ರಮೇಶ್‌ ಕುಮಾರ್‌ ಮೂಲಕ ಮುನಿಯಪ್ಪರಿಗೆ ಸೋಲಿನ ರುಚಿ​ಕಾ​ಣಿ​ಸಿ​ದ​ರು. ​ಮ​ತ್ತೊಂದು ಕಡೆ ಒಕ್ಕಲಿಗರು, ದಲಿತರು ಸಿದ್ದರಾಮಯ್ಯಗೆ ಪಾಠ ಕಲಿ​ಸಲು ಕಾಯುತ್ತಿದ್ದಾರೆ. ಈ ಎರಡು ಸಮುದಾಯದವರು ಕೈಬಿಟ್ಟಿರುವ ಹಿನ್ನೆ​ಲೆ​ಯಲ್ಲಿ ಸಿದ್ದ​ರಾ​ಮಯ್ಯ ಮುಸ್ಲಿಂ ಓಲೈ​ಕೆಗೆ ಮುಂದಾ​ಗಿ​ದ್ದಾ​ರೆ ಎಂದು ಹೇಳಿದರು.

ಸಿದ್ದರಾಮಯ್ಯ ಮಿಮಿಕ್ರಿ ಆರ್ಟಿಸ್ಟ್‌ ಆಗಬೇಕಿತ್ತು. ಪ್ರಧಾನಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅವ​ರಿಗೆ ಏಕವಚನದಲ್ಲಿ ವಾಗ್ದಾಳಿ ನಡೆ​ಸು​ತ್ತಾರೆ. ರಾಜ್ಯದ ಯಾವುದೇ ಕ್ಷೇತ್ರ​ದಲ್ಲಿ ನಿಂತರೂ ಗೆಲ್ಲುತ್ತೇನೆ ಅನ್ನುತ್ತಾರೆ. ಹಾಗಿದ್ದವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ ಈಶ್ವ​ರಪ್ಪ, ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡವರನ್ನು ನಾಯಕ ಎಂದು ಹೇಗೆ ಕರೆಯು​ತ್ತಾರೆ ಎಂದು ಕಿಡಿ​ಕಾ​ರಿ​ದ​ರು.

ಅನಾರೋಗ್ಯದಿಂದ ಸೋಮಣ್ಣ ಗೈರು: ಈಶ್ವ​ರಪ್ಪ ಸ್ಪಷ್ಟ​ನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ವಿಜಯಸಂಕಲ್ಪ ಯಾತ್ರೆಗೆ ಗೈರಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಸ್ಪಷ್ಟನೆ ನೀಡಿ​ದ್ದಾ​ರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಅನಾರೋಗ್ಯದಿಂದಾಗಿ ಕ್ಷೇತ್ರದಲ್ಲೇ ಉಳಿದುಕೊಂಡಿ​ದ್ದಾ​ರೆ. ನಾನು ಕೂಡ ಯಡಿಯೂರಪ್ಪ ಅವ​ರ ಅನೇಕ ಕಾರ್ಯಕ್ರಮಕ್ಕೆ ಹೋಗಿಲ್ಲ. ಅದನ್ನೂ ಮುಸುಕಿನ ಗುದ್ದಾಟ ಎಂದು ಹೇಳಲು ಆಗುತ್ತಾ? ಅನಾರೋಗ್ಯದ ಕಾರಣದಿಂದ ಸೋಮಣ್ಣ ಕಾರ್ಯ​ಕ್ರ​ಮಕ್ಕೆ ಬಂದಿಲ್ಲ ಅಷ್ಟೆ ಎಂದು ಸ್ವಷ್ಟಪಡಿಸಿದರು.

Latest Videos
Follow Us:
Download App:
  • android
  • ios